More

    ಯೂನಿವರ್ಸಿಟಿಗಳ ಬ್ಯಾಂಕ್​ ಖಾತೆ ಸ್ಥಗಿತ; ಆರ್​ಬಿಐಗೆ ದೂರು ನೀಡಿದ ಎಬಿವಿಪಿ

    ನವದೆಹಲಿ: ವಿದ್ಯಾರ್ಥಿಗಳಿಗಾಗಿ ಮೀಸಲಿಟ್ಟಿದ್ದ ಹಣವನ್ನು ವಿಶ್ವಾವಿದ್ಯಾಲಯಗಳ ಖಾತೆಯಿಂದ ಅನಧಿಕೃತವಾಗಿ ವರ್ಗಾಯಿಸಿಕೊಂಡು ಬಳಿಕ ಅದನ್ನು ಫ್ರೀಜ್​ ಮಾಡಿರುವ ಬಿಹಾರ ಶಿಕ್ಷಣ ಇಲಾಖೆ ಹಾಗೂ ಬ್ಯಾಂಕ್​ಗಳ ಕ್ರಮ ಖಂಡಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್​ (ABVP) ಆರ್​ಬಿಐ ಗವರ್ನರ್​ಗೆ ದೂರು ನೀಡಿದೆ.

    ಕಳೆದ ಕೆಲ ದಿನಗಳ ಹಿಂದೆ ವಿದ್ಯಾರ್ಥಿಗಳಿಗೆ ಮೀಸಲಿಟ್ಟಿದ್ದ ಹಣವನ್ನು ವಿಶ್ವವಿದ್ಯಾಲಯಗಳ ಖಾತೆಯಿಂದ ಅನಧಿಕೃತವಾಗಿ ವರ್ಗಾಯಿಸಲಾಗಿದ್ದು, ಇದಾದ ಬಳಿಕ ಬ್ಯಾಂಕ್​ ಅಕೌಂಟ್​ಗಳನ್ನು ಕಾನೂನುಬಾಹಿರವಾಗಿ ಫ್ರೀಜ್​ ಮಾಡಲಾಗಿದೆ. ಬ್ಯಾಂಕ್​ಗಳ ಈ ನಡೆಯಿಂದ ವಿಶ್ವವಿದ್ಯಾಲಯಗಳು ಅರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ಕೂಡಲೇ ಇದಕ್ಕೆ ಸಂಬಂಧಿಸಿದಂತೆ ಶಿಕ್ಷಣ ಇಲಾಖೆಯ ಜೊತೆ ಭಾಗಿಯಾಗಿರುವ ಬ್ಯಾಂಕ್​​ಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆರ್​​ಬಿಐ ಗವರ್ನರ್​ಗೆ ಸಲ್ಲಿಸಲಾಗಿರುವ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

    ಈ ಕುರಿತು ಮಾತನಾಡಿರುವ ಎಬಿವಿಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಜ್ಞವಾಲ್ಕ್ಯ ಶುಕ್ಲಾ, ಪ್ರಕರಣದಲ್ಲಿ ಬಿಹಾರ ರಾಜ್ಯ ವಿಶ್ವವಿದ್ಯಾಲಯಗಳ ಕಾಯ್ದೆ 1976 ಮತ್ತು ಭಾರತೀಯ ರಿಸರ್ವ್​ ಬ್ಯಾಂಕ್​ ಕಾಯದೆ 1934ರ ನಿಯಮಗಳನ್ನು ಉಲ್ಲಂಘಿಸಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಶಿಕ್ಷಣ ಇಲಾಖೆಯ ಈ ಕ್ರಮದಿಂದ ವಿಶ್ವವಿದ್ಯಾಲಯಗಳಿಗೆ ಮತ್ತಷ್ಟು ಹಿನ್ನಡೆಯಾಗುತ್ತಿದ್ದು, ನಿಯಾಮವಳಿಗಳನ್ನು ಅನುಸರಿಸಿ ತಕ್ಷಣವೇ ಕ್ರಮ ಜರುಗಿಸುವಂತೆ ಎಬಿವಿಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಜ್ಞವಾಲ್ಕ್ಯ ಶುಕ್ಲಾ ಆಗ್ರಹಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts