ಮುಂಬೈ: ಮಹಾರಾಷ್ಟ್ರದಲ್ಲಿ ಉಂಟಾಗಿರುವ ರಾಜಕೀಯ ಬಿಕ್ಕಟ್ಟಿನಿಂದ ಹೊರಬರಲು ಶಿವಸೇನೆ ಶತಾಯ ಗತಾಯ ಪ್ರಯತ್ನ ಮಾಡುತ್ತಲೇ ಇದೆ. ಕೊನೇ ಗಳಿಗೆಯಲ್ಲಾದರೂ ಬಂಡಾಯ ಶಾಸಕರ ಮನವೊಲಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಆದರೆ ಶಿವಸೇನೆಯಿಂದ ಸಂಪೂರ್ಣ ಸಂಪರ್ಕ ಕಡಿದುಕೊಂಡಿರುವ ರೆಬೆಲ್ ಶಾಸಕರಿಗೆ ಕೊನೆಯ ಬಾರಿ ಎಚ್ಚರಿಕೆ ನೀಡಿಲಾಗಿದೆ. ಎಷ್ಟು ದಿನಾ ಅಂತ ಗುವಾಹಟಿಯಲ್ಲಿ ಅಡಗಿಕೊಳ್ಳುತ್ತೀರಾ, ಅಖಾಡಕ್ಕೆ ಬರಲೇಬೇಕಲ್ಲವೇ ಎಂದು ಶಿವಸೇನೆ ಸಂಸದ ಸಂಜಯ್ ರಾವತ್ ಟ್ವೀಟ್ ಮಾಡಿದ್ದಾರೆ.
16 ಶಾಸಕರನ್ನು ಅನರ್ಹಗೊಳಿಸಿ ವಿಧಾನಸಭಾ ಉಪಸಭಾಪತಿಯಿಂದ ನೋಟಿಸ್ ಜಾರಿಗೊಳಿಸಲಾಗಿದ್ದು, ಸೋಮವಾರ ಸಂಜೆಯೊಳಗೆ ಉತ್ತರಿಸಲೇಬೇಕಿದೆ. ಅದು ಯಾವ ರೀತಿ ಪ್ರತಿಕ್ರಿಯೆ ನೀಡುತ್ತೀರಾ ಎಂದು ಸವಾಲು ಎಸೆದಿದ್ದಾರೆ.
ಈ ಮಧ್ಯೆ ಗುವಾಹಟಿಯಲ್ಲೇ ಶಿವಸೇನೆ ಬಂಡಾಯ ಶಾಸಕರಿದ್ದು, ಕೆಲ ಬಂಡಾಯ ಶಾಸಕರಲ್ಲೇ ಕೆಲವು ಅಸಮಾಧಾನಗಳಿವೆ ಎಂದು ಶಿವಸೇನೆ ಆರೋಪಿಸಿದೆ. ಸದ್ಯ ಏಕನಾಥ್ ಶಿಂಧೆ ಬಣ ಯಾವ ರೀತಿ ಹೆಜ್ಜೆ ಇಡಲಿದೆ ಎಂಬುದನ್ನು ನಾಳೆ ಸಂಜೆವರೆಗೂ ಕಾದು ನೋಡಬೇಕಿದೆ. (ಏಜೆನ್ಸೀಸ್)
ನೀವೇನಾದ್ರೂ ಮಾಡ್ಕೊಳಿ, ಆದರೆ ಬಾಳಾಸಾಹೇಬ್ಠಾಕ್ರೆ ಹೆಸರು ಬಳಸುವಂತಿಲ್ಲ: ರೆಬೆಲ್ ಶಾಸಕರಿಗೆ ಉದ್ಧವ್ ಎಚ್ಚರಿಕೆ
ನಿಮ್ಮ ದ್ರೋಹ ಎಂದಿಗೂ ಮರೆಯಲ್ಲ, ರೆಬೆಲ್ ಶಾಸಕರಿಗೆ ಸಚಿವ ಆದಿತ್ಯ ಠಾಕ್ರೆ ವಾರ್ನಿಂಗ್