More

    ಮೂರು ಚಿತ್ರಗಳಿಗೆ ಸುದೀಪ್​ ಗ್ರೀನ್​ ಸಿಗ್ನಲ್​; ಸದ್ಯದಲ್ಲೇ ಘೋಷಣೆ

    ಬೆಂಗಳೂರು: ಸುದೀಪ್​ ಅಭಿನಯದ ‘ವಿಕ್ರಾಂತ್​ ರೋಣ’ ಚಿತ್ರವು ಬಿಡುಗಡೆಯಾಗಿ ಎಂಟು ತಿಂಗಳುಗಳಾಗಿವೆ. ಈ ಎಂಟು ತಿಂಗಳುಗಳಲ್ಲಿ ಅವರು ಯಾವೊಂದು ಹೊಸ ಚಿತ್ರವನ್ನೂ ಒಪ್ಪಿಕೊಂಡಿಲ್ಲ. ‘ಬಿಗ್​ ಬಾಸ್​’, ಸಿಸಿಎಲ್​, ಕೆಸಿಸಿ ಎಂದು ಬಿಜಿಯಾಗಿದ್ದ ಸುದೀಪ್​, ಯಾವ ಚಿತ್ರವನ್ನು ಒಪ್ಪುತ್ತಾರೆ ಎಂಬ ಕುತೂಹಲ ಎಲ್ಲರಿಗೂ ಇತ್ತು. ಈಗ ಆ ಕುತೂಹಲಕ್ಕೆ ಕೊನೆಗೂ ತೆರೆ ಬಿದ್ದಿದೆ.

    ಇದನ್ನೂ ಓದಿ: ರಶ್ಮಿಕಾ ಮಂದಣ್ಣ-ವಿಜಯ್​ ದೇವರಕೊಂಡ ಬೇರೆಯಾಗಲು ಈ ನಟ ಕಾರಣವಂತೆ!?

    ಸುದೀಪ್​ ಈಗ ಒಂದಲ್ಲ, ಎರಡಲ್ಲ, ಮೂರು ಚಿತ್ರಗಳನ್ನು ಒಪ್ಪಿಕೊಂಡಿದ್ದಾರಂತೆ. ಹಾಗಂತ ಅವರೇ ಹೇಳಿಕೊಂಡಿದ್ದಾರೆ. ತಮ್ಮ ಮುಂದಿನ ಹೆಜ್ಜೆಯ ಬಗ್ಗೆ ಇದ್ದ ಹಲವು ಗೊಂದಲಗಳಿಗೆ ಸೋಷಿಯಲ್​ ಮೀಡಿಯಾದಲ್ಲಿ ಪತ್ರ ಬರೆಯುವ ಮೂಲಕ ತೆರೆ ಎಳೆದಿರುವ ಅವರು, ಆ ಪತ್ರದಲ್ಲಿ ಮೂರು ಚಿತ್ರಗಳಿಗೆ ಗ್ರೀನ್​ ಸಿಗ್ನಲ್​ ನೀಡಿರುವುದಾಗಿ ಹೇಳಿಕೊಂಡಿದ್ದಾರೆ.

    ಈ ಕುರಿತು ಬರೆದುಕೊಂಡಿರುವ ಅವರು, ”ವಿಕ್ರಾಂತ್​ ರೋಣ’ ನಂತರ ಒಂದು ದೊಡ್ಡ ಬ್ರೇಕ್​ ತೆಗೆದುಕೊಂಡಿದ್ದೆ ಮತ್ತು ಇದು ನನ್ನ ಮೊದಲ ದೊಡ್ಡ ಬ್ರೇಕ್​ ಆಗಿತ್ತು. ಕೋವಿಡ್​ ಸಮಯದಲ್ಲಿ ‘ವಿಕ್ರಾಂತ್​ ರೋಣ’ ಚಿತ್ರದ ಚಿತ್ರೀಕರಣ ಮಾಡುವುದು ಅಷ್ಟು ಸುಲಭವಾಗಿರಲಿಲ್ಲ. ಆ ನಂತರ ಓಟಿಟಿ ಮತ್ತು ಟಿವಿಯಲ್ಲಿ ಪ್ರಸಾರವಾದ ‘ಬಿಗ್​ ಬಾಸ್​’ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿದ್ದೆ. ಸತತ ಕೆಲಸಗಳಿಂದ ಸುಸ್ತಾಗಿದ್ದರಿಂದ ಒಂದು ಬ್ರೇಕ್​ ಪಡೆಯುವುದಕ್ಕೆ ಯೋಚಿಸಿದೆ. ಕ್ರಿಕೆಟ್​ ನನಗೆ ಅಂಥದ್ದೊಂದು ವಿಶ್ರಾಂತಿ ಮತ್ತು ಖುಷಿ ನೀಡುತ್ತದೆ. ಕೆಸಿಸಿ ಮತ್ತು ಕರ್ನಾಟಕ ಬುಲ್​ಡೋಜರ್ಸ್​ ಜತೆಗೆ ಒಂದಿಷ್ಟು ಸಮಯ ಕಳೆಯುವ ಅವಕಾಶ ಸಿಕ್ಕಿದ್ದು, ಈ ಸಮಯವನ್ನು ಬಹಳ ಎಂಜಾಯ್​ ಮಾಡಿದೆ’ ಎಂದು ಹೇಳಿಕೊಂಡಿದ್ದಾರೆ.

    ತಮ್ಮ ಯೋಜನೆಗಳ ಕುರಿತು ಬರೆದುಕೊಂಡಿರುವ ಅವರು, ‘ಈ ಮಧ್ಯೆ, ನನ್ನ ಮುಂದಿನ ಚಿತ್ರಗಳ ಕುರಿತಾದ ಚರ್ಚೆಗಳು ನಡೆಯುತ್ತಲೇ ಇತ್ತು ಮತ್ತು ಒಂದಿಷ್ಟು ಕಥೆಗಳನ್ನು ಕೇಳಿದ್ದೇನೆ. ಈ ಪೈಕಿ ಮೂರು ಕಥೆಗಳನ್ನು ಓಕೆ ಮಾಡಿದ್ದೇನೆ. ಈ ಚಿತ್ರಕ್ಕೆ ಸಾಕಷ್ಟು ಹೋಂವರ್ಕ್​ನ ಅವಶ್ಯಕತೆಗಳಿದ್ದು, ಸಾಕಷ್ಟು ತಯಾರಿಗಳು ನಡೆಯುತ್ತಿವೆ. ಈ ಮೂರೂ ತಂಡಗಳು ಹಗಲು-ರಾತ್ರಿ ಕೆಲಸ ಮಾಡುತ್ತಿದ್ದು, ಸದ್ಯದಲ್ಲೇ ಚಿತ್ರಗಳನ್ನು ಘೋಷಿಸಲಿವೆ’ ಎಂದು ಹೇಳಿದ್ದಾರೆ.

    ಇದನ್ನೂ ಓದಿ: ನಟಿ ನಗ್ಮಾ ಜತೆ ವಿವಾಹೇತರ ಸಂಬಂಧ ವದಂತಿ: ಕೊನೆಗೂ ಮೌನ ಮುರಿದ ನಟ ರವಿಕಿಶನ್​

    ಸುದೀಪ್​ ಅವರು ಮೂರು ಚಿತ್ರಗಳನ್ನು ಒಪ್ಪಿದ್ದು ಕೇಳಿ ಅವರ ಅಭಿಮಾನಿಗಳು ಸಂತೋಷಗೊಂಡಿದ್ದು, ಆ ಚಿತ್ರಗಳ ಘೋಷಣೆ ಯಾವಾಗ ಎಂದು ಕುತೂಹಲದಿಂದ ಕಾಯುತ್ತಿದ್ದಾರೆ.

    ಬೋಲ್ಡ್​ ಆಗಿ ನಟಿಸಿದ ಮಾತ್ರಕ್ಕೆ… ಅಸಭ್ಯ ಪ್ರಶ್ನೆ ಕೇಳಿದ ಯೂಟ್ಯೂಬರ್​ಗೆ ನಟಿ ತನಿಶಾ ಕುಪ್ಪಂಡ ಕ್ಲಾಸ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts