ಬೆಂಗಳೂರು: ಬ್ರಿಟನ್ನಲ್ಲಿ ಕರೊನಾ ಹಾವಳಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಬಿಗಿ ಕ್ರಮ ಕೈಗೊಂಡು ಎಲ್ಲ ರಾಜ್ಯಗಳಿಗೂ ಸೂಚನೆ ನೀಡಿರುವ ಬೆನ್ನಿಗೇ ರಾಜ್ಯ ಸರ್ಕಾರವೂ ಚುರುಕುಗೊಂಡು ಹಲವು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ಇದರ ಪ್ರಮುಖ ಅಂಗವಾಗಿ ಇಂಗ್ಲೆಂಡ್ ಹಾಗೂ ದುಬೈನಿಂದ ರಾಜ್ಯಕ್ಕೆ ಬಂದವರಿಗೆ ಟೆಸ್ಟ್ ಕಡ್ಡಾಯಗೊಳಿಸಿರುವ ರಾಜ್ಯ ಸರ್ಕಾರ, ಅವರನ್ನು ಹೋಮ್ ಕ್ವಾರಂಟೈನ್ ಅಥವಾ ಐಸೋಲೇಷನ್ಗೆ ಒಳಪಡಿಸಲಿಕ್ಕೂ ಮುಂದಾಗಿದೆ.
ಕೇಂದ್ರ ಸರ್ಕಾರದ ಸೂಚನೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಸುದ್ದಿಗೋಷ್ಠಿ ಕರೆದಿರುವ ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಈ ವಿಷಯವನ್ನು ತಿಳಿಸಿದ್ದಾರೆ. ಬ್ರಿಟನ್, ಯುಕೆಯಲ್ಲಿ ರೂಪಾಂತರಗೊಂಡ ಹೊಸ ಕರೊನಾ ವೈರಸ್ ಪತ್ತೆಯಾಗಿದೆ. ಇದು ಸೋಂಕನ್ನು ಹರಡುವ ಪ್ರಮಾಣವನ್ನು ಹೆಚ್ಚಾಗಿ ಹೊಂದಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಹೊರಡಿಸಿರುವ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ರಾಜ್ಯ ಸಿದ್ಧವಾಗಿದ್ದು, ವಿದೇಶದಿಂದ ಬಂದಿರುವವರ ಮೇಲೆ ವಿಶೇಷ ನಿಗಾ ವಹಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಬ್ರಿಟನ್ನಲ್ಲಿ ಕೋವಿಡ್ 19 ಕೇಸ್ ಹೆಚ್ಚಳ : ವಿಮಾನ ಯಾನ ತಾತ್ಕಲಿಕವಾಗಿ ರದ್ದುಗೊಳಿಸಿತು ಭಾರತ
ನಾಳೆಯಿಂದ ಯುಕೆಯಿಂದ ಬರುವ ವಿಮಾನಗಳನ್ನು ನಿಷೇಧ ಮಾಡಲಾಗಿದೆ. ಆದರೆ ಈಗಾಗಲೇ ಬ್ರಿಟಿಷ್ ಏರ್ವೇಸ್ 246, ಏರ್ ಇಂಡಿಯಾದಲ್ಲಿ 291 ಮಂದಿ ರಾಜ್ಯಕ್ಕೆ ಬಂದಿದ್ದಾರೆ. ಆ ಪೈಕಿ 138 ಮಂದಿಯಲ್ಲಿ ನೆಗಟಿವ್ ರಿಪೋರ್ಟ್ ಇಲ್ಲ. ಇವರ ಪತ್ತೆಗೆ ಕ್ರಮ ವಹಿಸಲಾಗಿದೆ. ಈಗಾಗಲೇ ಆಗಮಿಸುತ್ತಿರುವವರಿಗೆ ಎಲ್ಲ ಏರ್ಪೋರ್ಟ್ಗಳಲ್ಲಿ ಕಡ್ಡಾಯವಾಗಿ RT-PCR ಟೆಸ್ಟ್ ಮಾಡಿಸಬೇಕು. RT-PCRನಲ್ಲಿ ಪಾಸಿಟಿವ್ ಬಂದವರಿಗೆ ಕಡ್ಡಾಯವಾಗಿ ಕ್ವಾರಂಟೈನ್ ಅಥವಾ ಐಸೋಲೇಷನ್ ಮಾಡಬೇಕು. ನೆಗೆಟಿವ್ ಬಂದವರಿಗೆ 7 ದಿನಗಳ ಕಾಲ ಕಡ್ಡಾಯವಾಗಿ ಐಸೋಲೇಷನ್ ಇರಲಿದೆ. ನಾಳೆಯಿಂದ ವಿಮಾನ ನಿಲ್ದಾಣಗಳಲ್ಲಿ ಒಂದು ತಂಡ ಇರಲಿದೆ. ಯುಕೆ, ಇಂಗ್ಲೆಂಡ್ನಿಂದ ಬಂದವರಿಗೆ ಪಾಸಿಟಿವ್ ಬಂದರೆ ಒಂದು ವಾರ ಸಾಂಸ್ಥಿಕ ಕ್ವಾರಂಟೈನ್ ಇರಲಿದೆ ಎಂದು ಅವರು ಹೇಳಿದ್ದಾರೆ.
ಈ ಸುಧಾರಿತ ಕರೊನಾ ವೈರಸ್ ಬಗ್ಗೆ ಯಾರೂ ಭಯಪಡಬೇಕಾಗಿಲ್ಲ. ಆದರೆ ಮುಂಜಾಗ್ರತಾ ಕ್ರಮಗಳನ್ನು ಮರೆಯಬಾರದು. ಕಳೆದ 14 ದಿವಸಗಳಲ್ಲಿ ಯುಕೆ, ಇಂಗ್ಲೆಂಡ್ನಿಂದ ಬಂದವರು ಟೆಸ್ಟ್ ಮಾಡಿಸಿಕೊಳ್ಳಿ. ಇಂಗ್ಲೆಂಡ್, ಡೆನ್ಮಾರ್ಕ್, ಯುಕೆಯಿಂದ ಬಂದ ಪ್ರಯಾಣಿಕರು 7 ದಿನಗಳ ಕಾಲ ಸಾಂಸ್ಥಿಕ ಕ್ವಾರಂಟೈನ್ ಆಗಬೇಕಾದ್ದು ಕಡ್ಡಾಯ. ಪಾಸಿಟಿವ್ ಇರಲಿ ಬಿಡಲಿ, ವಿದೇಶದಿಂದ ಬಂದವರು ಕ್ವಾರಂಟೈನ್ ಕಡ್ಡಾಯ ಎಂದಿರುವ ಸಚಿವ ಸುಧಾಕರ್, ಲಾಕ್ಡೌನ್ ಬಗ್ಗೆ ತಿರ್ಮಾನ ಇನ್ನೂ ಆಗಿಲ್ಲ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ರೂಪಾಂತರಗೊಂಡ ವೈರಸ್ ಬಗ್ಗೆ ಪ್ಯಾನಿಕ್ ಆಗಬೇಡಿ, ಸರ್ಕಾರ ಅಲರ್ಟ್ ಆಗಿದೆ- ಕೇಂದ್ರ ಆರೋಗ್ಯ ಸಚಿವ
ಈ ವೈರಸ್ ಮುಚ್ಚಿದ ವಾತಾವಾರಣದಲ್ಲಿ ಹೆಚ್ಚು ಹರಡಲಿದೆ. ಆದರೆ ಹೊರಗಡೆ ಹೆಚ್ಚು ಹರಡುವುದಿಲ್ಲ. ಶಾಲೆಗಳ ಆರಂಭ ವಿಚಾರ ಹಾಗೂ ಉಳಿದ ಮುಂದಿನ ಕ್ರಮಗಳ ಬಗ್ಗೆ ಮತ್ತೊಮ್ಮೆ ಸಭೆ ನಡೆಸಲಾಗುವುದು. ಬಹಳಷ್ಟು ಮಂದಿ ಇತ್ತೀಚೆಗೆ ಕೋವಿಡ್-19 ಮಾರ್ಗಸೂಚಿ ಪಾಲಿಸುತ್ತಿಲ್ಲ. ಎಲ್ಲರೂ ಮಾಸ್ಕ್ ಧರಿಸಬೇಕು, ದೈಹಿಕ ಅಂತರ ಕಾಪಾಡಬೇಕು ಎಂದು ಆರೋಗ್ಯ ಸಚಿವರು ಮನವಿ ಮಾಡಿಕೊಂಡಿದ್ದಾರೆ.
20 ಮಂದಿ ಬರಬೇಕಾದ ಮದುವೆಗೆ ಬಂದದ್ದು 10 ಸಾವಿರ! ಈಗ ಈ ಕುತೂಹಲದ ಮದುವೆಯದ್ದೇ ಚರ್ಚೆ
ಇಲ್ಲಿ ನಿರ್ಮಾಣವಾಯ್ತು ನಟ ಸೋನು ಸೂದ್ ದೇವಾಲಯ: ನಿತ್ಯವೂ ಪೂಜೆ, ಆರತಿ
ಮನೆಗೆ ಕರೆಸಿಕೊಂಡು ಬಟ್ಟೆ ಬಿಚ್ಚಿಸುತ್ತಿದ್ದ! ಬಾಲಕನ ಮೇಲೆ ಬಾಲಕನಿಂದಲೇ ನಡೆಯುತ್ತಿತ್ತು ಲೈಂಗಿಕ ದೌರ್ಜನ್ಯ
ಜಗಳ ಮಾಡುವಾಗ ಮೆದುಳಿನಿಂದ ಶಬ್ದ ಬರುತ್ತಿದ್ದು, ಭಯವಾಗುತ್ತಿದೆ; ಪರಿಹಾರ ಏನು?