ಮುಂಬೈ: ಸದ್ಯ ಭಾರತೀಯ ಸಿನಿಮಾ ಜಗತ್ತಿನಲ್ಲಿ ದಕ್ಷಿಣ ಭಾರತದ ಚಿತ್ರಗಳದ್ದೇ ಹವಾ. ಆರ್ಆರ್ಆರ್ ಯಶಸ್ಸಿನಿಂದ ಕಂಗೆಟ್ಟಿರುವ ಬಾಲಿವುಡ್ ದಕ್ಷಿಣ ಸಿನಿಮಾಗಳನ್ನು ನೋಡಿ ಹೆದರುವಂತಾಗಿದೆ.
ಆರ್ಆರ್ಆರ್ ಸಿನಿಮಾವನ್ನು ಹೊಗಳಿರುವ ಬಾಲಿವುಡ್ ನಟ ಸಲ್ಮಾನ್ ಖಾನ್ ಚಿತ್ರದಲ್ಲಿ ರಾಮಚರಣ್ ಹಾಗೂ ಜೂನಿಯರ್ ಎನ್ಟಿಆರ್ ಪಾತ್ರವನ್ನು ಹಾಡಿಹೊಗಳಿದ್ದಾರೆ. ಅಲ್ಲದೇ ರಾಜಮೌಳಿಯಂತಹ ನಿರ್ದೇಶಕರು ಬಾಲಿವುಡ್ನಲ್ಲು ಇರಬೇಕಿತ್ತು ಎಂದು ಹೇಳಿದ್ದಾರೆ.ಅಷ್ಟೇ ಅಲ್ಲದೇ ದಕ್ಷಿಣ ಭಾರತದಲ್ಲಿ ನಮ್ಮ ಸಿನಿಮಾ ಗೆಲ್ಲಲು ಏನು ಮಾಡಬೇಕೆಂದು ರಾಮ್ಚರಣ್ ಅವರಿಗೆ ಪ್ರಶ್ನಿಸಿದ್ದಾರೆ.
ಇದಕ್ಕೆ ಕಾರಣ ನೀವಲ್ಲಾ, ನಿಮ್ಮ ಸಿನಿಮಾಗಳು ಅಲ್ಲ, ಕೇವಲ ಬಾಲಿವುಡ್ನಲ್ಲಿ ಮಾತ್ರ ನೋಡಬೇಕೆಂದು ಚಿತ್ರಕಥೆ ಬರೆಯುವವರದ್ದಾಗಿದೆ ಎಂದಿದ್ದಾರೆ. ಇನ್ನು ಮುಂದುವರಿಸಿ ನಾವು ಬಾಲಿವುಡ್ ಜತೆಯೂ ಕೆಲಸ ಮಾಡಲು ಬಯಸುತ್ತೇವೆ ಅಲ್ಲದೇ ದೇಶಾದ್ಯಂತ ಜನರು ನಮ್ಮ ಸಿನಿಮಾ ನೋಡಬೇಕೆಂಬ ಉದ್ದೇಶ ಹೊಂದಿದ್ದೇವೆ ಎಂದು ರಾಮ್ ಚರಣ್ ಪ್ರತಿಕ್ರಿಯಿಸಿದ್ದಾರೆ.
ಪ್ರಿಯಾಂಕಾ ಛೋಪ್ರಾ ಅಜ್ಜಿಯನ್ನು ನೆನಪಿಸಿ,ಮಿಸ್ ಯೂ ನಾನಿ ಎಂದಿದ್ದು ಏಕೆ?