More

    ಸ್ಯಾಂಡಲ್​ವುಡ್​ ನಟ ಧನುಷ್​ ನಿಧನ; ಇಂದು ಅಂತ್ಯಕ್ರಿಯೆ

    ಬೆಂಗಳೂರು: ‘ಪ್ಯಾರ್​ ಕಾ ಗೋಲ್​ಗುಂಬಜ್​’, ‘ಕೊಟ್ಲಲ್ಲಪ್ಪೋ ಕೈ’, ‘ಸಂಪಿಗೆ ಹಳ್ಳಿ’, ‘ಸ್ನೇಹಿತ’ ಮುಂತಾದ ಚಿತ್ರಗಳಲ್ಲಿ ನಾಯಕನಾಗಿ ನಟಿಸಿದ್ದ ಧನುಷ್​, ಬುಧವಾರ ರಾತ್ರಿ ಅನಾರೋಗ್ಯದಿಂದ ನಿಧನರಾಗಿದ್ದಾರೆ.

    ಇದನ್ನೂ ಓದಿ: ‘ಪಠಾಣ್​’ ಮೊದಲ ದಿನ ಎಷ್ಟು ಕಲೆಕ್ಷನ್​ ಮಾಡಬಹುದು?

    ಧನುಷ್​ ಮೂಲತಃ ಬಾಗಲಕೋಟೆಯವರು. ಕನ್ನಡ ಚಿತ್ರರಂಗದಲ್ಲಿ ನಾಯಕನಾಗಿ ನಟಿಸಬೇಕು ಎಂಬ ಆಸೆ ಹೊತ್ತು, ಬೆಂಗಳೂರಿಗೆ ಬಂದಿದ್ದರು. ಒಂದಿಷ್ಟು ಚಿತ್ರಗಳಲ್ಲಿ ನಾಯಕನಾಗಿಯೂ ನಟಿಸಿದ್ದರು. ಆದರೆ, ಆ ಚಿತ್ರಗಳು ಹೆಚ್ಚು ಯಶಸ್ವಿಯಾಗದ ಕಾರಣ ಅವರು ಸುದ್ದಿಯಾಗಲಿಲ್ಲ.

    ಕಳೆದ ವಾರ ಧನುಷ್​, ಚಿತ್ರವೊಂದರ ಚಿತ್ರೀಕರಣಕ್ಕಾಗಿ ಲಡಾಖ್​ಗೆ ಹೋಗಿದ್ದರು. ಅಲ್ಲಿನ ಹವಾಮಾನದ ವೈಪರಿತ್ಯದಿಂದ ಅವರಿಗೆ ಉಸಿರಾಟದ ಸಮಸ್ಯೆ ಎದುರಾಗಿತ್ತು. ತಕ್ಷಣವೇ ಅವರು ಬೆಂಗಳೂರಿಗೆ ವಾಪಸ್ಸು ಕರೆತರಲಾಗಿತ್ತು. ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ, ಅವರು ಬುಧವಾರ ರಾತ್ರಿ 10.45ರ ಸುಮಾರಿಗೆ ನಿಧನರಾಗಿದ್ದಾರೆ.

    ಇದನ್ನೂ ಓದಿ: ದುಬೈನಲ್ಲಿ ರಿಷಭ್​ ಶೆಟ್ರ ಅಡ್ವೆಂಚರ್​! ಡಿವೈನ್​ ಸ್ಟಾರ್​ಗೆ ಇದು ಫ್ಯಾಮಿಲಿ ಟೈಮ್​

    ಧನುಷ್ ಅವರ ಅಂತ್ಯಕ್ರಿಯೆ ಅವರ ಹುಟ್ಟೂರಾದ ಬಾಗಲಕೋಟೆ ಜಿಲ್ಲೆಯ ಕೋಡಿಹಾಳ ಗ್ರಾಮದಲ್ಲಿ ಇಂದು ನಡೆಯಲಿದೆ.

    ಭಾರತದಲ್ಲಿ ನಾನೇ ಸರ್ವಾಧಿಕಾರಿ ಎಂದ ರಾಜಮೌಳಿ …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts