ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಬಾಲಿವುಡ್ನ ಘಟಾನುಘಟಿಗಳ ವಿಚಾರಣೆ ಒಂದೆಡೆ ನಡೆದರೆ, ಮಂಗಳವಾರವಷ್ಟೇ ಸುಶಾಂತ್ ಪ್ರೇಯಸಿ ರಿಯಾ ವಿರುದ್ಧ ಪಾಟ್ನಾದಲ್ಲಿ ಎಫ್ಐಆರ್ ದಾಖಲಾಗಿದೆ. ಈ ನಡುವೆ ಸುಶಾಂತ್ ಅವರ ಮುಂದಿನ ಯೋಜನೆಗಳೇನಿದ್ದವು? ಎಂಬ ಬಗ್ಗೆ ಸುಶಾಂತ್ ಸಿಂಗ್ ಕುಟುಂಬದ ಪರ ವಕೀಲ ವಿಕಾಸ್ ಸಿಂಗ್ ಮಾಹಿತಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ‘ಕೆಜಿಎಫ್ ಚಾಪ್ಟರ್ 2’ ಖಳ ಸಂಜಯ್ ದತ್ ಲುಕ್ ಬಹಿರಂಗ..
ಸುಶಾಂತ್ ಸಿಂಗ್ ಬಾಲಿವುಡ್ ಸಿನಿಮಾ ಕ್ಷೇತ್ರಕ್ಕೆ ಗುಡ್ಬೈ ಹೇಳಿ ಕರ್ನಾಟಕದ ಮಡಿಕೇರಿಯಲ್ಲಿ ಜಮೀನು ಪಡೆದು ಕೃಷಿಯತ್ತ ಗಮನ ಹರಸುವ ಮನಸ್ಸು ಮಾಡಿದ್ದರು. ಸ್ನೇಹಿತ ಮಹೇಶ್ ಜತೆ ಸೇರಿಕೊಂಡು ಸಾವಯವ ಕೃಷಿ ಮಾಡಬೇಕೆಂದುಕೊಂಡಿದ್ದರು. ಈ ವಿಚಾರ ಕುಟುಂಬದವರಿಗೂ ಗೊತ್ತಿತ್ತು. ರಿಯಾ ಬಳಿಯೂ ಹೇಳಿಕೊಂಡಿದ್ದರು ಸುಶಾಂತ್. ಆದರೆ, ಆ ಆಸೆ ಮಾತ್ರ ಈಡೇರಲಿಲ್ಲ.
ಸುಶಾಂತ್ ಕೃಷಿ ಮಾಡುವುದರ ಕಡೆ ಹೊರಳುತ್ತಿದ್ದಾನೆ ಎಂಬುದು ಯಾವಾಗ ರಿಯಾಗೆ ಗೊತ್ತಾಯಿತೋ, ಆವತ್ತಿನಿಂದ ಅವರನ್ನು ಕಡೆಗಣನೆ ಮಾಡುತ್ತ ಹೋದರು. ಅಷ್ಟೇ ಅಲ್ಲ ಸುಶಾಂತ್ಗೆ ತಂದೆಯನ್ನು ಭೇಟಿ ಮಾಡಲು ಅವಕಾಶ ಕೊಡುತ್ತಿರಲಿಲ್ಲ. ಅನೇಕ ಸಂದರ್ಭದಲ್ಲಿ ತನ್ನ ಮಗನನ್ನು ನೋಡಲು ಸುಶಾಂತ್ ತಂದೆ ಪ್ರಯತ್ನಿಸಿದ್ದರಾದರೂ, ಬಾಡಿಗಾರ್ಡ್ ಮೂಲಕ ಅವರನ್ನು ತಡೆಯುತ್ತಿದ್ದಳು ರಿಯಾ.
ಇದನ್ನೂ ಓದಿ: ರಿಯಲ್ ಎಸ್ಟೇಟ್ ಹಗರಣದಲ್ಲಿ ನಯನತಾರಾ, ರಮ್ಯಾ ಕೃಷ್ಣನ್, ಅಂಜಲಿ ತೆಂಡೂಲ್ಕರ್ ಹೆಸರು: ಕೋಟಿಗಟ್ಟಲೇ ಹಣ ವಂಚನೆ!
ಒಂದು ವೇಳೆ ಆತ ಕುಟುಂಬದಿಂದ ದೂರ ಉಳಿಯದೇ ಇದ್ದಿದ್ದರೆ, ಇಂದು ಸುಶಾಂತ್ಗೆ ಈ ಗತಿ ಬರುತ್ತಿರಲಿಲ್ಲ. ಅನೇಕ ದಿನಗಳವರೆಗೆ ಸಂಚು ರೂಪಿಸಿ, ತಮ್ಮ ಕಾರ್ಯಯೋಜನೆಯನ್ನು ಸಂಪೂರ್ಣಗೊಳಿಸಿದ್ದಾರೆ. ಇದು ಕೊಲೆಯಲ್ಲ. ಆದರೆ, ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆ ಎಂದು ಆಪಾದನೆ ಮಾಡಿದ್ದಾರೆ ಸುಶಾಂತ್ ಪರ ವಕೀಲ ವಿಕಾಸ್ ಸಿಂಗ್. (ಏಜೆನ್ಸೀಸ್)
ರಿಯಾ ಕಂಟ್ರೋಲ್ನಲ್ಲಿ ಸುಶಾಂತ್, 15 ಕೋಟಿ ರೂ. ರಹಸ್ಯ ಜತೆಗೆ ಸ್ಪೋಟಕ ಮಾಹಿತಿ ಬಿಚ್ಚಿಟ್ಟ ಫ್ಯಾಮಿಲಿ ಲಾಯರ್!