More

    ಚುನಾವಣೆಯಲ್ಲಿ ಹಣ ಹಂಚಿಕೆ: ಸಂಸದೆಗೆ ಜೈಲು ಶಿಕ್ಷೆ ವಿಧಿಸಿದ ಕೋರ್ಟ್‌

    ತೆಲಂಗಾಣ: 2019 ರ ಸಾರ್ವತ್ರಿಕ ಚುನಾವಣೆಯ ವೇಳೆ ಮತದಾರರಿಗೆ ಹಣ ಹಂಚಿಕೆ ಮಾಡಿರುವ ಆರೋಪ ಹೊತ್ತಿದ್ದ ತೆಲಂಗಾಣ ರಾಷ್ಟ್ರ ಸಮಿತಿಯ (ಟಿಆರ್​ಎಸ್​) ಸಂಸದೆಗೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ ಜೈಲು ಶಿಕ್ಷೆ ವಿಧಿಸಿದೆ.

    ಮೆಹಬೂಬಾಬಾದ್ ಟಿಆರ್​ಎಸ್​ ಸಂಸದೆ ಮಲೋತ್ ಕವಿತಾ ಮತ್ತು ಅವರ ಸಹವರ್ತಿಗಳಿಗೆ ಹೈದರಾಬಾದ್​ನ ನಾಂಪಲ್ಲಿಯ ಕೋರ್ಟ್‌ 6 ತಿಂಗಳ ಜೈಲು ಶಿಕ್ಷೆ ಮತ್ತು 10 ಸಾವಿರ ರೂ. ದಂಡ ವಿಧಿಸಿದೆ.

    2019ರ ಸಾರ್ವತ್ರಿಕ ಚುನಾವಣೆ ವೇಳೆ ಸಂಸದರ ಸಹಾಯಕ ಶೌಕತ್ ಅಲಿ ಬುರ್ಗಂಪಹಾಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕವಿತಾ ಪರ ಮತ ಚಲಾಯಿಸುವಂತೆ ಮತದಾರರಿಗೆ 500 ರೂಪಾಯಿ ಹಣ ಹಂಚಿಕೆ ಮಾಡಿದ್ದರು. ಇವರು ಕಂದಾಯ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದರು. ಇವರ ವಿರುದ್ಧ ದೂರು ದಾಖಲಾಗಿ ಪ್ರಕರಣ ಕೋರ್ಟ್‌ ಮೆಟ್ಟಿಲೇರಿತ್ತು.

    ಶವ ಕಾಯುವ ಹುದ್ದೆಗೆ ಇಂಜಿನಿಯರಿಂಗ್‌, ಸ್ನಾತಕೋತ್ತರ ಪದವೀಧರರ ಅರ್ಜಿಗಳ ಮಹಾಪೂರ

    ಅಕ್ಕ ಬೆಳಗಿನ ಯೋಗದ ಪೋಸ್‌, ಭಾವ ರಾತ್ರಿಯ… ಜಾಲತಾಣದಲ್ಲಿ ಶಮಿತಾ ಶೆಟ್ಟಿ ಟ್ರೋಲ್

    ಆನ್‌ಲೈನ್‌ನಲ್ಲಿ ಲ್ಯಾಪ್‌ಟಾಪ್‌ ಖರೀದಿಸಹೋಗಿ ಲಕ್ಷಲಕ್ಷ ಕಳೆದುಕೊಂಡರು! ಖರೀದಿಗೆ ಮುನ್ನ ಎಚ್ಚರ… ಎಚ್ಚರ…

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts