ಹೈದರಾಬಾದ್: ಹೆಂಡತಿ ಸತ್ತ ಹಿನ್ನೆಲೆಯಲ್ಲಿ ಮಕ್ಕಳನ್ನು ನೋಡಿಕೊಳ್ಳಲು ಮತ್ತೊಂದು ಮದುವೆ ಮಾಡಿಸು ಎಂದದ್ದಕ್ಕೆ ಮಾವನೊಬ್ಬ ಅಳಿಯನ ರುಂಡ-ಮುಂಡ ಬೇರೆ ಮಾಡಿದ ಘಟನೆ ಪೂರ್ವ ಗೋದಾವರಿ ಜಿಲ್ಲೆಯಲ್ಲಿ ನಡೆದಿದೆ.
ರುಂಡನ ಜತೆಗೆ ಪೊಲೀಸ್ ಠಾಣೆಗೆ ಬಂದು ಹಾಜರಾಗಿದ್ದಾನೆ ಆರೋಪಿ ಸತ್ಯನಾರಾಯಣ್ (56). ಈತನ ಕೃತ್ಯಕ್ಕೆ ಬಲಿಯಾದ ಅಳಿಯನ ಹೆಸರು 25 ವರ್ಷದ ಪಂಪನಪಾಯಿನ ಲಕ್ಷ್ಮಣ.
ಮದುವೆಯ ಪ್ರಸ್ತಾಪವಿಟ್ಟು ಲಕ್ಷ್ಮಣ್, ಮಾವ ಸತ್ಯನಾರಾಯಣ್ ಮನೆಗೆ ತೆರಳಿದ್ದಾನೆ. ಈ ವೇಳೆ ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆದಿದೆ.
ಇದೇ ಸಿಟ್ಟಿನಿಂದ ಸತ್ಯನಾರಾಯಣ್ ಅಳಿಯನ ರುಂಡ-ಮುಂಡ ಬೇರೆ ಮಾಡಿದ್ದಾನೆ. ಬಳಿಕ ಸತ್ಯನಾರಾಯಣ್ ಅಳಿಯನ ರುಂಡದೊಂದಿಗೆ ಅನ್ನವರಂ ಪೊಲೀಸ್ ಠಾಣೆಗೆ ತೆರಳಿ, ಪೊಲೀಸರಿಗೆ ಶರಣಾಗಿದ್ದಾನೆ ಎಂದು ಮಾಹಿತಿ ನೀಡಿದ್ದಾರೆ ಸರ್ಕಲ್ ಇನ್ಸ್ ಪೆಕ್ಟರ್ ರಂಬಾಬು.
10 ತಿಂಗಳ ಹಿಂದೆ ಲಕ್ಷ್ಮಣ್ ಪತ್ನಿ ಪಾವನಿ ತೀರಿಕೊಂಡಿದ್ದರು. ಆ ಬಳಿಕ ಇಬ್ಬರು ಹೆಣ್ಣು ಮಕ್ಕಳನ್ನು ಪಾವನಿ ತಂದೆ ಸತ್ಯನಾರಾಯಣ್ ನೋಡಿಕೊಳ್ಳುತ್ತಿದ್ದಾರೆ. 10 ತಿಂಗಳು ಮಕ್ಕಳನ್ನು ನೋಡಿಕೊಂಡ ಸತ್ಯನಾರಾಯಣ್. ಮಕ್ಕಳನ್ನು ಮನೆಗೆ ಕರೆದುಕೊಂಡು ಹೋಗುವಂತೆ ಅಳಿಯನಿಗೆ ಹೇಳಿದ್ದಾನೆ. ಈ ಸಂಬಂಧ ಮಾತನಾಡಲು ಅಳಿಯನನ್ನು ಮನೆಗೆ ಕರೆದಿದ್ದ.
ಇದನ್ನೂ ಓದಿ: ಬಿಜೆಪಿ ಮುಖಂಡರ ಮೇಲೆ ಮುಂದುವರೆದಿದೆ ಉಗ್ರರ ದಾಳಿ: ನಾಲ್ಕನೇ ಬಲಿ!
ಇಬ್ಬರ ನಡುವೆ ಮಾತುಕತೆ ನಡೆದಿದೆ. ನಿನ್ನ ಇಬ್ಬರು ಮಕ್ಕಳನ್ನು ಕರೆದುಕೊಂಡು ಹೋಗ ಎಂದು ಮಾವ ಹೇಳಿದ್ದಾನೆ. ಆಗ ಲಕ್ಷ್ಮಣ್, ಅಲ್ಲಿ ಮಕ್ಕಳನ್ನು ನೋಡಿಕೊಳ್ಳುವವರು ಯಾರೂ ಇಲ್ಲ. ಹೀಗಾಗಿ ನನಗೆ ಎರಡನೇ ಮದುವೆ ಮಾಡಿದರೆ ಮಾತ್ರ ಮಕ್ಕಳನ್ನು ಕರೆದೊಯ್ಯುತ್ತೇನೆ. ಇಲ್ಲವೆಂದರೆ ಕರೆದುಕೊಂಡು ಹೋಗಲ್ಲ ಎಂದಿದ್ದಾನೆ.
ಇದೇ ಸಂಬಂಧವಾಗಿ ಮಾತಿಗೆ ಮಾತು ಬೆಳೆದು ಕತ್ತಿಯಿಂದ ಅಳಿಯನ ಶಿರಚ್ಛೇದನ ಮಾಡಿದ್ದಾನೆ ಮಾವ.
ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 302(ಕೊಲೆ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಘಟನೆಯ ಬಗ್ಗೆ ತನಿಖೆ ಮುಂದುವರಿಸಲಾಗಿದೆ ಎಂದು ಅವರು ಹೇಳಿದ್ದಾರೆ.