ಬೆಂಗಳೂರು: ಕಳೆದ ಕೆಲವು ದಿನಗಳಿಂದ ಸ್ಯಾಂಡಲ್ವುಡ್ ನಟ ಕಿಚ್ಚ ಸುದೀಪ್ ಮತ್ತು ನಿರ್ಮಾಪಕ ಎಂ.ಎನ್. ಕುಮಾರ್ ನಡುವೆ ನಡೆಯುತ್ತಿದ್ದ ಆರೋಪ-ಪ್ರತ್ಯಾರೋಪಗಳ ಬೆನ್ನಲ್ಲೇ ಇದೀಗ ಸುದೀಪ್ ಎಸಿಎಮ್ಎಮ್ ಕೋರ್ಟ್ಗೆ ಹಾಜರಾಗಿದ್ದು, ಕುಮಾರ್ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಲು ಸಜ್ಜಾಗಿದ್ದಾರೆ.
ಇದನ್ನೂ ಓದಿ: ಸೈಬರ್ ಕ್ರೈಂ ಆರೋಪದ ಮೇಲೆ ಬಂಧನ; ವಶಪಡಿಸಿಕೊಂಡದ್ದು ಬರೋಬ್ಬರಿ 521 ATM ಕಾರ್ಡ್ಗಳನ್ನು!
ಇಂದು ಎಸಿಎಮ್ಎಮ್ ನ್ಯಾಯಾಲಯಕ್ಕೆ ಹಾಜರಾಗಲಿರುವ ನಟ ಕಿಚ್ಚ ಸುದೀಪ್, ನಿರ್ಮಾಪಕ ಎನ್. ಕುಮಾರ್ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಲಿದ್ದಾರೆ. ಈಗಾಗಲೇ 10 ದಿನ ಗಡುವು ನೀಡಿದ್ದ ಸುದೀಪ್, ಕುಮಾರ್ ಅವರಿಗೆ ಲೀಗಲ್ ನೋಟಿಸ್ ಕೂಡ ನೀಡಿದ್ದರು.
ಬಹಿರಂಗ ಕ್ಷಮಾಯಾಚನೆಗೆ ನೋಟಿಸ್ ನೀಡಿದ್ದ ಸುದೀಪ್ ಅವರಿಗೆ ಕುಮಾರ್ ಉತ್ತರಿಸದ ಕಾರಣ, ಇದೀಗ ನಿರ್ಮಾಪಕನ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಲು ಮುಂದಾಗಿದ್ದಾರೆ.
ಸೈಬರ್ ಕ್ರೈಂ ಆರೋಪದ ಮೇಲೆ ಬಂಧನ; ವಶಪಡಿಸಿಕೊಂಡದ್ದು ಬರೋಬ್ಬರಿ 521 ATM ಕಾರ್ಡ್ಗಳನ್ನು!