More

    ವೀಕ್ಷಕ ವಿವರಣೆಗಾರ ಸಮಿತಿಯಿಂದ ಟೀಮ್​ ಇಂಡಿಯಾ ಮಾಜಿ ಆಟಗಾರ ಸಂಜಯ್​ ಮಂಜ್ರೇಕರ್​ ಔಟ್​!

    ನವದೆಹಲಿ: ಟೀಮ್​ ಇಂಡಿಯಾದ ಮಾಜಿ ಆಟಗಾರ ಸಂಜಯ್​ ಮಂಜ್ರೇಕರ್​ ಅವರನ್ನು ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿ(ಬಿಸಿಸಿಐ)ಯ ವೀಕ್ಷಕ ವಿವರಣೆಗಾರ ಸಮಿತಿಯಿಂದ ಕೈಬಿಟ್ಟಿರುವುದಾಗಿ ಶನಿವಾರ ವರದಿಯಾಗಿದೆ.

    ದೇಶಿ ಪಂದ್ಯಾವಳಿಗಳಲ್ಲಿ ಸಂಜಯ್​ ಮಂಜ್ರೇಕರ್​ ಅವರ ಕಾಮೆಂಟರಿ ನಿರಂತವಾಗಿತ್ತು. ಇದೀಗ ಬಿಸಿಸಿಐ ನಿರ್ಧಾರದಿಂದ ಕರೊನಾ ಭೀತಿಯಿಂದಾಗಿ ಏಪ್ರಿಲ್​ 15ಕ್ಕೆ ಮುಂದೂಡಲಾಗಿರುವ ಐಪಿಎಲ್​ ಟೂರ್ನಿಯಲ್ಲಿ ಮಂಜ್ರೇಕರ್ ಅನುಪಸ್ಥಿತಿ ಇರಲಿದೆ. ಈ ಮುಂಚಿನ ವೇಳಾಪಟ್ಟಿ ಪ್ರಕಾರ ಐಪಿಎಲ್​ ಮಾರ್ಚ್​ 29ರಿಂದ ಆರಂಭವಾಗಬೇಕಿತ್ತು.

    ಗುರುವಾರ ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ಮಳೆಯ ಕಾರಣದಿಂದ ರದ್ದಾದ ಪ್ರವಾಸಿ ದಕ್ಷಿಣ ಆಫ್ರಿಕಾ ಮತ್ತು ಆತಿಥೇಯ ಭಾರತ ನಡುವಿನ ಏಕದಿನ ಸರಣಿಯ ಮೊದಲನೇ ಪಂದ್ಯದಲ್ಲೂ ಮಂಜ್ರೇಕರ್​ ಉಪಸ್ಥಿತರಿರಲಿಲ್ಲ. ಕರೊನಾ ಭೀತಿಯಿಂದಲೂ ಮೂರು ಪಂದ್ಯಗಳ ಏಕದಿನ ಸರಣಿಯನ್ನು ನಿಷೇಧಿಸಲಾಗಿದೆ.

    ಮಂಜ್ರೇಕರ್​ ಅವರನ್ನು ಯಾಕೆ ಕೈಬಿಟ್ಟರು ಎಂಬುದಕ್ಕೆ ಇನ್ನೂ ಸ್ಪಷ್ಟತೆ ದೊರಕಿಲ್ಲ. ಆದರೆ, ಮಂಜ್ರೇಕರ್​ ಅವರ ಕಾರ್ಯವೈಖರಿ ಆಡಳಿತ ಮಂಡಳಿಗೆ ಸಂತಸ ತಂದಿಲ್ಲ ಎಂದು ಹೇಳಲಾಗುತ್ತಿದೆ. (ಏಜೆನ್ಸೀಸ್​)

    ಐಪಿಎಲ್​ ಮುಂದೂಡಿದ ಬೆನ್ನಲ್ಲೇ ಭಾರತ-ಆಫ್ರಿಕಾ ನಡುವಿನ ಏಕದಿನ ಸರಣಿಗೂ ಕರೊನಾ ಕಂಟಕ

    ಸೌರಾಷ್ಟ್ರ ರಣಜಿ ಕ್ರಿಕೆಟ್ ಚಾಂಪಿಯನ್: ಜಿಗುಟು ಆಟದಲ್ಲಿ ಆತಿಥೇಯರ ಮೇಲುಗೈ ಬಂಗಾಳಕ್ಕೆ ಮತ್ತೆ ನಿರಾಸೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts