More

    ಅಪ್ಪ-ಅಮ್ಮ ದೂರ ಆಗಿದ್ದೇ ಒಳ್ಳೆಯದಾಯ್ತು ಅಂತ ಶ್ರುತಿ ಹೇಳಿದ್ದೇಕೆ?

    ಚೆನ್ನೈ: ಅಪ್ಪ- ಅಮ್ಮ ದೂರವಾದರೆ ಮಕ್ಕಳು ಬೇಸರಗೊಳ್ಳುವುದು ಸಹಜ. ಆದರೆ, ಕಮಲ್​ ಹಾಸನ್​ ಮತ್ತು ಸಾರಿಕಾ ಅವರ ಪುತ್ರಿ ಶ್ರುತಿ ಮಾತ್ರ, ತಮ್ಮ ತಂದೆ-ತಾಯಿ ದೂರ ಆಗಿದ್ದೇ ಒಳ್ಳೇದಾಯ್ತು ಎಂದು ಹೇಳಿದ್ದು ಎಲ್ಲರಲ್ಲೂ ಆಶ್ಚರ್ಯ ಉಂಟು ಮಾಡಿದೆ.

    ಇದನ್ನೂ ಓದಿ: ರಾವಣ ಆಗ್ತಾರಾ ರಣವೀರ್? … ಸೀತೆಯ ದೃಷ್ಟಿಕೋನದಲ್ಲಿ ಇನ್ನೊಂದು ರಾಮಾಯಣ

    ಇಷ್ಟಕ್ಕೂ ಶ್ರುತಿ ಹಾಗೆ ಹೇಳಿದ್ದು ಯಾಕೆ ಎಂಬ ಪ್ರಶ್ನೆ ಬರಬಹುದು. ಇತ್ತೀಚೆಗೆ ಶ್ರುತಿ ಒಂದು ಸಂದರ್ಶನವೊಂದರಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಕಮಲ್​ ಹಾಸನ್​ ಮತ್ತು ಸಾರಿಕಾ ಡೈವೋರ್ಸ್​ ಪ್ರಕರಣದ ಬಗ್ಗೆ ಶ್ರುತಿಗೆ ಪ್ರಶ್ನೆ ಕೇಳಲಾಯಿತು. ಈ ಪ್ರಶ್ನೆಗೆ ಉತ್ತರಿಸಿದ ಶ್ರುತಿ, ಅವರಿಬ್ಬರೂ ಡೈವೋರ್ಸ್​ ಪಡೆದಿದ್ದೇ ಒಳ್ಳೆಯದಾಯಿತು ಎಂದಿದ್ದಾರೆ.

    ‘ಅವರಿಬ್ಬರೂ ಮಾನಸಿಕವಾಗಿ ದೂರವಾಗಿದ್ದರು. ಅಂತವರನ್ನು ಒಟ್ಟಿಗೆ ಸಂಸಾರ ಮಾಡಿ ಎಂದು ಹೇಳುವುದು ಕಷ್ಟ. ಇಷ್ಟವಿಲ್ಲದಿದ್ದರೂ ಒತ್ತಾಯ ಮಾಡುವುದು ತಪ್ಪು. ಹಾಗಾಗಿ ಅವರು ದೂರವಾಗಿದ್ದೇ ಒಳ್ಳೆಯದು’ ಎಂದಿದ್ದಾರೆ ಶ್ರುತಿ.

    ಇದನ್ನೂ ಓದಿ: ‘ಗುರುಗಳಿಗೆ ಕಿಚ್ಚನ ನಮನ’ ಸಂಕಷ್ಟದಲ್ಲಿರುವ ಶಿಕ್ಷಕರ ಸಹಾಯಕ್ಕೆ ಮುಂದಾದ ಸುದೀಪ್​

    ತಮ್ಮ ತಾಯಿಗಿಂತ ತಂದೆಯ ಜತೆಗೆ ತಾನು ಹೆಚ್ಚು ಹತ್ತಿರವಿರುವುದಾಗಿ ಹೇಳಿರುವ ಶ್ರುತಿ, ‘ಅಮ್ಮ ದೂರವಿದ್ದರೂ ನಮ್ಮೆಲ್ಲರ ಜೀವನದ ಒಂದು ಭಾಗ ಎಂದರೆ ತಪ್ಪಿಲ್ಲ. ಅವರು ದೂರವಿದ್ದರೂ, ನಮ್ಮೆಲ್ಲರ ಜತೆಗೆ ಚೆನ್ನಾಗಿಯೇ ಇದ್ದಾರೆ’ ಎಂದು ಶ್ರುತಿ ಹೇಳಿಕೊಂಡಿದ್ದಾರೆ.

    ‘ಲೂಸಿಫರ್​’ ಚಿತ್ರದ ತೆಲುಗು ರೀಮೇಕ್​ಗೆ ನೋ ಎಂದ ಚಿರಂಜೀವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts