ಇನ್ನು ಮುಂದೆ ಶಾಲೆಗೆ ಹೋಗಲ್ಲ ಎಂದು ಸೋನಾಕ್ಷಿ ಹಠ ಹಿಡಿದಿದ್ದು ಯಾಕೆ?

blank

ಮುಂಬೈ: ಬಾಲಿವುಡ್​ ನಟಿ ಸೋನಾಕ್ಷಿ ಸಿನ್ಹಾ ಬಾಲ್ಯದಲ್ಲೊಮ್ಮೆ, ಇನ್ನು ಮುಂದೆ ಶಾಲೆಗೆ ಹೋಗುವುದಿಲ್ಲ ಎಂದು ಹಠ ಹಿಡಿದು ಕುಳಿತುಬಿಟ್ಟಿದ್ದರಂತೆ. ಕೊನೆಗೆ ಸಾಕಷ್ಟು ಅರ್ಥ ಮಾಡಿಸಿದ ಮೇಲೆ, ಶಾಲೆಗೆ ಹೋಗುವುದಕ್ಕೆ ಒಪ್ಪಿಕೊಂಡರಂತೆ. ಅಷ್ಟಕ್ಕೂ ಅವರು ಹಠ ಹಿಡಿದಿದ್ದು ಯಾಕೆ. ಅದಕ್ಕೆ ಕಾರಣವೂ ಇದೆ ಮತ್ತು ಇತ್ತೀಚೆಗೆ ಸಂದರ್ಶನವೊಂದರಲ್ಲಿ ಅವರೇ ಈ ಫ್ಲಾಶ್​ಬ್ಯಾಕ್​ ಘಟನೆಯ ಬಗ್ಗೆ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಹೈದರಾಬಾದ್​ ಬಿಟ್ಟು ಗೋವಾ ಸೇರಿದರಂತೆ ರಾಮ್​ಗೋಪಾಲ್​ ವರ್ಮಾ …

‘ಬಾಲ್ಯದಲ್ಲೊಮ್ಮೆ ನಾನು ಇನ್ನು ಮುಂದೆ ಶಾಲೆಗೆ ಹೋಗುವುದಿಲ್ಲ ಎಂದು ಅಮ್ಮನ ಹತ್ತಿರ ಹೇಳಿದ್ದೆ. ಅದಕ್ಕೆ ಕಾರಣ ನಮ್ಮಪ್ಪ ಶತ್ರುಘ್ನ ಸಿನ್ಹಾ, ಕೇಂದ್ರ ಸಚಿವರಾದ ಮೇಲೆ ಅವರಿಗೆ ಸೆಕ್ಯುರಿಟಿ ಕೊಡುವುದರ ಜತೆಗೆ, ನಮಗೂ ಸೆಕ್ಯುರಿಟಿ ಕೊಡುತ್ತಿದ್ದರು. ಇದರಿಂದ ಬೇಸತ್ತು, ಶಾಲೆಗೆ ಹೋಗುವುದೇ ಬೇಡ ಎಂದನಿಸಿತ್ತು’ ಎಂದು ಸೋನಾಕ್ಷಿ ಹೇಳಿಕೊಂಡಿದ್ದಾರೆ.

‘ಆಗ ನಾನು ಬಹುಶಃ ಆರನೇ ಕ್ಲಾಸಿನಲ್ಲಿದ್ದೆ ಅಂತನಿಸುತ್ತದೆ. ನನ್ನ ತಂದೆ ಕೇಂದ್ರದಲ್ಲಿ ಸಚಿವರಾಗಿದ್ದರು. ಅವರಿಗಷ್ಟೇ ಅಲ್ಲ, ನಮಗೂ ಸೆಕ್ಯುರಿಟಿ ಕೊಡುವುದಕ್ಕೆ ಪ್ರಾರಂಭವಾಯಿತು. ನಾನು ಶಾಲೆಗೆ ಹೋಗಬೇಕೆಂದರೂ, ಸೆಕ್ಯುರಿಟಿಯವರು ಗನ್​ ಹಿಡಿದು ಹಿಂಬಾಲಿಸುತ್ತಿದ್ದರು. ಎಲ್ಲ ಮಕ್ಕಳು ನನ್ನನ್ನು ವಿಚಿತ್ರವಾಗಿ ನೋಡುತ್ತಿದ್ದರು. ನನಗೂ ಬಹಳ ವಿಚಿತ್ರವೆನಿಸುತ್ತಿತ್ತು. ಕೊನೆಗೊಂದು ದಿನ ಅಮ್ಮನಿಗೆ, ಇವೆಲ್ಲ ನಿಲ್ಲದಿದ್ದರೆ ನಾನು ಶಾಲೆಗೆ ಹೋಗುವುದಿಲ್ಲ ಎಂದು ಹೇಳಿದೆ. ಅದಾದ ಮೇಲೆ ಸೆಕ್ಯುರಿಟಿಯವರು ನನ್ನ ಹಿಂದೆ ಬರುವುದು ಬಿಟ್ಟರು. ನನ್ನ ಪ್ರಕಾರ, ಅದೇ ನನ್ನ ಮೊದಲ ಸ್ವಾತಂತ್ರ್ಯ’ ಎಂದು ಸೋನಾಕ್ಷಿ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ರಜನಿಕಾಂತ್​, ವಿಕ್ರಮ್​, ವಿಜಯ್​ಗೆ ನಾಯಕಿಯಾಗಿದ್ದ ಈ ಹುಡುಗಿ ಯಾರು ಗೊತ್ತಾ?

ಇನ್ನು, ಶಾಲೆ ಮುಗಿದ ಮೇಲೆ ತಮ್ಮ ಮನೆಗೆ ಸ್ವಲ್ಪ ದೂರವಿರುವ ಕಾಲೇಜನ್ನು ಸೋನಾಕ್ಷಿ ಆಯ್ಕೆ ಮಾಡಿಕೊಂಡರಂತೆ. ‘ದೂರದ ಕಾಲೇಜು ಆಯ್ಕೆ ಮಾಡಿಕೊಳ್ಳಲು ಕಾರಣ, ರೈಲಿನಲ್ಲಿ ಪ್ರಯಾಣ ಮಾಡುವ ಅನುಭವ ನನಗೆ ಬೇಕಾಗಿತ್ತು. ಒಂಟಿಯಾಗಿ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದೆ. ಬಾಲ್ಯದಿಂದಲೂ ನನಗೆ ನನ್ನ ಕಾಲ ಮೇಲೆ ನಿಂತುಕೊಳ್ಳುವ ಮತ್ತು ಸ್ವತಂತ್ರವಾಗಿ ಬೆಳೆಯುವ ಆಸೆ ಇತ್ತು’ ಎಂದು ಸೋನಾಕ್ಷಿ ಹೇಳಿದ್ದಾರೆ.

ನಮ್ಮನ್ನೇ ಯಾಕೆ ಕೇಳ್ತೀರಿ?; ಏನೂ ಮಾಡ್ತಿಲ್ಲ ಎಂದವರಿಗೆ ತಮನ್ನಾ ಪ್ರಶ್ನೆ..

Share This Article

ಮನೆಯಲ್ಲೇ ಗಟ್ಟಿ ಮೊಸರು ಮಾಡುವ ವಿಧಾನ ನಿಮಗೆ ತಿಳಿದಿದೆಯೇ; ಇಲ್ಲಿದೆ ಸಿಂಪಲ್ ಟ್ರಿ​ಕ್ಸ್​​​​​ | Health Tips

ಚಳಿಗಾಲವಿರಲಿ, ಬೇಸಿಗೆಯಿರಲಿ ಮೊಸರನ್ನು ಇಷ್ಟಪಡುವವರು ಹವಾಮಾನ ಬದಲಾದಾಗಲೂ ಅದನ್ನು ತಿನ್ನುವುದನ್ನು ನಿಲ್ಲಿಸುವುದಿಲ್ಲ. ಚಳಿ ಹೆಚ್ಚಾದಾಗಲೂ ಅನೇಕರು…

ಊಟದ ಸಮಯದಲ್ಲಿ ಈ ತಪ್ಪುಗಳನ್ನು ಮಾಡಲೇಬೇಡಿ; ಮಾಹಿತಿ ತಿಳಿದು ರಕ್ತದಲ್ಲಿ ಸಕ್ಕರೆ ಮಟ್ಟ ಹೆಚ್ಚಾಗುವುದನ್ನು ತಪ್ಪಿಸಿ | Health Tips

ಮಧುಮೇಹವು ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ವೇಗವಾಗಿ ಹರಡುತ್ತಿದೆ. WHO ಕೂಡ ಈ ಬಗ್ಗೆ ಕಳವಳ ವ್ಯಕ್ತಪಡಿಸಿದೆ.…

ಈ ಪದಾರ್ಥಗಳನ್ನು ಯಾವುದೇ ಕಾರಣಕ್ಕೂ ಕುಕ್ಕರ್‌ನಲ್ಲಿ ಬೇಯಿಸಬೇಡಿ, ವಿಷಕಾರಿಯಾಗಬಹುದು ಎಚ್ಚರ! Pressure Cooker

Pressure Cooker : ಪ್ರೆಶರ್​ ಕುಕ್ಕರ್ ಇಂದು ಪ್ರತಿ ಮನೆಗಳಲ್ಲೂ ಅಗತ್ಯವಿರುವ ಅಡುಗೆ ಸಲಕರಣೆಗಳಲ್ಲಿ ಒಂದಾಗಿದೆ.…