More

    ನಿರ್ಮಾಪಕ ಎಂ.ಎನ್​. ಕುಮಾರ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಮುಂದಾದ ನಟ ಸುದೀಪ್​

    ಬೆಂಗಳೂರು: ಕಳೆದ ಕೆಲವು ದಿನಗಳಿಂದ ಸ್ಯಾಂಡಲ್​​ವುಡ್​​ ನಟ ಕಿಚ್ಚ ಸುದೀಪ್ ಮತ್ತು ನಿರ್ಮಾಪಕ ಎಂ.ಎನ್​. ಕುಮಾರ್ ನಡುವೆ ನಡೆಯುತ್ತಿದ್ದ ಆರೋಪ-ಪ್ರತ್ಯಾರೋಪಗಳ ಬೆನ್ನಲ್ಲೇ ಇದೀಗ ಸುದೀಪ್​ ಎಸಿಎಮ್ಎಮ್ ಕೋರ್ಟ್​​ಗೆ ಹಾಜರಾಗಿದ್ದು, ಕುಮಾರ್ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಲು ಸಜ್ಜಾಗಿದ್ದಾರೆ.

    ಇದನ್ನೂ ಓದಿ: ಸೈಬರ್ ಕ್ರೈಂ ಆರೋಪದ ಮೇಲೆ ಬಂಧನ; ವಶಪಡಿಸಿಕೊಂಡದ್ದು ಬರೋಬ್ಬರಿ 521 ATM ಕಾರ್ಡ್‍ಗಳನ್ನು!

    ಇಂದು ಎಸಿಎಮ್ಎಮ್ ನ್ಯಾಯಾಲಯಕ್ಕೆ ಹಾಜರಾಗಲಿರುವ ನಟ ಕಿಚ್ಚ ಸುದೀಪ್, ನಿರ್ಮಾಪಕ ಎನ್. ಕುಮಾರ್ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಲಿದ್ದಾರೆ. ಈಗಾಗಲೇ 10 ದಿನ ಗಡುವು ನೀಡಿದ್ದ ಸುದೀಪ್​, ಕುಮಾರ್​ ಅವರಿಗೆ ಲೀಗಲ್ ನೋಟಿಸ್ ಕೂಡ​​ ನೀಡಿದ್ದರು.

    ಬಹಿರಂಗ ಕ್ಷಮಾಯಾಚನೆಗೆ ನೋಟಿಸ್ ನೀಡಿದ್ದ ಸುದೀಪ್ ಅವರಿಗೆ ಕುಮಾರ್ ಉತ್ತರಿಸದ ಕಾರಣ, ಇದೀಗ ನಿರ್ಮಾಪಕನ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಲು ಮುಂದಾಗಿದ್ದಾರೆ.

    ಸೈಬರ್ ಕ್ರೈಂ ಆರೋಪದ ಮೇಲೆ ಬಂಧನ; ವಶಪಡಿಸಿಕೊಂಡದ್ದು ಬರೋಬ್ಬರಿ 521 ATM ಕಾರ್ಡ್‍ಗಳನ್ನು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts