More

    ಅಜಿತ್​ ಬರದಿದ್ದರೆ ಏನಾಯ್ತು? ಕಾಲೆಳೆದವರಿಗೆ ಚರಣ್​ ಪ್ರಶ್ನೆ

    ಚೆನ್ನೈ: ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ನಿಧನಕ್ಕೆ ಹಲವು ನಟ-ನಟಿಯರು ಸಂತಾಪ ಸೂಚಿಸಿದರೂ, ಅವರ ಅಂತಿಮ ದರ್ಶನ ಪಡೆದವರು, ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡವರು ಬಹಳ ಕಡಿಮೆಯೆಂದೇ ಹೇಳಬಹುದು. ವಿಜಯ್​ ಸೇರಿದಂತೆ ಬೆರಳಣಿಕೆಯಷ್ಟು ಸ್ಟಾರ್​ ಕಲಾವಿದರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದು ಬಿಟ್ಟರೆ, ಮಿಕ್ಕಂತೆ ಎಷ್ಟೋ ಜನ ದಿಗ್ಗಜ ಗಾಯಕನ ಅಂತಿಮ ದರ್ಶನ ಪಡೆಯಲಿಲ್ಲ.

    ಇದನ್ನೂ ಓದಿ: ಸಲ್ಮಾನ್​ ಖಾನ್​ ಕುಟುಂಬಕ್ಕೂ ಮುಳುವಾಯ್ತಾ ಸುಶಾಂತ್​ ಪ್ರಕರಣ?

    ಅದರಲ್ಲೂ ಕಾಲಿವುಡ್​ ನಟ ಅಜಿತ್​ ಅವರು ಈ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲಿಲ್ಲ ಎಂಬ ಅಪಸ್ವರವೊಂದು ವಿಪರೀತ ಕೇಳಿಬರುತ್ತಿದೆ. ಅಜಿತ್​ ಅಭಿನಯದ ಬಹಳಷ್ಟು ಹಾಡುಗಳನ್ನು ಹಾಡಿದವರು ಎಸ್​ಪಿಬಿ. ಅಜಿತ್​ ಯಶಸ್ಸಿನಲ್ಲಿ ಎಸ್​ಪಿಬಿ ಸಹ ಪಾಲುದಾರರು ಎಂದರೆ ತಪ್ಪಿಲ್ಲ. ಹಾಗಿರುವಾಗ ತಮಗೆ ಧ್ವನಿ ನೀಡಿದ ಗಾಯಕನ ಅಂತ್ಯಕ್ರಿಯೆಯಲ್ಲಿ ಅಜಿತ್​ ಭಾಗವಹಿಸಲಿಲ್ಲ ಎಂದು ಸೋಷಿಯಲ್​ ಮೀಡಿಯಾದಲ್ಲಿ ಜನ ಹಿಗ್ಗಾಮುಗ್ಗಾ ಬಯ್ಯುತ್ತಿದ್ದಾರೆ.

    ಈ ವಿಷಯವಾಗಿ, ಇದೀಗ ಎಸ್​ಪಿಬಿ ಅವರ ಮಗ ಎಸ್​ಪಿಬಿ ಚರಣ್​ ಪ್ರತಿಕ್ರಿಯಿಸಿದ್ದಾರೆ. ಅಜಿತ್​ ಬರದಿದ್ದರೆ ಏನಾಯ್ತು ಎಂದು ಕಾಲೆಳೆದವರನ್ನು ಅವರು ಪ್ರಶ್ನಿಸಿದ್ದಾರೆ.

    ಈ ಕುರಿತು ಮಾತನಾಡಿರುವ ಚರಣ್​, ‘ಈ ವಿಷಯವಾಗಿ ನನಗೆ ಯಾವುದೇ ಪ್ರತಿಕ್ರಿಯೆ ನೀಡುವುದಕ್ಕೆ ಇಷ್ಟವಿಲ್ಲ. ಅಜಿತ್​ ನನಗೆ ಒಳ್ಳೆಯ ಸ್ನೇಹಿತರು. ಅಪ್ಪನ ಜತೆಗೂ ಅವರಿಗೆ ಗೆಳೆತನವಿತ್ತು. ಅಜಿತ್​ ಬರದಿದ್ದರೆ ಏನಂತೆ? ಅವರು ಮನೆಯಲ್ಲಿ ಕೂತು ದುಃಖಿಸುತ್ತಿರಬಹುದು. ಅವರು ಖುದ್ದು ಬರಲೇಬೇಕು, ನಮಗೆ ಸಮಾಧಾನ ಹೇಳಬೇಕು ಎಂದು ನಿರೀಕ್ಷಿಸುವುದು ತಪ್ಪಾಗುತ್ತದೆ’ ಎಂದು ಅವರು ಹೇಳಿದ್ದಾರೆ.

    ಇದನ್ನೂ ಓದಿ: PHOTOS| ಸಿನಿಮಾ ಅವಕಾಶ ಇಲ್ಲದ್ದಕ್ಕೆ ನಟಿಯಿಂದ ಅರೆ ಬೆತ್ತಲೆ ಫೋಟೋಶೂಟ್​!

    ಇಂತಹ ವಿಷಯಗಳನ್ನು ಚರ್ಚಿಸುವುದಕ್ಕೆ ಇದು ಸೂಕ್ತ ಸಮಯವಲ್ಲ ಎಂದಿರುವ ಅವರು, ‘ನನ್ನಪ್ಪ ಇನ್ನಿಲ್ಲವಾಗಿದ್ದಾರೆ. ಜಗತ್ತು ಎಸ್​ಪಿಬಿ ಎಂಬ ಅದ್ಭುತ ಗಾಯಕನನ್ನು ಕಳೆದುಕೊಂಡಿದೆ. ಈ ಬಗ್ಗೆ ದುಃಖಿಸುವುದು ಬಿಟ್ಟು, ಇಲ್ಲದ ವಿಷಯಗಳನ್ನು ವಿವಾದ ಮಾಡಬೇಡಿ’ ಎಂದು ಅವರು ಹೇಳಿದ್ದಾರೆ.

    ಕಂಗನಾ ಬೆಂಬಲಿಸಿದ್ದಕ್ಕೆ ಅಕ್ಕಪಕ್ಕದ ಮನೆ ಮಂದಿಗೂ ನೋಟಿಸ್​; ಮನೆ ನೆಲಸಮ ಉಲ್ಲೇಖ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts