More

    ಪವನ್​ ಕಲ್ಯಾಣ್ ಮೇಲೆ ವೈಎಸ್​ಆರ್​ಸಿಪಿ ಕಾರ್ಯಕರ್ತರು ಬ್ಲೇಡ್​ನಿಂದ ಹಲ್ಲೆಗೆ ಮುಂದಾದಾಗ ರಕ್ಷಿಸಿದ ಸಿಬ್ಬಂದಿ: ಗಂಭೀರ ಆರೋಪ

    ವಿಜಯವಾಡ: ಚುನಾವಣೆ ಘೋಷಣೆ ಆಗುತ್ತಿದ್ದಂತೆಯೇ ಕಾಲಿಗೆ ಚಕ್ರಕಟ್ಟಿಕೊಂಡು ರಾಜ್ಯ ಸುತ್ತುತ್ತಿದ್ದಾರೆ ಜನಸೇನಾ ಅಧ್ಯಕ್ಷ ಹಾಗೂ ನಟ ಪವನ್ ಕಲ್ಯಾಣ್. ಲೋಕಸಭೆ ಮತ್ತು ಮುಂದಿನ ಆಂಧ್ರದ ವಿಧಾನಸಭೆ ಚುನಾವಣೆಗಾಗಿ ಅವರು ಭರ್ಜರಿ ಸಿದ್ಧತೆ ನಡೆಸಿದ್ದಾರೆ. ಹಗಲು ರಾತ್ರಿ ಪ್ರಚಾರದಲ್ಲಿ ತೊಡಗಿರುವ ಪವನ್ ಕಲ್ಯಾಣ್​ ಅಚ್ಚರಿಕೆ ಹೇಳಿಕೆ ನೀಡಿದ್ದಾರೆ.

    ಇದನ್ನೂ ಓದಿ: ಅರವಿಂದ್​ ಕ್ರೇಜಿವಾಲ್​ 2, ಸಂಜಯ್ ಸಿಂಗ್ 5, ಕವಿತಾ 6: ಎಲ್ಲರೂ ತಿಹಾರ್‌ ಜೈಲು ಪಾಲು!

    ಆಂಧ್ರಪ್ರದೇಶ 2024 ರ ಚುನಾವಣಾ ಪ್ರಚಾರದಲ್ಲಿ ಟಿಡಿಪಿ ಮತ್ತು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಪಿಠಾಪುರಂನಿಂದ ಸ್ಪರ್ಧಿಸುತ್ತಿರುವ ಪವನ್ ಕಲ್ಯಾಣ್ ಇತ್ತೀಚೆಗೆ ಚುನಾವಣಾ ಪ್ರಚಾರವನ್ನು ಪ್ರಾರಂಭಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳ ಹೆಸರಿನಲ್ಲಿ ಕೆಲವರು ಬ್ಲೇಡ್‌ನಿಂದ ಕತ್ತರಿಸುತ್ತಿದ್ದಾರೆ ಎಂಬ ಶಾಕಿಂಗ್ ಹೇಳಿಕೆ ನೀಡಿದ್ದಾರೆ.

    ಕೆಲವರು ಅನಾಮಿಕರು ತಳ್ಳಾಟದ ನಡುವೆ ಹರಿತ ಬ್ಲೇಡ್‌ಗಳಿಂದ ತನ್ನನ್ನು ಹಾಗೂ ಸಿಬ್ಬಂದಿಯನ್ನು ಕಟ್ ಮಾಡುತ್ತಿದ್ದಾರೆ ಆರೋಪಿಸಿದ್ದಾರೆ. ಈ ಕಾರಣದಿಂದ ಎಲ್ಲರೂ ಜಾಗೃತಿ ವಹಿಸಬೇಕು ಎಂದು ಪವನ್ ಕಲ್ಯಾಣ್​ ಎಚ್ಚರಿಕೆ ನೀಡಿದ್ದಾರೆ. ಕಾಕಿನಾಡದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅವರು ಮಾತನಾಡಿದರು. ಪವನ್ ಕಲ್ಯಾಣ್ ಅವರು ಜನಸೇನಾ-ಟಿಡಿಪಿ-ಬಿಜೆಪಿ ಮೈತ್ರಿಕೂಟದ ಜಂಟಿ ಅಭ್ಯರ್ಥಿಯಾಗಿ ಪಿಠಾಪುರದಿಂದ ಸ್ಪರ್ಧಿಸುತ್ತಿದ್ದಾರೆ.

    ಇದುವರೆಗೂ ಟಿಡಿಪಿ ಅಭ್ಯರ್ಥಿಯಾಗಿದ್ದ ವರ್ಮಾ ಪವನ್ ಕಲ್ಯಾಣ್ ಗೆ ಬೆಂಬಲ ನೀಡುತ್ತಿರುವುದು ಮಾತ್ರವಲ್ಲದೆ, ಖಂಡಿತ ಗೆಲ್ಲುತ್ತಾರೆ ಎಂದು ಗಟ್ಟಿಯಾಗಿ ಹೇಳುತ್ತಿದ್ದಾರೆ.

    ಆಗಿದ್ದೇನು?: ಸೋಮವಾರ ಬೆಳಗ್ಗೆ ಪವನ್ ಕಲ್ಯಾಣ್ ಭೇಟಿ ಮಾಡಲು ವೈಸಿಪಿಯ ಹಲವು ನಾಯಕರು ಜನಸೇನಾ ಕಚೇರಿಗೆ ಆಗಮಿಸಿದ್ದಾರೆ. ಈ ವೇಳೆ ಪವನ್ ಕಲ್ಯಾಣ್ ಜೊತೆ ಫೋಟೋ ತೆಗೆಸಿಕೊಳ್ಳಲು ಕೇಳಿದ್ದಾರೆ. ಈ ಸಂದರ್ಭದಲ್ಲಿ ನೂಕುನುಗ್ಗಲು ಉಂಟಾಗಿದೆ. ಕಲ್ಯಾನ್​ ರನ್ನು ಭೇಟಿಯಾಗಲು ಬಂದ ಕೆಲ ಕೂಲಿ ಕಾರ್ಮಿಕರು ತೆಳುವಾದ ಬ್ಲೇಡ್‌ಗಳನ್ನು ತಂದು ಭದ್ರತಾ ಸಿಬ್ಬಂದಿಯನ್ನು ಕತ್ತರಿಸಿ ತನ್ನನ್ನು ಕತ್ತರಿಸಲು ಪ್ರಯತ್ನಿಸಿದ್ದಾರೆ ಎಂದು ಪವನ್ ಕಲ್ಯಾಣ್ ಆರೋಪ ಮಾಡಿದ್ದಾರೆ.

    ಈ ಸುದ್ದಿ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರವಲ್ಲದೆ ಎಪಿ ರಾಜಕೀಯ ವಲಯದಲ್ಲಿಯೂ ಚರ್ಚೆಗೆ ಗ್ರಾಸವಾಗಿದೆ.

    ಆಸ್ಪತ್ರೆಗೆ ದಾಖಲಾದ ನಟ ಹ್ಯಾಟ್ರಿಕ್ ಹೀರೋ ಶಿವರಾಜ್‌ ಕುಮಾರ್‌

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts