More

    ಸುದೀಪ್​ ಮತ್ತು ಇಂದ್ರಜಿತ್​ ಒಟ್ಟಿಗೆ ಸಿದ್ಧಗಂಗಾ ಮಠಕ್ಕೆ ಭೇಟಿ!; ಇದರ ಹಿಂದಿನ ಮರ್ಮವೇನು?

    ಡ್ರಗ್ಸ್ ವಿಚಾರವಾಗಿ ಸ್ಯಾಂಡಲ್​ವುಡ್​ನಲ್ಲಿ ಸಾಕಷ್ಟು ಬೆಳವಣಿಗೆಗಲಾಗುತ್ತಿವೆ. ನಿರ್ದೇಶಕ ಇಂದ್ರಜಿತ್​ ಲಂಕೇಶ್​ ಚಂದನವನದಲ್ಲೂ ಡ್ರಗ್ಸ್ ದಂಧೆ ನಡೆಯುತ್ತಿದೆ ಎಂದು ಆರೋಪ ಮಾಡಿದ್ದು, ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಇದೆಲ್ಲದರ ಬೆನ್ನಲ್ಲೆ ಇಂದ್ರಜಿತ್​ ಲಂಕೇಶ್​ ತುಮಕೂರಿನ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ್ದಾರೆ. ಅಚ್ಚರಿಯ ವಿಚಾರ ಏನೆಂದರೆ, ಅವರೊಂದಿಗೆ ಕಿಚ್ಚ ಸುದೀಪ್​ ಸಹ ಇದ್ದಾರೆ.

    ಇದನ್ನೂ ಓದಿ: Photos: ಬರ್ತ್​ಡೇ ಸಂಭ್ರಮದಲ್ಲಿ ಸ್ಯಾಂಡಲ್​ವುಡ್​ ಅವಳಿ ಸಹೋದರಿಯರು…

    ಮಠಕ್ಕೆ ಆಗಮಿಸುತ್ತಿದ್ದಂತೆ ಶ್ರೀಗಳ ದರ್ಶನ ಪಡೆದ ಸುದೀಪ್​ ಮತ್ತು ಇಂದ್ರಜಿತ್​, ಬಳಿಕ ಶ್ರೀಗಳಿಂದ ಸನ್ಮಾನವನ್ನೂ ಸ್ವೀಕರಿಸಿದರು. ಆದರೆ, ಇಬ್ಬರು ಒಟ್ಟಿಗೆ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ್ದರ ಹಿನ್ನೆಲೆ ಏನು? ಎಂಬ ಪ್ರಶ್ನೆಗೆ ಸದ್ಯಕ್ಕೆ ಉತ್ತರ ಸಿಕ್ಕಿಲ್ಲ. ಇನ್ನೊಂದು ಕಡೆ ಈ ಭೇಟಿ ಆಕಸ್ಮಿಕಾನಾ ಅಥವಾ ಮಾತನಾಡಿಕೊಂಡೇ ಬಂದಿದ್ದಾರಾ ಎಂಬುದು ಸದ್ಯದ ಕುತೂಹಲ.

    ಸಿದ್ದಗಂಗಾ ಮಠಕ್ಕೆ ನಟ ಸುದೀಪ್, ಇಂದ್ರಜಿತ್ ಲಂಕೇಶ್ ಭೇಟಿ | Sudeep, Indrajit Lankesh visits Siddaganga Mutt

    ಸಿದ್ದಗಂಗಾ ಮಠಕ್ಕೆ ನಟ ಸುದೀಪ್, ಇಂದ್ರಜಿತ್ ಲಂಕೇಶ್ ಭೇಟಿ, ಸ್ಯಾಂಡಲ್ ವುಡ್ ಡ್ರಗ್ ಮಾಫಿಯಾ ಬಗ್ಗೆ ಹೇಳಿದ್ದೇನು?#Sudeep #IndrajitLankesh #Visits #SiddagangaMutt

    Posted by Dighvijay News – ದಿಗ್ವಿಜಯ ನ್ಯೂಸ್ on Tuesday, September 1, 2020

    ಇನ್ನು ಕರೊನಾ ಹಾವಳಿಯಿಂದಾಗಿ ಹಲವು ಸ್ಟಾರ್ ನಟರು ಈ ವರ್ಷ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿಲ್ಲ. ಸುದೀಪ್ ಸಹ ಇದೇ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದು, ಅಭಿಮಾನಿಗಳ ಆರೋಗ್ಯದ ದೃಷ್ಟಿಯಿಂದ ಸೆ.2ರಂದು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳದಿರಲು ತೀರ್ಮಾನಿಸಿದ್ದಾರೆ. ಈ ಕುರಿತು ಸೋಷಿಯಲ್ ಮೀಡಿಯಾ ಮೂಲಕ ಸಂದೇಶ ಕಳಿಸಿರುವ ಅವರು, ಈ ಬಾರಿ ಹುಟ್ಟುಹಬ್ಬದ ಸಂಭ್ರಮ ಬೇಡ ಎಂದು ಹೇಳಿದ್ದಾರೆ.

    ಇದನ್ನೂ ಓದಿ: 1 ಪರ್ಸೆಂಟ್​ ಜನರಿಗೆ ಮಾತ್ರ ಅಂಥದ್ದೊಂದು ಪ್ರತಿಭೆ ಇದೆಯಂತೆ …

    ಅಷ್ಟೇ ಅಲ್ಲ, ಅಭಿಮಾನಿಗಳೆಲ್ಲಾ ಸುರಕ್ಷಿತವಾಗಿ ತಾವು ಇದ್ದಲ್ಲೇ ಶುಭಹಾರೈಸಿ ಎಂದು ಮನವಿ ಮಾಡಿದ್ದಾರೆ. ಸಾಧ್ಯವಿದ್ದರೆ, ಅಭಿಮಾನಿಗಳು ಇರುವ ಜಾಗದಲ್ಲೇ ಅಗತ್ಯವಿರುವವರಿಗೆ ಸಹಾಯ ಮಾಡುವುದಕ್ಕೆ ಕರೆ ನೀಡಿದ್ದಾರೆ. ಮುಂದೊಂದು ದಿನ ಇವೆಲ್ಲಾ ಮುಗಿದ ನಂತರ ಖಂಡಿತ ಭೇಟಿಯಾಗುವುದಾಗಿ ಹೇಳಿದ್ದಾರೆ.

    ಸುಶಾಂತ್​ ಕುಟುಂಬದವರ ಮೇಲೆ ಆಕ್ಷನ್​ ತಗೋತಾರಂತೆ ರಿಯಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts