More

    INDIA ಒಕ್ಕೂಟದ ನಾಯಕರ ಐಫೋನ್ ಹ್ಯಾಕ್ ಯತ್ನ ಪ್ರಕರಣ: ಆ್ಯಪಲ್​ ಕೊಟ್ಟ ಸ್ಪಷ್ಟನೆ ಹೀಗಿದೆ…

    ನವದೆಹಲಿ: ಕಾಂಗ್ರೆಸ್​ ಸಂಸದ ಶಶಿ ತರೂರ್​ ಮತ್ತು ತೃಣಮೂಲ ಕಾಂಗ್ರೆಸ್​ ಸಂಸದೆ ಮಹುವಾ ಮೊಯಿತ್ರಾ ಅವರು ಆ್ಯಪಲ್​ ಕಂಪನಿಯಿಂದ ತಮ್ಮ ಐಫೋನ್​ಗಳಿಗೆ ಎಚ್ಚರಿಕೆ ಸಂದೇಶವನ್ನು ಸ್ವೀಕರಿಸಿದ್ದು, ಇದು ರಾಜಕೀಯ ತಿರುವು ಪಡೆದುಕೊಳ್ಳುತ್ತಿದ್ದಂತೆ ಕಂಪನಿಯು ಸ್ಪಷ್ಟನೆಯನ್ನು ನೀಡಿದೆ.

    ನಮ್ಮ ಮೇಲೆ ಸರ್ಕಾರಿ ಪ್ರಯೋಜಿತ ಹ್ಯಾಕಿಂಗ್​ ಪ್ರಯತ್ನ ನಡೆದಿರಬಹುದು ಎಂದು ಪ್ರತಿಪಕ್ಷಗಳ ನಾಯಕರು ಸಂಶಯ ವ್ಯಕ್ತಪಡಿಸಿದ್ದಾರೆ. ಆ್ಯಪಲ್​ ಕಂಪನಿಯು ಸಂಸತ್ತಿನ ಉಭಯ ಸದನಗಳ ಸದಸ್ಯರಿಗೆ ಎಸ್​ಎಂಎಸ್​ ಮತ್ತು ಇಮೇಲ್ ಮೂಲಕ ಎಚ್ಚರಿಕೆಗಳನ್ನು ಕಳುಹಿಸಿದೆ ಮತ್ತು ಇತ್ತೀಚಿನ iOS 17.1 ಅಪ್‌ಡೇಟ್‌ಗೆ ಮೊಬೈಲ್​ ಅನ್ನು ಅಪ್‌ಗ್ರೇಡ್ ಮಾಡಲು ಒತ್ತಾಯಿಸಿದೆ. ಏಕೆಂದರೆ, ಅಪ್​ಗ್ರೇಡ್​ ಮಾಡದಿದ್ದರೆ, ಅದು ಭದ್ರತಾ ಲೋಪದೋಷಗಳನ್ನು ಪ್ಲಗ್ ಮಾಡುವ ಹಲವಾರು ಸೆಕ್ಯುರಿಟಿ ಪ್ಯಾಚ್‌ಗಳನ್ನು ಹೊಂದಿದ್ದು, ಐಫೋನ್‌ ಹ್ಯಾಕ್​ಗೆ ಅನುಮತಿಸಬಹುದು ಎಂಬುದು ಎಚ್ಚರಿಕೆ ಸಂದೇಶದಲ್ಲಿದೆ.

    ಶಶಿ ತರೂರ್​ ಮತ್ತು ಮಹುವಾ ಮೊಯಿತ್ರಾ ಮಾತ್ರವಲ್ಲದೆ, ಇಂಡಿಯಾ ಒಕ್ಕೂಟದ ಇತರ ಸದಸ್ಯರುಗಳಾದ ಪ್ರಿಯಾಂಕಾ ಚೆತುರ್ವೇದಿ (ಶಿವಸೇನಾ ಪಕ್ಷದ ರಾಜ್ಯಸಭಾ ಸದಸ್ಯ), ಅಸಾದುದ್ದೀನ್​ ಒವೈಸಿ (ಲೋಕಸಭಾ ಸದಸ್ಯ, ಎಐಎಂಐಎಂ), ರಾಘವ್​ ಚಡ್ಡಾ (ಆ್ಯಪ್​ ಪಕ್ಷದ ರಾಜ್ಯಸಭಾ ಸದಸ್ಯ) ಮತ್ತು ಐಎನ್​ಸಿ ವಕ್ತಾರರಾದ ಪವನ್​ ಖೇರಾ ಮತ್ತು ಸುಪ್ರಿಯಾ ಶ್ರೀನಾಥೆ ಅವರುಗಳಿಗೆ ಕಳೆದ ರಾತ್ರಿ ಆ್ಯಪಲ್​ ಕಂಪನಿಯಿಂದ ಎಚ್ಚರಿಕೆ ಸಂದೇಹಗಳು ಹೋಗಿವೆ.

    ಆದಾಗ್ಯೂ, ಮೇಲೆ ತಿಳಿಸಿದ ಜನರ ಮೊಬೈಲ್​ ಫೋನಗಳನ್ನು ಯಾರು ಅಥವಾ ಯಾವ ಸಂಸ್ಥೆ ಅಥವಾ ಸರ್ಕಾರವು ಹ್ಯಾಕ್ ಮಾಡಲು ಪ್ರಯತ್ನಿಸಿದೆ ಎಂಬುದರ ಕುರಿತು ಯಾವುದೇ ನಿರ್ದಿಷ್ಟ ಮಾಹಿತಿಯಿಲ್ಲ ಎಂಬುದು ಗಮನಾರ್ಹ ಸಂಗತಿಯಾಗಿದೆ.

    ಆ್ಯಪಲ್​ ಸ್ಪಷ್ಟನೆ ಏನು?
    ಯಾವುದೇ ನಿರ್ದಿಷ್ಟ ಸರ್ಕಾರ ಪ್ರಾಯೋಜಿತ ಹ್ಯಾಕಿಂಗ್​ ಬೆದರಿಕೆ ನೋಟಿಫಿಕೇಶನ್​ಗಳ ಬಗ್ಗೆ ಆ್ಯಪಲ್ ಕಂಪನಿ ಆರೋಪ ಮಾಡುವುದಿಲ್ಲ. ಸರ್ಕಾರ ಪ್ರಾಯೋಜಿತ ಹ್ಯಾಕರ್​ಗಳು ಉತ್ತಮ ಹಣ ಮತ್ತು ಅತ್ಯಾಧುನಿಕರಾಗಿರುತ್ತಾರೆ. ಈ ಹ್ಯಾಕರ್​ಗಳ ದಾಳಿಗಳು ಕಾಲಾನಂತರದಲ್ಲಿ ವಿಕಸನಗೊಳ್ಳುತ್ತವೆ. ಇಂತಹ ಹ್ಯಾಕರ್​ಗಳನ್ನು ಪತ್ತೆಹಚ್ಚುವುದು ಸಾಮಾನ್ಯವಾಗಿ ಅಪೂರ್ಣ ಮತ್ತು ಅಪೂರ್ಣವಾಗಿರುವ ಬೆದರಿಕೆ ಗುಪ್ತಚರ ಸಂಕೇತಗಳ ಮೇಲೆ ಅವಲಂಬಿತವಾಗಿದೆ. ಕೆಲವು ಆ್ಯಪಲ್ ಬೆದರಿಕೆ ನೋಟಿಫಿಕೇಶನ್​ಗಳು ತಪ್ಪು ಎಚ್ಚರಿಕೆ ಸಂದೇಶಗಳಾಗಿರಬಹುದು ಅಥವಾ ಕೆಲವು ದಾಳಿಗಳು ಪತ್ತೆಯಾಗದಿರುವ ಸಾಧ್ಯತೆಯೂ ಇದೆ. ಬೆದರಿಕೆ ನೋಟಿಫಿಕೇಶನ್​ಗಳು ಬರಲು ಕಾರಣವೇನು ಎಂಬುದರ ಕುರಿತು ಮಾಹಿತಿಯನ್ನು ಒದಗಿಸಲು ನಮಗೆ ಸಾಧ್ಯವಾಗುತ್ತಿಲ್ಲ, ಏಕೆಂದರೆ ಭವಿಷ್ಯದಲ್ಲಿ ಪತ್ತೆಹಚ್ಚುವಿಕೆಯನ್ನು ತಪ್ಪಿಸುವ ಸಲುವಾಗಿ ಸರ್ಕಾರಿ ಪ್ರಾಯೋಜಿತ ಹ್ಯಾಕರ್​ಗಳು ತಮ್ಮ ನಡವಳಿಕೆಯನ್ನು ಹೊಂದಿಕೊಳ್ಳಲು ಮಾಹಿತಿ ಸಹಾಯ ಮಾಡಬಹುದು ಎಂದು ಆ್ಯಪಲ್​ ಕಂಪನಿ ಹೇಳಿದೆ.

    ಆ್ಯಪಲ್ ಸುಮಾರು 150 ರಾಷ್ಟ್ರಗಳಿಗೆ ಹ್ಯಾಕ್ ಆಗುವ ಅಪಾಯದಲ್ಲಿರುವ ಜನರಿಗೆ ಇದೇ ರೀತಿಯ ಎಚ್ಚರಿಕೆ ಸಂದೇಶಗಳನ್ನು ಕಳುಹಿಸಿದೆ ಎಂಬುದನ್ನು ಇಲ್ಲಿ ಗಮನಿಸಬೇಕು. 2021ರಲ್ಲಿ ಪೆಗಾಸೆಸ್​ ಸ್ಪೈವೇರ್ ಹಗರಣದ ನಂತರ ಆ್ಯಪಲ್ ಕಂಪನಿಯು ತನ್ನ ಫೀಚರ್​ನಲ್ಲಿ ಲಾಕ್​ಡೌನ್​ ಮೋಡ್​ ಪರಿಚಯಿಸಿತ್ತು. ಈ ಫೀಚರ್​ ಹ್ಯಾಕರ್​ಗಳಿಗೆ ಫೋಟೋಗಳನ್ನು ಹೊರತುಪಡಿಸಿ ಬೇರೆ ಯಾವುದೇ ಅಟ್ಯಾಚ್​ಮೆಂಟ್​ಗಳನ್ನು ತೆಗೆಯದಂತೆ ನೋಡಿಕೊಳ್ಳುತ್ತದೆ ಎಂದು ಹೇಳಲಾಗಿದೆ.

    ಸದ್ಯ ರಾಜಕಾರಣದಲ್ಲಿ ಮತ್ತೊಮ್ಮೆ ಹ್ಯಾಕಿಂಗ್​ ಸುದ್ದಿ ಸದ್ದು ಮಾಡುತ್ತಿದ್ದು, ಇದು ಮುಂದೆ ಯಾವ ಸ್ವರೂಪ ಪಡೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ. (ಏಜೆನ್ಸೀಸ್​)

    INDIA ಒಕ್ಕೂಟದ ನಾಯಕರ ಐಫೋನ್ ಹ್ಯಾಕ್ ಯತ್ನ; ಕಂಪನಿಯ ಎಚ್ಚರಿಕೆಯ ಸಂದೇಶವನ್ನು ಹಂಚಿಕೊಂಡ ಪ್ರತಿಪಕ್ಷ ಸಂಸದರು

    ಆಪಲ್‌ನಿಂದ ಹ್ಯಾಕಿಂಗ್ ಎಚ್ಚರಿಕೆ ಸ್ವೀಕರಿಸಿದ 10 ಕ್ಕೂ ಹೆಚ್ಚು ವಿರೋಧ ಪಕ್ಷದ ನಾಯಕರು

    ಥೈಲ್ಯಾಂಡ್​ ಪ್ರವಾಸಕ್ಕೆ ಭಾರತೀಯರಿಗೆ ಬೇಕಿಲ್ಲ ವೀಸಾ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts