ನವದೆಹಲಿ: ದೆಹಲಿಯಲ್ಲಿ ಒಂದೆಡೆ ರೈತರು ಹಾಗೂ ಅವರ ಹೆಸರಿನಲ್ಲಿ ಹಿಂಸಾಚಾರಿಗಳು ನಡೆಸುತ್ತಿರುವ ಪ್ರತಿಭಟನೆಯ ಕಾವು ಇನ್ನೂ ಮುಂದುವರೆದಿರುವ ನಡುವೆಯೇ ಇಂದು ಬೆಳಗ್ಗೆ ಭೂಮಿ ಕಂಪಿಸಿದ ಅನುಭವವಾಗಿದೆ. ಭೂಮಿಯ ಕಂಪನಕ್ಕೆ ಜನರು ಬೆಚ್ಚಿಬಿದ್ದಿದ್ದಾರೆ.
ಪಶ್ಚಿಮ ದೆಹಲಿಯಲ್ಲಿ ಇಂದು 9.17 ರ ಸುಮಾರಿಗೆ ರಿಕ್ಟರ್ ಮಾಪಕದಲ್ಲಿ 2.8 ರಷ್ಟು ತೀವ್ರತೆಯ ಭೂಕಂಪ ಸಂಭವಿಸಿದೆ. ಕಂಪನದ ಅನುಭವ ಆಗುತ್ತಿದ್ದಂತೆಯೇ ಜನರು ಚೆಲ್ಲಾಪಿಲ್ಲಿಯಾಗಿ ಓಡಿರುವ ಬಗ್ಗೆ ವರದಿಯಾಗಿದೆ.
Earthquake of Magnitude 2.8 on the Richter scale occurred in West Delhi at 09:17 IST today: National Center for Seismology
— ANI (@ANI) January 28, 2021
15 ಕಿಲೋಮೀಟರ್ ಆಳದಲ್ಲಿ ಬೆಳಿಗ್ಗೆ 9:17ರ ಸುಮಾರಿಗೆ ಕಂಪನದ ಅನುಭವವಾಗಿದೆ. ಭೂಕಂಪದ ಕೇಂದ್ರ ರಾಷ್ಟ್ರ ರಾಜಧಾನಿಯ ವಾಯುವ್ಯಕ್ಕೆ 8 ಕಿ.ಮೀ(ವಾಯವ್ಯ) ಎಂದು ಸಂಸ್ಥೆ ತಿಳಿಸಿದೆ.
ಈ ಕುರಿತು ನ್ಯಾಷನಲ್ ಸೆಂಟರ್ ಫಾರ್ ಸೆಯಿಸ್ಟ್ ಆಫ್ ಸೆಂಟರಿಸ್ಟ್ (ಎನ್ ಸಿಎಸ್) ತಿಳಿಸಿದೆ. ಇನ್ನಷ್ಟು ಮಾಹಿತಿ ಇನ್ನೂ ಹೊರಬರಬೇಕಿದೆ.
ಮೆನೋಪಾಸ್ ನಂತರ ಪತ್ನಿಗೆ ಲೈಂಗಿಕಾಸಕ್ತಿಯೇ ಇಲ್ಲ- ನನಗೆ ದಿಕ್ಕೇ ತೋಚದಾಗಿದೆ; ಇದಕ್ಕೆ ಪರಿಹಾರವಿಲ್ಲವೆ?
ಕರೊನಾ ಬಂದಿದ್ದು ಶಿವನ ಕೂದಲಿನಿಂದ- ಸ್ವಂತ ಮಕ್ಕಳನ್ನು ಕೊಂದು ಪೊಲೀಸರೆದುರು ಕುಣಿದಾಡಿದರು
‘ಬಡಿಗೆ ಹಿಡಿದುಬನ್ನಿ, ಧ್ವಜವನ್ನೂ ತನ್ನಿ… ನಾನು ಹೇಳುತ್ತಿರುವುದೇನು ಅರ್ಥವಾಯ್ತಲ್ಲ… ಈಗ ಇಷ್ಟು ಸಾಕು…’