ನವದೆಹಲಿ: ಮಧುಮೇಹಿಗಳಿಗೆಂದೇ ವಿಜ್ಞಾನಿಗಳು ಹೊಸದೊಂದು ಜೆಲ್ ಕಂಡುಹಿಡಿದಿದ್ದು, ಇದು ಮಧುಮೇಹದಿಂದ ಬಳಲುತ್ತಿರುವವರ ಪಾಲಿಗೆ ವರದಾನ ರೀತಿ ಪರಿಣಮಿಸಲಿದೆ ಎನ್ನಲಾಗಿದೆ. ನ್ಯಾಷನಲ್ ಯುನಿವರ್ಸಿಟಿ ಆಫ್ ಸಿಂಗಾಪುರ್ (ಎನ್ಯುಎಸ್) ಸಂಶೋಧಕರು ಈ ಜೆಲ್ ತಯಾರಿಸಿದ್ದಾರೆ.
ಈ ಜೆಲ್ ಹಚ್ಚಿಕೊಳ್ಳುವುದರಿಂದ ಮಧುಮೇಹಿಗಳ ಗಾಯ ಮೂರು ಪಟ್ಟು ಬೇಗ ಗುಣವಾಗುತ್ತದೆ ಮತ್ತು ಗಾಯ ಮತ್ತೆ ಬಿಗಡಾಯಿಸುವ ಪರಿಸ್ಥಿತಿ ಇರುವುದಿಲ್ಲ. ಇದರಿಂದ ಅಂಗಚ್ಛೇದನದ ಅನಿವಾರ್ಯತೆ ಪ್ರಮಾಣವೂ ತಗ್ಗುತ್ತದೆ ಎಂದು ಎನ್ಯುಎಸ್ ಹೇಳಿದೆ.
ಈ ಜೆಲ್ ತ್ವಚೆಯ ಜೀವಕೋಶ ಹಾಗೂ ಕಾಂತೀಯ ಕಣಗಳನ್ನು ಹೊಂದಿದ್ದು, ಈ ಜೆಲ್ ಬ್ಯಾಂಡೇಜ್ನೊಂದಿಗೆ ಬರಲಿದೆ. ಇದರಲ್ಲಿನ ಕಾಂತೀಯ ಕಣಗಳು ಗಾಯದ ಉಪಶಮನವನ್ನು ಪ್ರಚೋದಿಸುತ್ತವೆ.
ಇದನ್ನೂ ಓದಿ: ತಪ್ಪಾಯ್ತು ಅಂದ್ರೂ ಬಿಡ್ಲಿಲ್ಲ: ಬಹರೈನ್ನಲ್ಲಿ ಸ್ಟೇಟಸ್ ಹಾಕಿ ಕೆಲಸ ಕಳ್ಕೊಂಡ ಕರ್ನಾಟಕದ ಡಾಕ್ಟರ್!
ಈ ಕಾಂತೀಯ ಕಣಗಳ ಪ್ರಚೋದಕ ಗುಣ 1 ರಿಂದ 2 ಗಂಟೆಗಳ ಅವಧಿವರೆಗೆ ಇರುತ್ತದೆ. ಅಲ್ಲದೆ ಈ ಕಾಂತೀಯ ಕಣಗಳನ್ನು ಅಗತ್ಯಕ್ಕೆ ತಕ್ಕಂತೆ ಪ್ರಚೋದಿಸುವ ಸಲುವಾಗಿ ಒಂದು ವೈರ್ಲೆಸ್ ಕಾಂತೀಯ ಉಪಕರಣವನ್ನು ಕೂಡ ರೂಪಿಸಲಾಗಿದೆ ಎಂದು ವಿಜ್ಞಾನಿಗಳು ವಿವರಿಸಿದ್ದಾರೆ. ಈ ಕುರಿತ ವಿವರ ಅಡ್ವಾನ್ಸ್ಡ್ ಮೆಟೀರಿಯಲ್ಸ್ ಎಂಬ ಸೈಂಟಿಫಿಕ್ ಜರ್ನಲ್ನಲ್ಲಿ ಪ್ರಕಟವಾಗಿದೆ.
ಇದನ್ನೂ ಓದಿ: ಐಸ್ ಕ್ರೀಮ್ ಟ್ರಕ್ಗಳಲ್ಲಿ ಶವ!: ಹೊರಗೆ ಮಕ್ಕಳು ಐಸ್ ಕ್ರೀಮ್ ಮೆಲ್ಲುವ ಚಿತ್ರ, ಒಳಗೆ ಮೃತದೇಹಗಳು!
ಕಾಂತೀಯ ಕಣಗಳೊಂದಿಗೆ ಇರುವ ತ್ವಚೆಯ ಜೀವಕೋಶಗಳು ಎರಡು ರೀತಿಯವಾಗಿದ್ದು, ಅದಕ್ಕೆ ಎಫ್ಡಿಎ ಮಾನ್ಯತೆ ಕೂಡ ಇದೆ. ಈ ಜೆಲ್ನಲ್ಲಿ ತ್ವಚೆಯ ದುರಸ್ತಿಗೆ ಅಗತ್ಯವಾಗಿರುವ ಕೆರಾಟಿನೊಸೈಟ್ಸ್ ಮತ್ತು ಸಂಪರ್ಕಿಸುವ ಅಂಗಾಂಶಗಳನ್ನು ಮೂಡಿಸುವ ಫೈಬ್ರೊಬ್ಲಾಸ್ಟ್ಗಳು ಇರುತ್ತವೆ ಎಂದು ಹೇಳಿದ್ದಾರೆ.
ಚಡ್ಡಿ ಧರಿಸಿ ರಸ್ತೆ ಬದಿ ಕಾಣಿಸಿಕೊಂಡ ‘ರಜಿನಿಕಾಂತ್’!: ವಿಡಿಯೋ ವೈರಲ್; ಅಸಲಿ ವಿಷಯ ಏನು? ಇಲ್ಲಿದೆ ವಿವರ