ವಿಜಯವಾಡ: ಚುನಾವಣೆ ಘೋಷಣೆ ಆಗುತ್ತಿದ್ದಂತೆಯೇ ಕಾಲಿಗೆ ಚಕ್ರಕಟ್ಟಿಕೊಂಡು ರಾಜ್ಯ ಸುತ್ತುತ್ತಿದ್ದಾರೆ ಜನಸೇನಾ ಅಧ್ಯಕ್ಷ ಹಾಗೂ ನಟ ಪವನ್ ಕಲ್ಯಾಣ್. ಲೋಕಸಭೆ ಮತ್ತು ಮುಂದಿನ ಆಂಧ್ರದ ವಿಧಾನಸಭೆ ಚುನಾವಣೆಗಾಗಿ ಅವರು ಭರ್ಜರಿ ಸಿದ್ಧತೆ ನಡೆಸಿದ್ದಾರೆ. ಹಗಲು ರಾತ್ರಿ ಪ್ರಚಾರದಲ್ಲಿ ತೊಡಗಿರುವ ಪವನ್ ಕಲ್ಯಾಣ್ ಅಚ್ಚರಿಕೆ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: ಅರವಿಂದ್ ಕ್ರೇಜಿವಾಲ್ 2, ಸಂಜಯ್ ಸಿಂಗ್ 5, ಕವಿತಾ 6: ಎಲ್ಲರೂ ತಿಹಾರ್ ಜೈಲು ಪಾಲು!
ಆಂಧ್ರಪ್ರದೇಶ 2024 ರ ಚುನಾವಣಾ ಪ್ರಚಾರದಲ್ಲಿ ಟಿಡಿಪಿ ಮತ್ತು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಪಿಠಾಪುರಂನಿಂದ ಸ್ಪರ್ಧಿಸುತ್ತಿರುವ ಪವನ್ ಕಲ್ಯಾಣ್ ಇತ್ತೀಚೆಗೆ ಚುನಾವಣಾ ಪ್ರಚಾರವನ್ನು ಪ್ರಾರಂಭಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳ ಹೆಸರಿನಲ್ಲಿ ಕೆಲವರು ಬ್ಲೇಡ್ನಿಂದ ಕತ್ತರಿಸುತ್ತಿದ್ದಾರೆ ಎಂಬ ಶಾಕಿಂಗ್ ಹೇಳಿಕೆ ನೀಡಿದ್ದಾರೆ.
ಕೆಲವರು ಅನಾಮಿಕರು ತಳ್ಳಾಟದ ನಡುವೆ ಹರಿತ ಬ್ಲೇಡ್ಗಳಿಂದ ತನ್ನನ್ನು ಹಾಗೂ ಸಿಬ್ಬಂದಿಯನ್ನು ಕಟ್ ಮಾಡುತ್ತಿದ್ದಾರೆ ಆರೋಪಿಸಿದ್ದಾರೆ. ಈ ಕಾರಣದಿಂದ ಎಲ್ಲರೂ ಜಾಗೃತಿ ವಹಿಸಬೇಕು ಎಂದು ಪವನ್ ಕಲ್ಯಾಣ್ ಎಚ್ಚರಿಕೆ ನೀಡಿದ್ದಾರೆ. ಕಾಕಿನಾಡದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅವರು ಮಾತನಾಡಿದರು. ಪವನ್ ಕಲ್ಯಾಣ್ ಅವರು ಜನಸೇನಾ-ಟಿಡಿಪಿ-ಬಿಜೆಪಿ ಮೈತ್ರಿಕೂಟದ ಜಂಟಿ ಅಭ್ಯರ್ಥಿಯಾಗಿ ಪಿಠಾಪುರದಿಂದ ಸ್ಪರ್ಧಿಸುತ್ತಿದ್ದಾರೆ.
ಇದುವರೆಗೂ ಟಿಡಿಪಿ ಅಭ್ಯರ್ಥಿಯಾಗಿದ್ದ ವರ್ಮಾ ಪವನ್ ಕಲ್ಯಾಣ್ ಗೆ ಬೆಂಬಲ ನೀಡುತ್ತಿರುವುದು ಮಾತ್ರವಲ್ಲದೆ, ಖಂಡಿತ ಗೆಲ್ಲುತ್ತಾರೆ ಎಂದು ಗಟ್ಟಿಯಾಗಿ ಹೇಳುತ್ತಿದ್ದಾರೆ.
ಆಗಿದ್ದೇನು?: ಸೋಮವಾರ ಬೆಳಗ್ಗೆ ಪವನ್ ಕಲ್ಯಾಣ್ ಭೇಟಿ ಮಾಡಲು ವೈಸಿಪಿಯ ಹಲವು ನಾಯಕರು ಜನಸೇನಾ ಕಚೇರಿಗೆ ಆಗಮಿಸಿದ್ದಾರೆ. ಈ ವೇಳೆ ಪವನ್ ಕಲ್ಯಾಣ್ ಜೊತೆ ಫೋಟೋ ತೆಗೆಸಿಕೊಳ್ಳಲು ಕೇಳಿದ್ದಾರೆ. ಈ ಸಂದರ್ಭದಲ್ಲಿ ನೂಕುನುಗ್ಗಲು ಉಂಟಾಗಿದೆ. ಕಲ್ಯಾನ್ ರನ್ನು ಭೇಟಿಯಾಗಲು ಬಂದ ಕೆಲ ಕೂಲಿ ಕಾರ್ಮಿಕರು ತೆಳುವಾದ ಬ್ಲೇಡ್ಗಳನ್ನು ತಂದು ಭದ್ರತಾ ಸಿಬ್ಬಂದಿಯನ್ನು ಕತ್ತರಿಸಿ ತನ್ನನ್ನು ಕತ್ತರಿಸಲು ಪ್ರಯತ್ನಿಸಿದ್ದಾರೆ ಎಂದು ಪವನ್ ಕಲ್ಯಾಣ್ ಆರೋಪ ಮಾಡಿದ್ದಾರೆ.
ಈ ಸುದ್ದಿ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರವಲ್ಲದೆ ಎಪಿ ರಾಜಕೀಯ ವಲಯದಲ್ಲಿಯೂ ಚರ್ಚೆಗೆ ಗ್ರಾಸವಾಗಿದೆ.