ಪ್ರಕೃತಿ ವಿಕೋಪ ಅಥವಾ ನೈಸರ್ಗಿಕ ವಿಪತ್ತುಗಳಾದಾಗ ಜನ ಮೊದಲಿಗೆ ಪ್ರಶ್ನೆ ಮಾಡುವುದು ಸೆಲೆಬ್ರಿಟಿಗಳನ್ನು. ಅಂತಹ ಸಂದರ್ಭದಲ್ಲಿ ಅವರೆಷ್ಟು ಸಹಾಯ ಮಾಡಿದ್ದಾರೆ, ಏನು ಕೊಟ್ಟಿದ್ದಾರೆ ಎಂಬ ಪ್ರಶ್ನೆಗಳು ಸಹಜವಾಗಿಯೇ ಕೇಳಿಬರುತ್ತವೆ. ಲಾಕ್ಡೌನ್ ಸಮಯದಲ್ಲೂ ಇದು ಮುಂದುವರೆದಿದ್ದು, ಯಾರ್ಯಾರು ಏನೇನು ಸಹಾಯ ಮಾಡಿದ್ದಾರೆ ಎಂಬ ಲೆಕ್ಕಾಚಾರಗಳು ನಡೆಯುತ್ತಲೇ ಇದೆ. ಇಂಥ ಪ್ರಶ್ನೆಗಳನ್ನು ಸೆಲೆಬ್ರಿಟಿಗಳಿಗೇ ಯಾಕೆ ಕೇಳಲಾಗುತ್ತದೆ ಎಂದು ಟಾಲಿವುಡ್ ನಟಿ ತಮನ್ನಾ ಭಾಟಿಯಾ ಪ್ರಶ್ನಿಸಿದ್ದಾರೆ.
ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ‘ಪ್ರತಿಬಾರಿ ಏನಾದರೂ ಆದಾಗಲೂ ಸಿನಿಮಾದವರ ಕೊಡುಗೆ ಬಗ್ಗೆ ಪ್ರಶ್ನೆ ಎತ್ತಲಾಗುತ್ತದೆ. ಕಲಾವಿದರು ಮಾತ್ರ ಯಾಕೆ ಪ್ರತಿ ಬಾರಿ ತಮ್ಮ ಒಳ್ಳೆಯತನವನ್ನು ಸಾಬೀತು ಪಡಿಸುತ್ತಲೇ ಇರಬೇಕು ಎಂಬುದು ನನಗೆ ಅರ್ಥವಾಗುವುದಿಲ್ಲ. ಕಲಾವಿದರ ಮೇಲೆ ಈ ವಿಷಯದಲ್ಲಿ ಒತ್ತಡ ಹೆಚ್ಚಾಗುತ್ತಿದ್ದು, ಅವರು ತಮ್ಮ ಒಳ್ಳೆಯತನವನ್ನು ಸಾಬೀತುಪಡಿಸುವುದಕ್ಕೆ ದಾನ ಮಾಡಬೇಕಾಗುತ್ತಿದೆ ಮತ್ತು ಆ ನಂತರ ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಶೋಆಫ್ ಮಾಡಬೇಕಾಗುತ್ತದೆ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಬರಲಿದೆ ಮತ್ತೊಂದು ಭೀಕರ ರೋಗ!: ಕರೊನಾ ಪೂರ್ತಿ ಹೋಗಲು ವರ್ಷಗಳೆಷ್ಟು ಬೇಕು ಗೊತ್ತಾ?; ಇಲ್ಲಿದೆ ಭವಿಷ್ಯ..
ಕರೊನಾ ಸಂಕಷ್ಟದಲ್ಲಿರುವ ಸಿನಿಮಂದಿಯ ಸಹಾಯಕ್ಕೆ ಯಶ್; 3 ಸಾವಿರಕ್ಕೂ ಅಧಿಕ ಜನರಿಗೆ ತಲಾ 5 ಸಾವಿರ ರೂ.!