ನವದೆಹಲಿ: ಟೀಮ್ ಇಂಡಿಯಾದ ಮಾಜಿ ಆಟಗಾರ ಸಂಜಯ್ ಮಂಜ್ರೇಕರ್ ಅವರನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಯ ವೀಕ್ಷಕ ವಿವರಣೆಗಾರ ಸಮಿತಿಯಿಂದ ಕೈಬಿಟ್ಟಿರುವುದಾಗಿ ಶನಿವಾರ ವರದಿಯಾಗಿದೆ.
ದೇಶಿ ಪಂದ್ಯಾವಳಿಗಳಲ್ಲಿ ಸಂಜಯ್ ಮಂಜ್ರೇಕರ್ ಅವರ ಕಾಮೆಂಟರಿ ನಿರಂತವಾಗಿತ್ತು. ಇದೀಗ ಬಿಸಿಸಿಐ ನಿರ್ಧಾರದಿಂದ ಕರೊನಾ ಭೀತಿಯಿಂದಾಗಿ ಏಪ್ರಿಲ್ 15ಕ್ಕೆ ಮುಂದೂಡಲಾಗಿರುವ ಐಪಿಎಲ್ ಟೂರ್ನಿಯಲ್ಲಿ ಮಂಜ್ರೇಕರ್ ಅನುಪಸ್ಥಿತಿ ಇರಲಿದೆ. ಈ ಮುಂಚಿನ ವೇಳಾಪಟ್ಟಿ ಪ್ರಕಾರ ಐಪಿಎಲ್ ಮಾರ್ಚ್ 29ರಿಂದ ಆರಂಭವಾಗಬೇಕಿತ್ತು.
ಗುರುವಾರ ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ಮಳೆಯ ಕಾರಣದಿಂದ ರದ್ದಾದ ಪ್ರವಾಸಿ ದಕ್ಷಿಣ ಆಫ್ರಿಕಾ ಮತ್ತು ಆತಿಥೇಯ ಭಾರತ ನಡುವಿನ ಏಕದಿನ ಸರಣಿಯ ಮೊದಲನೇ ಪಂದ್ಯದಲ್ಲೂ ಮಂಜ್ರೇಕರ್ ಉಪಸ್ಥಿತರಿರಲಿಲ್ಲ. ಕರೊನಾ ಭೀತಿಯಿಂದಲೂ ಮೂರು ಪಂದ್ಯಗಳ ಏಕದಿನ ಸರಣಿಯನ್ನು ನಿಷೇಧಿಸಲಾಗಿದೆ.
ಮಂಜ್ರೇಕರ್ ಅವರನ್ನು ಯಾಕೆ ಕೈಬಿಟ್ಟರು ಎಂಬುದಕ್ಕೆ ಇನ್ನೂ ಸ್ಪಷ್ಟತೆ ದೊರಕಿಲ್ಲ. ಆದರೆ, ಮಂಜ್ರೇಕರ್ ಅವರ ಕಾರ್ಯವೈಖರಿ ಆಡಳಿತ ಮಂಡಳಿಗೆ ಸಂತಸ ತಂದಿಲ್ಲ ಎಂದು ಹೇಳಲಾಗುತ್ತಿದೆ. (ಏಜೆನ್ಸೀಸ್)
ಐಪಿಎಲ್ ಮುಂದೂಡಿದ ಬೆನ್ನಲ್ಲೇ ಭಾರತ-ಆಫ್ರಿಕಾ ನಡುವಿನ ಏಕದಿನ ಸರಣಿಗೂ ಕರೊನಾ ಕಂಟಕ
ಸೌರಾಷ್ಟ್ರ ರಣಜಿ ಕ್ರಿಕೆಟ್ ಚಾಂಪಿಯನ್: ಜಿಗುಟು ಆಟದಲ್ಲಿ ಆತಿಥೇಯರ ಮೇಲುಗೈ ಬಂಗಾಳಕ್ಕೆ ಮತ್ತೆ ನಿರಾಸೆ