ಬೆಂಗಳೂರು: ಅಕ್ಕನ ಮನೆಗೆ ಬಾವ ಬರುತ್ತಿಲ್ಲ. ಇದಕ್ಕೆಲ್ಲ ಆತ ಎರಡನೇ ಮದುವೆಯಾಗಿರುವ ಮಹಿಳೆಯೇ ಕಾರಣ ಎಂದು ಭಾವಿಸಿದ್ದ ಮೈದುನ ಮಾಡಬಾರದ್ದನ್ನು ಮಾಡಿಬಿಟ್ಟ.
ಮೇಡಹಳ್ಳಿಯ ನಿವಾಸಿ ಹರ್ಷ, ಐದಾರು ವರ್ಷಗಳ ಹಿಂದೆ ಕೋಲಾರ ಮೂಲದ ಚೈತ್ರಾ ಎಂಬಾಕೆಯನ್ನು ಮದುವೆಯಾಗಿದ್ದ. ಹರ್ಷ ಫೈನಾನ್ಶಿಯರ್ ಆಗಿದ್ದು, ಚೈತ್ರಾ ಖಾಸಗಿ ಕಂಪನಿಯ ಉದ್ಯೋಗಿ. ನಾಲ್ಕು ವರ್ಷಗಳ ಹಿಂದೆ ಫೈನಾನ್ಸ್ ಮಾಡುವಾಗ ಶೈಲಶ್ರೀ ಎಂಬಾಕೆಯ ಪರಿಚಯ ಹರ್ಷನಿಗೆ ಆಗಿತ್ತು. ಪತ್ನಿ ಜೀವಂತವಾಗಿದ್ದರೂ ಶೈಲಶ್ರೀಯನ್ನು ಆತ 2ನೇ ಮದುವೆ ಮಾಡಿಕೊಂಡಿದ್ದ. ಇದೇ ವಿಚಾರವಾಗಿ ಚೈತ್ರಾ ಮತ್ತು ಹರ್ಷನ ನಡುವೆ ಗಲಾಟೆಯಾಗುತ್ತಿತ್ತು. ಹಿರಿಯರು ಇಬ್ಬರಿಗೂ ತಿಳಿಹೇಳಿ ರಾಜೀ ಮಾಡಿಸಿದ್ದರು. ಇತ್ತೀಚಿಗೆ ಹರ್ಷ, ಮೊದಲ ಪತ್ನಿಯ ಮನೆಗೆ ಬರುವುದನ್ನು ಕಡಿಮೆ ಮಾಡಿದ್ದ. ಈ ವಿಚಾರವಾಗಿ ತುಂಬಾ ನೊಂದಿದ್ದ ಚೈತ್ರಾ, ಸಹೋದರ ಶ್ರೀಕಂಠನ ಮುಂದೆ ಕಣ್ಣೀರಿಟ್ಟಿದ್ದಳು.
ಅಕ್ಕನ ಭವಿಷ್ಯ ಹಾಳಾಯಿತು. ಇದಕ್ಕೆಲ್ಲ ಬಾವ ಹರ್ಷನ ಎರಡನೇ ಪತ್ನಿ ಶೈಲಶ್ರೀ ಕಾರಣ ಎಂದು ಕೋಪಿಸಿಕೊಂಡಿದ್ದ. ಶೈಲಶ್ರೀ(28) ಯನ್ನು ಹತ್ಯೆ ಮಾಡಿದರೆ ಅಕ್ಕ ಮತ್ತು ಬಾವ ಚೆನ್ನಾಗಿರುತ್ತಾರೆ ಎಂದೂ ಯೋಚಿಸಿದ್ದ. ಅದರಂತೆ ಶನಿವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ಮೇಡಹಳ್ಳಿಯ ಮಂಜುನಾಥನಗರದಲ್ಲಿನ ಬಾವನ ಎರಡನೇ ಪತ್ನಿಯ ಮನೆಗೆ ಶ್ರೀಕಂಠ ಬಂದಿದ್ದ. ಈ ವೇಳೆ ಬಾವ ಮನೆಯಲ್ಲಿರಲಿಲ್ಲ. ಶೈಲಶ್ರೀ ಮತ್ತು ಶ್ರೀಕಂಠನ ನಡುವೆ ಮಾತಿಗೆ ಮಾತು ಬೆಳೆದು ವಿಕೋಪಕ್ಕೆ ತಿರುಗಿತ್ತು. ಆಕ್ರೋಶಗೊಂಡಿದ್ದ ಶ್ರೀಕಂಠ, ವೈಯರ್ನಿಂದ ಶೈಲಶ್ರೀ ಕುತ್ತಿಗೆ ಬಿಗಿದು ಉಸಿರುಗಟ್ಟಿಸಿ ಹತ್ಯೆ ಮಾಡಿ ಪರಾರಿಯಾಗಿದ್ದ.
ಮಹಿಳೆ ಕೊಲೆಯಾಗಿರುವ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸ್ ಸಿಬ್ಬಂದಿ ದಿವಾಕರ್ ಮತ್ತು ವಿನೋದ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು. ಆರೋಪಿ ಕುರಿತು ಸ್ಥಳೀಯರು ಮಾಹಿತಿ ನೀಡಿದ್ದರು. ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಕೆ.ಆರ್.ಪುರ ಪೊಲೀಸರು ಕೆಲವೇ ಗಂಟೆಗಳಲ್ಲಿ ಆರೋಪಿ ಶ್ರೀಕಂಠ(20)ನನ್ನು ಬಂಧಿಸುವಲ್ಲಿ ಯಶಸ್ವಿಯಾದರು. ಆರೋಪಿ ನಾಯಿ ಸಾಕುವ ಕೆಲಸ ಮಾಡಿಕೊಂಡಿದ್ದ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಮುರುಗನ್ ತಿಳಿಸಿದ್ದಾರೆ.
ತನ್ನದೇ ಸೆಕ್ಸ್ ವಿಡಿಯೋ ಮಾರುತ್ತಿದ್ದ ಬಸ್ ಕಂಡಕ್ಟರ್! ಪರಸ್ತ್ರೀಯರೊಂದಿಗೂ ಲೈಂಗಿಕ ಸಂಪರ್ಕ, 65 ವಿಡಿಯೋ ವಶ
ಇಬ್ಬರು ಪತ್ನಿಯರೊಂದಿಗಿನ ಕಾಮದಾಟದ ಲೈವ್ ದೃಶ್ಯವನ್ನೇ ಮಾರಾಟಕ್ಕಿಟ್ಟ 24ರ ಯುವಕ!