More

    ಮಳೆ ಬಂತೆಂದು ಮರದ ಕೆಳಗೆ ನಿಂತವರ ಮೇಲೆ ಎರಗಿದ ಸಿಡಿಲು: ಭಯಾನಕ ವಿಡಿಯೋ ವೈರಲ್​

    ಗುರುಗ್ರಾಮ: ಮಳೆ ಬರುವ ಸಂದರ್ಭದಲ್ಲಿ ಅದರಲ್ಲಿಯೂ ಗುಡುಗು, ಸಿಡಿಲು ಆರ್ಭಟಿಸುತ್ತಿರುವ ವೇಳೆ ಮರದ ಕೆಳಗೆ ನಿಲ್ಲುವುದು ಬಹು ಅಪಾಯಕಾರಿ ಎಂದು ಹಲವಾರು ಬಾರಿ ಸಾಬೀತಾಗಿದೆ. ಅದರಲ್ಲಿಯೂ ಸುತ್ತಲೂ ಖಾಲಿ ಜಾಗವಿದ್ದು, ಒಂದೇ ಒಂದು ಮರವಿದ್ದರೆ, ಅಂಥ ಸಂದರ್ಭಗಳಲ್ಲಿ ಆ ಮರಕ್ಕೆ ಸಿಡಿಲು ಬಡಿಯುವುದು ಮಾಮೂಲು.

    ಆದರೆ ಇದನ್ನು ಅರಿಯದೇ ಮಳೆಗಾಗಿ ಮರದ ಕೆಳಗೆ ಆಸರೆ ಪಡೆದ ನಾಲ್ವರು ವ್ಯಕ್ತಿಗಳ ಮೇಲೆ ಸಿಡಿಲು ಬಡಿದು, ಅದರ ವಿಡಿಯೋ ಇದೀಗ ವೈರಲ್​ ಆಗಿದೆ. ಇವರನ್ನು ಅಲಿಗಂಜ್ ನಿವಾಸಿ ಶಿವದತ್, ಲಾಲಿ, ರಾಮ್ ಪ್ರಸಾದ್ ಸುಂದರ್ ಮತ್ತು ಅವರ ಸೂಪರ್​ವೈಸರ್ ಅನಿಲ್ ಎಂದು ಗುರುತಿಸಲಾಗಿದೆ.

    ಇಂಥದ್ದೊಂದು ದುರದೃಷ್ಟಕರ ಘಟನೆ ನಡೆದಿರುವುದು ಗುರುಗ್ರಾಮದಲ್ಲಿ ನಡೆದಿದೆ. ಮಳೆಯಿಂದ ತಪ್ಪಿಸಿಕೊಳ್ಳುವ ಸಲುವಾಗಿ ವಾಟಿಕಾ ಸಿಗ್ನೇಚರ್ ವಿಲ್ಲಾಗಳಲ್ಲಿ ಕೆಲಸ ಮಾಡುತ್ತಿದ್ದ ನಾಲ್ಕು ತೋಟಗಾರಿಕಾ ಸಿಬ್ಬಂದಿ ಒಂದು ಮರದ ಕೆಳಗೆ ಆಶ್ರಯಕ್ಕೆ ತೆರಳಿದ್ದಾರೆ. ಈ ವೇಳೆ ಸಿಡಿಲು ಬಡಿದಿದೆ.

    ತಕ್ಷಣವೇ ಅವರೆಲ್ಲರೂ ಕೆಳಕ್ಕೆ ಬಿದ್ದಿದ್ದು, ಸ್ಥಳದಲ್ಲಿಯೇ ಪ್ರಾಣ ಕಳೆದುಕೊಂಡಿದ್ದಾರೆ. ಇವರೆಲ್ಲವೂ ತೋಟಗಾರಿಕೆ ಸಿಬ್ಬಂದಿ ಎನ್ನಲಾಗಿದೆ.

    ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋ ನೋಡಿದರೆ ಯಾರೂ ಬದುಕುಳಿದಂತೆ ಕಾಣಿಸುತ್ತಿಲ್ಲ. ಆದರೆ ಕೂಡಲೇ ಎಲ್ಲರನ್ನೂ ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಇವರ ಪೈಕಿ ಮೂವರ ಸ್ಥಿತಿ ಸಾಮಾನ್ಯವಾಗಿದ್ದು, ಅಪಾಯದಿಂದ ಹೊರ ಬಂದಿದ್ದು, ಇನ್ನೊಬ್ಬರ ಸ್ಥಿತಿ ಚಿಂತಜನಕವಾಗಿರುವುದಾಗಿ ವರದಿಯಾಗಿದೆ.

    ಶಾಲೆಯಿಂದ 39 ವಿದ್ಯಾರ್ಥಿಗಳನ್ನು ಅಪಹರಿಸಿ ಕೊಂಡೊಯ್ದ ಬಂದೂಕುಧಾರಿಗಳು! ಕಣ್ಣೀರಿನಲ್ಲಿ ಪಾಲಕರು

    ಕಾಲು ಶತಮಾನದ ನಂತರ ಇತಿಹಾಸ ಬರೆದ ಕೇರಳದ ಮುಸ್ಲೀಂ ಲೀಗ್​- ಮಹಿಳೆಗೆ ಸಿಕ್ಕಿತು ಸ್ಥಾನ

    ಆ ಹುಡುಗಿ ಬೇಡ ಕಣೋ ಎಂದ್ರೂ ಕೇಳ್ದೆ ಮದ್ವೆಯಾಗಿ ಪಡಬಾರದ ಕಷ್ಟ ಪಡ್ತಿದ್ದೇನೆ- ಪ್ಲೀಸ್​ ಪರಿಹಾರ ಹೇಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts