More

    ಮುಂಬೈ ಇಂಡಿಯನ್ಸ್​ ನಾಯಕತ್ವದಿಂದ ರೋಹಿತ್​ ಶರ್ಮ ಕೆಳಗಿಳಿಯಲು ಸಚಿನ್​ ಕಾರಣ! ಇಲ್ಲಿದೆ ನೋಡಿ ಸಾಕ್ಷಿ…

    ಮುಂಬೈ: ಇಂಡಿಯನ್​ ಪ್ರೀಮಿಯರ್​ ಲೀಗ್​ 2024 ಆರಂಭಕ್ಕೆ ವೇದಿಕೆ ಸಜ್ಜಾಗಿದೆ. ಈ ಮೆಗಾ ಟೂರ್ನಮೆಂಟ್​ ಮಾರ್ಚ್​ 22 ರಂದು ಆರಂಭವಾಗಲಿದೆ. ವಿರಾಟ್​ ಕೊಹ್ಲಿ, ರೋಹಿತ್​ ಶರ್ಮ, ಎಂ.ಎಸ್​. ಧೋನಿ ಸೇರಿದಂತೆ ಸ್ಟಾರ್​ ಆಟಗಾರರಿಂದ ಐಪಿಎಲ್​ ಟೂರ್ನಿಯು ಕಳೆಗಟ್ಟಲಿದೆ. ಅತಿ ದೊಡ್ಡ ಕ್ರಿಕೆಟ್​ ಈವೆಂಟ್​ ಕಣ್ತುಂಬಿಕೊಳ್ಳಲು ಕ್ರೀಡಾಭಿಮಾನಿಗಳು ಎದುರು ನೋಡುತ್ತಿರುವ ಈ ಸಂದರ್ಭದಲ್ಲಿ ಸ್ಫೋಟಕ ಸಂಗತಿಯೊಂದು ಬಯಲಾಗಿದೆ.

    ಮುಂಬೈ ತಂಡದ ನಾಯಕತ್ವ ಸ್ಥಾನದಿಂದ ರೋಹಿತ್​ ಶರ್ಮರನ್ನು ಕೆಳಗಿಳಿಸಲು ಕ್ರಿಕೆಟ್​ ದಿಗ್ಗಜ ಸಚಿನ್​ ತೆಂಡೂಲ್ಕರ್​ ಕಾರಣ ಎಂಬ ಆರೋಪ ಕೇಳಿಬಂದಿದೆ. ಇದೀಗ ಈ ವಿಚಾರ ಭಾರಿ ಚರ್ಚೆಗೆ ಕಾರಣವಾಗಿದೆ.

    ರೋಹಿತ್​ ಶರ್ಮಾ ಅವರು 2023ರ ಐಪಿಎಲ್​ ಟೂರ್ನಿವರೆಗೂ ಮುಂಬೈ ಇಂಡಿಯನ್ಸ್​ ತಂಡದ ನಾಯಕರಾಗಿದ್ದರು. ತಂಡವನ್ನು ಬಹಳ ಬುದ್ಧಿವಂತಿಕೆಯಿಂದ ಮುನ್ನಡೆಸಿದರು. ರೋಹಿತ್​ ನಾಯಕತ್ವದಡಿಯಲ್ಲಿ ಮುಂಬೈ ತಂಡ ಐದು ಬಾರಿ ಐಪಿಎಲ್​ ಚಾಂಪಿಯನ್​ ಆಗಿದೆ. ಐಪಿಎಲ್​ ಇತಿಹಾಸದಲ್ಲೇ ಅತಿ ಹೆಚ್ಚು ಬಾರಿ ಟ್ರೋಫಿ ಜಯಿಸಿರುವ ಹೆಗ್ಗಳಿಕೆಗೆ ಮುಂಬೈ ಪಾತ್ರವಾಗಿದೆ. 2023ರಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ಟ್ರೋಫಿ ಗೆಲ್ಲುವ ಮೂಲಕ ಈ ದಾಖಲೆಯನ್ನು ಸರಿಗಟ್ಟಿತು. ಆದರೆ, ಮುಂಬೈ ತಂಡವನ್ನು ತಡೆಯಲಾಗದ ಶಕ್ತಿಯನ್ನಾಗಿ ಮಾಡಿದ ರೋಹಿತ್ ಶರ್ಮ ಅವರನ್ನು ಮುಂಬೈ ಮ್ಯಾನೇಜ್‌ಮೆಂಟ್ ನಾಯಕತ್ವದಿಂದ ದಿಢೀರ್​ ವಜಾಗೊಳಿಸಿತು. ಇದು ಅಭಿಮಾನಿಗಳ ಆಕ್ರೋಶಕ್ಕೆ ಗುರಿಯಾಗಿದ್ದಲ್ಲದೆ, ಸಾಕಷ್ಟು ಚರ್ಚೆಗೆ ಗ್ರಾಸವಾಯಿತು.

    ರೋಹಿತ್​ ಶರ್ಮರನ್ನು ಕೆಳಗಿಳಿಸಿ ಆ ಸ್ಥಾನಕ್ಕೆ ಹಾರ್ದಿಕ್​ ಪಾಂಡ್ಯರನ್ನು ಕೂರಿಸಲಾಗಿದೆ. ಹೀಗಾಗಿ ಹಾರ್ದಿಕ್​ ಮೇಲೆ ರೋಹಿತ್​ ಅಭಿಮಾನಿಗಳು ಆಕ್ರೋಶ ಹೊರಹಾಕುತ್ತಲೇ ಇದಾರೆ. ರೋಹಿತ್​ ಇಲ್ಲದೆ ಮುಂಬೈ ಇಂಡಿಯನ್ಸ್​ ತಂಡ ಏನೇನು ಅಲ್ಲ ಎಂದು ಅಭಿಮಾನಿಗಳು ಹೇಳಿದ್ದಾರೆ. ಇದೆಲ್ಲದರ ನಡುವೆ ಇದೀಗ ಮತ್ತೊಂದು ಸ್ಫೋಟಕ ಸಂಗತಿ ಬಯಲಾಗಿದೆ. ರೋಹಿತ್​ರನ್ನು ನಾಯಕತ್ವ ಸ್ಥಾನದಿಂದ ಕೆಳಗಿಳಿಸಲು ಸಚಿನ್​ ಕಾರಣ ಎಂದು ದೂರಲಾಗಿದೆ. ಸಚಿನ್​ಗೆ ರೋಹಿತ್​ ಅವರನ್ನು ಕಂಡರೆ ಆಗುವುದಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಇದಕ್ಕೆ ಕಾರಣವನ್ನು ವಿವರಿಸಿ ಎಕ್ಸ್​ ಖಾತೆದಾರರೊಬ್ಬರು ಸುದೀರ್ಘವಾಗಿ ಬರೆದುಕೊಂಡಿದ್ದಾರೆ.

    ಸಚಿನ್​ಗೆ ಪುತ್ರ ವ್ಯಾಮೋಹ
    ದೇವ್​ ಹೆಸರಿನ ಎಕ್ಸ್​ ಖಾತೆದಾರರೊಬ್ಬರು ಸುದೀರ್ಘವಾಗಿ ಬರೆದುಕೊಂಡಿದ್ದಾರೆ. ನಾನಿದ್ದನ್ನು ಹೇಳುವಾಗ ಕೆಲ ಜನರು ನನ್ನನ್ನು ಮೂರ್ಖನೆಂದು ಹೇಳಬಹುದು, ಆದರೆ, ನಾನಿದನ್ನು ಹೇಳೇ ಹೇಳುತ್ತೇನೆ. ರೋಹಿತ್​ ಶರ್ಮರನ್ನು ಮುಂಬೈ ತಂಡದ ನಾಯಕತ್ವದಿಂದ ಕೆಳಗಿಳಿಸಲು ಸಚಿನ್ ಮುಖ್ಯ ಕಾರಣ. ಕಳೆದ ಎರಡು ವರ್ಷಗಳಿಂದ ರೋಹಿತ್​ ಕಂಡರೆ ಸಚಿನ್​ಗೆ ಆಗುತ್ತಿಲ್ಲ. ಮುಂಬೈ ತಂಡದಲ್ಲಿ ಪುತ್ರ ಅರ್ಜುನ್​ ತೆಂಡೂಲ್ಕರ್​ಗೆ ಅವಕಾಶ ನೀಡದೇ ಇರುವುದು ಕಾರಣ ಇರಬಹುದು. ಇದಲ್ಲದೆ, 2 ಪಂದ್ಯಗಳ ನಂತರ ಅರ್ಜುನ್​ರನ್ನು ತಂಡದಿಂದ ಕೈಬಿಡಲಾಯಿತು. ಇದು ಸಚಿನ್​ ಅಸಮಾಧಾನಕ್ಕೆ ಕಾರಣ ಇರಬಹುದು.

    ರೋಹಿತ್​ ಬಗ್ಗೆ ಒಂದೂ ಪೋಸ್ಟ್​ ಇಲ್ಲ
    ಕ್ರಿಕೆಟ್​ನಲ್ಲಿ ಘಟಿಸುವ ಪ್ರತಿಯೊಂದರ ಬಗ್ಗೆಯೂ ನಿಯಮಿತವಾಗಿ ಪೋಸ್ಟ್ ಮಾಡುವ ಸಚಿನ್​, ವಿಶ್ವಕಪ್​ನಲ್ಲಿ ಬಾಂಗ್ಲಾದೇಶದ ವಿರುದ್ಧ ಅಜೇಯ 51 ರನ್​ ಬಾರಿಸಿದಾಗ, ಪಾಕ್​ ವಿರುದ್ಧ 86 ರನ್​ ಗಳಿಸಿದಾಗ, ಇಂಗ್ಲೆಂಡ್​ ವಿರುದ್ಧ 87 ಮತ್ತು ಅಫ್ಘಾನಿಸ್ತಾನದ ವಿರುದ್ಧ 133 ರನ್​ ಕಲೆಹಾಕಿದಾಗ ಒಂದೇ ಒಂದು ಪೋಸ್ಟ್​ ಹಾಕಲಿಲ್ಲ. ಆದರೆ, ವಿರಾಟ್​ ಕೊಹ್ಲಿ ಮತ್ತು ಶುಭಮನ್​ ಗಿಲ್​ ವಿಚಾರದಲ್ಲಿ ಮಾತ್ರ ಐಪಿಎಲ್​ನಿಂದ ಹಿಡಿದು ಎಲ್ಲ ಪಂದ್ಯಗಳಲ್ಲೂ ವಿಶೇಷ ಸಂದರ್ಭದಲ್ಲಿ ಏನಾದರೊಂದು ಪೋಸ್ಟ್​ ಮಾಡಿದ್ದಾರೆ.

    ಕಳೆದ ಎರಡು ವರ್ಷಗಳಲ್ಲಿ ರೋಹಿತ್​ ಕುರಿತು ಸಚಿನ್​ ಒಂದೇ ಒಂದು ಪೋಸ್ಟ್​ ಮಾಡಿಲ್ಲ. ವಿಶ್ವಕಪ್​ ಸಂದರ್ಭದಲ್ಲಂತೂ ಹೇಳೋ ಹಾಗೇ ಇಲ್ಲ. ಸಚಿನ್​ ಕೊನೆಯದಾಗಿ ರೋಹಿತ್​ ಬಗ್ಗೆ ಪೋಸ್ಟ್​ ಮಾಡಿದ್ದು, 2022, ಏಪ್ರಿಲ್​ 30ರಂದು. ಅಂದು ರೋಹಿತ್​ ಶರ್ಮಾ ಹುಟ್ಟುಹಬ್ಬ. ಆದರೆ, ರೋಹಿತ್ ಅವರು ಉತ್ತಮ ಪ್ರದರ್ಶನ ನೀಡಿದ ಪ್ರತಿ ಬಾರಿಯೂ, ತಮ್ಮ ಹಿರಿಯರನ್ನು ನೆನೆಯುತ್ತಾರೆ ಮತ್ತು ತಮ್ಮ ಸಹ ಆಟಗಾರರಿಗೆ ಗೌರವ ನೀಡುತ್ತಾರೆ. ರಾಜ್‌ಕೋಟ್ ಟೆಸ್ಟ್‌ನ ಸಮಯದಲ್ಲಿಯೂ ಜಡೇಜಾ ತಮ್ಮ 100 ಪೂರ್ಣಗೊಳಿಸುವ ಸಲುವಾಗಿ ರೋಹಿತ್​ ಕಾಯುತ್ತಿದ್ದರು. ಈ ವೇಳೆ ರೋಹಿತ್​ರನ್ನು ಸೇರಿಸಿ ಸಚಿನ್​ ಟ್ವೀಟ್ ಮಾಡಬಹುದಿತ್ತು. ಆದರೆ ಮಾಡಲಿಲ್ಲ.

    ಇನ್​ಸ್ಟಾದಲ್ಲಿ ಅನ್​ಫಾಲೋ
    ಸಚಿನ್ ಅವರು ಅವರವರ ಜನ್ಮದಿನದಂದು ಎಲ್ಲರಿಗೂ ಶುಭಾಶಯಗಳನ್ನು ಕೋರುತ್ತಾರೆ ಆದರೆ, ರೋಹಿತ್‌ಗೆ ಮಾತ್ರ ಕೋರಿಲ್ಲ. ಸುರೇಶ್​ ರೈನಾ, ಯೂಸುಫ್, ಕೊಹ್ಲಿ, ಗಿಲ್, ಇಶಾನ್, ಎಂಎಸ್ ಧೋನಿ, ಹರ್ಭಜನ್ ಸಿಂಗ್​, ಜಡೇಜಾ ಮತ್ತು ಸಿರಾಜ್ ಅವರಿಗೆ ಶುಭ ಹಾರೈಸಿದ್ದಾರೆ. ಕೊಹ್ಲಿ, ಎಬಿಡಿ, ಎಂಎಸ್ ಧೋನಿ, ಯುವರಾಜ್, ರೈನಾ, ಭಜ್ಜಿ ಅವರನ್ನು ಇನ್​ಸ್ಟಾಗ್ರಾಂನಲ್ಲಿ ಹಿಂಬಾಲಿಸುವ ಸಚಿನ್, ರೋಹಿತ್ ಅವರನ್ನು ಅನುಸರಿಸುತ್ತಿಲ್ಲ. ಇನ್ನೂ ಅಚ್ಚರಿಯ ಸಂಗತಿ ಏನೆಂದರೆ, ಸಚಿನ್​ ಪುತ್ರ ಅರ್ಜುನ್​ ಕೂಡ ರೋಹಿತ್​ರನ್ನು ಅನ್​ಫಾಲೋ ಮಾಡಿದ್ದಾರೆ. ಹಾರ್ದಿಕ್ ಪಾಂಡ್ಯ, ಇಶಾನ್ ಸೇರಿದಂತೆ ಪ್ರತಿಯೊಬ್ಬ ಮುಂಬೈ ಇಂಡಿಯನ್ಸ್​ ಆಟಗಾರರು ಮತ್ತು ಭಾರತೀಯ ಕ್ರಿಕೆಟಿಗರನ್ನು ಒಳಗೊಂಡಂತೆ 530ಕ್ಕೂ ಅಧಿಕ ಜನರನ್ನು ಅರ್ಜುನ್ ಇನ್‌ಸ್ಟಾದಲ್ಲಿ ಅನುಸರಿಸುತ್ತಾರೆ. ಆದರೆ, ರೋಹಿತ್​​ರನ್ನು ಮಾತ್ರ ಅನುಸರಿಸುತ್ತಿಲ್ಲ.

    ಅಂದಹಾಗೆ ಈ ಎಲ್ಲ ಸಂಗತಿಗಳು ಕಾಕತಾಳೀಯವಲ್ಲ. ಈ ಬಾರಿಯ ಐಪಿಎಲ್‌ನಲ್ಲಿ ಏನಾಗುತ್ತದೆ ಎಂದು ಕಾದು ನೋಡೋಣ. ಮುಂಬೈ ಇಂಡಿಯನ್ಸ್​ ಈಗಾಗಲೇ ಈ ಋತುವಿನಲ್ಲಿ ಅನೇಕ ಸ್ಟಾರ್ ಬೌಲರ್‌ಗಳನ್ನು ಹೊಂದಿದೆ. ಒಂದು ವೇಳೆ ಅರ್ಜುನ್, ಹಾರ್ದಿಕ್​ ಪಾಂಡ್ಯ ನೇತೃತ್ವದಲ್ಲಿ 4 ಅಥವಾ ಅದಕ್ಕಿಂತ ಹೆಚ್ಚಿನ ಪಂದ್ಯಗಳನ್ನು ಆಡಿದರೆ, ಇದು ಏಕೆ ಸಂಭವಿಸಿತು ಮತ್ತು ಇದರ ಹಿಂದೆ ಯಾರಿದ್ದಾರೆ ಎಂಬುದು ಇಡೀ ಕಥೆಯನ್ನು ಬಿಚ್ಚಿಡುತ್ತದೆ ಎಂದು ದೇವ್​ ಹೇಳಿದ್ದಾರೆ. (ಏಜೆನ್ಸೀಸ್​)

    1965ರಲ್ಲಿ ಎರಡು ಇಡ್ಲಿ, ಒಂದು ಮಸಾಲೆ ದೋಸೆ ಬೆಲೆ ಎಷ್ಟಿತ್ತು ಗೊತ್ತಾ? ದರ ಪಟ್ಟಿ ನೋಡಿದ್ರೆ ಹುಬ್ಬೇರೋದು ಖಚಿತ!

    ಬೋಲ್ಡ್​ ಪಾತ್ರದಲ್ಲಿ ನಟಿಸಿದ್ದೇಕೆ? ನನಗೆ ಪುಳಿಯೋಗರೆನೂ ಬೇಕು… ಅನುಪಮಾ ಉತ್ತರ ಕೇಳಿ ಫ್ಯಾನ್ಸ್​ ಶಾಕ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts