More

    ಹಣ ದುರ್ಬಳಕೆ ಆದ ದಾಖಲೆ ಇಲ್ಲ: ಸುಶಾಂತ್​ ಪರ ವಕೀಲ

    ಮುಂಬೈ: ಸುಶಾಂತ್​ ಸಿಂಗ್​ ರಜಪೂತ್​ ಅವರ ಹಣ ದುರ್ಬಳಕೆಯಾದ ಯಾವುದೇ ದಾಖಲೆಗಳು ಸಿಕ್ಕಿಲ್ಲ ಎಂದು ಇತ್ತೀಚೆಗಷ್ಟೇ ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ಹೇಳಿದ್ದರು. ಈಗ ಸುಶಾಂತ್​ ಸಿಂಗ್​ ರಜಪೂತ್​ ಪರ ವಕೀಲ ವಿಕಾಸ್​ ಸಿಂಗ್​ ಸಹ ಇದೇ ಮಾತನ್ನು ಹೇಳಿದ್ದಾರೆ.

    ಇದನ್ನೂ ಓದಿ: ಸಿನಿಮಾದಲ್ಲಿ ಚಾನ್ಸ್​ ಕೊಡಿಸ್ತೀನಿ ಎಂದವ 50ಕ್ಕೂ ಹೆಚ್ಚು ಮಹಿಳೆಯರಿಗೆ ವಂಚಿಸಿ ಪರಾರಿ!

    ಇದಕ್ಕೂ ಮುನ್ನ, ಕೆ.ಕೆ. ಸಿಂಗ್​ ಅವರು ತಮ್ಮ ಮಗ ಸುಶಾಂತ್​ ದುಡಿದ ಹಣ ದುರ್ಬಳಕೆಯಾಗಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದರು. ಅದರಲ್ಲೂ ಸುಶಾಂತ್​ ಗೆಳತಿ ರಿಯಾ ಬಗ್ಗೆ ಅವರು ಸಂಶಯ ವ್ಯಕ್ತಪಡಿಸಿದ್ದರು. ಈ ಸಂಬಂಧ ಅವರು ದೂರು ದಾಖಲಿಸಿದ್ದರು. ಈ ಸಂಬಂಧ ಇಡಿ ಅಧಿಕಾರಿಗಳು ತನಿಖೆ ಪ್ರಾರಂಭಿಸಿದ್ದರು. ಸಾಕಷ್ಟು ವಿಚಾರಣೆ ಮತ್ತು ತನಿಖೆಯ ನಂತರ, ಸುಶಾಂತ್​ ಹಣವನ್ನು ರಿಯಾ ದುರ್ಬಳಕೆ ಮಾಡಿಕೊಂಡ ಯಾವುದೇ ದಾಖಲೆ ಇಲ್ಲ ಎಂದು ಹೇಳಿದ್ದರು.

    ಈ ಸಂಬಂಧ ಮಾತನಾಡಿರುವ ವಿಕಾಸ್​ ಸಿಂಗ್​, ‘ಸುಶಾಂತ್​ ಅವರ ಹಣಕಾಸಿನ ವಿಷಯದ ಬಗ್ಗೆ ಅವರ ಕುಟುಂಬದವರಿಗೆ ಯಾವುದೇ ಮಾಹಿತಿ ಇರಲಿಲ್ಲ. ಏಕೆಂದರೆ, ಅವರು ಮೊದಲಿನಿಂದಲೂ ಆ ವಿಷಯದ ಬಗ್ಗೆ ತಲೆ ಹಾಕಿರಲಿಲ್ಲ. ಆದರೆ, ರಿಯಾ ಸುಶಾಂತ್​ ಅವರನ್ನು ಕುಟುಂಬದವರಿಂದ ದೂರ ಮಾಡಿದ್ದನ್ನು ನೋಡಿ ಮನೆಯವರಿಗೆ ಅವರ ಮೇಲೆ ಸಂಶಯವಿತ್ತು. ಇದಕ್ಕಿದ್ದಂತೆ ಸುಶಾಂತ್​ ಅವರ ಸಿಎ ಬದಲಾದರು. ಒಂದಿಷ್ಟು ಅನುಮಾನಾಸ್ಪದ ಚಟುವಟಿಕೆಗಳು ನಡೆದಿದ್ದರಿಂದ ಸಹಜವಾಗಿಯೇ ಮನೆಯವರು ಸುಶಾಂತ್​ ಹಣ ದುರ್ಬಳಕೆಯಾಗಿರುವ ಸಾಧ್ಯತೆ ಇರಬಹುದು ಎಂದು ನಂಬಿದ್ದರು’ ಎಂದು ಹೇಳಿದ್ದಾರೆ.

    ಇದನ್ನೂ ಓದಿ: VIDEO| ಜಾನಿ ಜಾನಿ ಯೆಸ್​ ಪಪ್ಪಾ.. ಅಪ್ಪ ಯಶ್​ ಹಾಡಿಗೆ ಪುತ್ರನ ಹ್ಹ ಹ್ಹ ಹ್ಹ…

    ಸದ್ಯದ ಮಟ್ಟಿಗೆ ಸುಶಾಂತ್​ ಹಣದಲ್ಲಿ ಯಾವುದೇ ಅವ್ಯವಹಾರ ಆದ ದಾಖಲೆಗಳು ಇಡಿಯವರಿಗೆ ಸಿಕ್ಕಿಲ್ಲ ಎಂದಿರುವ ವಿಕಾಸ್​ ಸಿಂಗ್​, ‘ಸುಶಾಂತ್​ ತಾವು ದುಡಿದ ಹಣದಲ್ಲಿ ಏನು ಮಾಡುತ್ತಿದ್ದರು, ಎಷ್ಟು ಉಳಿಸಿದ್ದರು ಎಂಬುದು ಅವರ ಮನೆಯವರಿಗೆ ಗೊತ್ತಿಲ್ಲ. ಹಾಗಾಗಿ 15 ಕೋಟಿಯಷ್ಟು ಹಣವನ್ನು ಸುಶಾಂತ್​ ಅಕೌಂಟ್​ನಿಂದ ತೆಗೆಯಲಾಗಿದೆ ಎಂದು ಹೇಳಿದ್ದರು. ಬಹುಶಃ ತಪ್ಪುಕಲ್ಪನೆಯಿಂದ ಇಷ್ಟೆಲ್ಲಾ ಆಗಿದೆ. ಮುಂದಿನ ದಿನಗಳಲ್ಲಿ ಇಡಿ ಅಧಿಕಾರಿಗಳು ಈ ಬಗ್ಗೆ ಸಂಪೂರ್ಣ ವರದಿ ಕೊಡಲಿದೆ’ ಎಂದು ಹೇಳಿದ್ದಾರೆ.

    VIDEO| ಚಿನ್ನದ ನಾಣ್ಯದಲ್ಲಿ ಬಂಗಾರದ ಮನುಷ್ಯ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts