ರಾಯಚೂರು: ದೇವದುರ್ಗದ ಬಿ.ಗಣೇಕಲ್ ಗ್ರಾಮದ ಕ್ವಾರಂಟೈನ್ ಕೇಂದ್ರದಲ್ಲಿರುವ ಜನರಿಗೆ ಇಂದು (ಶುಕ್ರವಾರ) ಹೋಳಿಗೆಯೂಟ ಬಡಿಸಲಾಗಿದೆ. ಕೆಲವೆಡೆ ಕ್ವಾರಂಟೈನ್ಗಳು ಅವ್ಯವಸ್ಥೆಯಿಂದ ಕೂಡಿವೆ ಎಂಬ ಆರೋಪದ ನಡುವೆಯೂ ಇಲ್ಲಿನ ಗ್ರಾಪಂ ಸಿಹಿಯೂಟ ವ್ಯವಸ್ಥೆ ಮಾಡಿ ಮೆಚ್ಚುಗೆ ಗಳಿಸಿದೆ.
ಇದನ್ನೂ ಓದಿರಿ ಪೇದೆಗೆ ಕರೊನಾ ಸೋಂಕು, ಪಿಜಿಗೆ ಡ್ರಾಪ್ ಪಡೆದ ಮಹಿಳಾ ಪೇದೆಗೂ ಸಂಕಷ್ಟ!
ಶುಕ್ರವಾರ ಅಮಾವಸ್ಯೆ. ಹಾಗಾಗಿ ತಾಲೂಕು ಆಡಳಿತದ ಅನುಮತಿ ಮೇರೆಗೆ ಇಲ್ಲಿನ ಗ್ರಾಮ ಪಂಚಾಯಿತಿಯು ಗ್ರಾಮಸ್ಥರ ಸಹಕಾರದೊಂದಿಗೆ ಮಧ್ಯಾಹ್ನ ಹೋಳಿಗೆಯೂಟ, ಜತೆಗೆ ಮಾವಿನ ಹಣ್ಣಿನ ಸೀಕರಣೆ ಬಡಿಸಿದೆ.
ಬೇರೆ ರಾಜ್ಯದಿಂದ ಬಂದು ಕ್ವಾರಂಟೈನ್ನಲ್ಲಿರುವ 52 ಜನರಿಗೆ ಮನೆಯ ಮಾದರಿಯಲ್ಲಿ ಸಿಹಿಯೂಟ ವ್ಯವಸ್ಥೆ ಮಾಡಿದ್ದಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ನಿತ್ಯ ಬೆಳಗ್ಗೆ ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿ ಅನ್ನ ಸಾಂಬಾರು ನೀಡಲಾಗುತಿತ್ತು.
ಇದನ್ನೂ ಓದಿರಿ ಐಸಿಎಸ್ಇ ಮತ್ತು ಐಎಸ್ಸಿ ಪರೀಕ್ಷೆಗಳ ವೇಳಾಪಟ್ಟಿ ಪ್ರಕಟ