More

    ಕೇಂದ್ರದಲ್ಲಿ ಶೋಭಾಗೆ ಸಚಿವ ಸ್ಥಾನದ ನಿರೀಕ್ಷೆ- ಹುದ್ದೆ ಕಳೆದುಕೊಳ್ತಾರಾ ಸದಾನಂದಗೌಡ?

    ನವದೆಹಲಿ: ಕೇಂದ್ರ ಸಚಿವ ಸಂಪುಟದ ಪುನರಚನೆಗೆ ಕ್ಷಣಗಣನೆಗೆ ಆರಂಭವಾಗಿದೆ. ಇದಾಗಲೇ ಯಾರಿಗೆ ಸಚಿವ ಸ್ಥಾನ ಸಿಗಬಹುದು, ಯಾರು ನಿರ್ಗಮಿಸಲಿದ್ದಾರೆ ಎಂಬ ಬಗ್ಗೆ ಸಾಕಷ್ಟು ಊಹಾಪೋಹಗಳು ಸುದ್ದಿ ಮಾಡುತ್ತಿವೆ. ಇನ್ನು ಕೆಲವೇ ಗಂಟೆಗಳಲ್ಲಿ ಫಲಿತಾಂಶ ಬರಲಿದೆ.

    ಈ ನಡುವೆಯೇ ಕರ್ನಾಟಕದಿಂದ ಯಾರು ಸಚಿವರಾಗಬಹುದು ಎನ್ನುವುದರ ಬಗ್ಗೆ ಚರ್ಚೆಗಳು ನಡೆಯುತ್ತಿದ್ದು, ಕೆಲವು ಸಂಸದರ ಹೆಸರುಗಳು ಕೇಳಿ ಬರುತ್ತಿವೆ.

    ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ, ಹಾವೇರಿ-ಗದಗ ಸಂಸದ ಶಿವಕುಮಾರ್ ಉದಾಸಿ ಮತ್ತು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರ ಹೆಸರು ಇದಾಗಲೇ ಮುನ್ನೆಲೆಗೆ ಬಂದಿದ್ದರೂ, ಶೋಭಾ ಅವರಿಗೆ ಖುರ್ಚಿ ಸಿಗುವ ಸಾಧ್ಯತೆಯೇ ಹೆಚ್ಚು ಎಂದು ಸದ್ಯದ ಪರಿಸ್ಥಿತಿಯಲ್ಲಿ ಕಾಣಿಸುತ್ತಿದೆ.

    ಸದ್ಯ ಕೇಂದ್ರದಲ್ಲಿ ಡಿ.ವಿ.ಸದಾನಂದ ಗೌಡ ಮತ್ತು ಪ್ರಹ್ಲಾದ್ ಜೋಶಿ ಜತೆಗೆ ರಾಜ್ಯಸಭೆಗೆ ಆಯ್ಕೆಯಾಗಿರುವ ನಿರ್ಮಲಾ ಸೀತಾರಾಮನ್ ಕೂಡ ಕರ್ನಾಟಕದ ರಾಜ್ಯಸಭಾ ಸಂಸದರಾಗಿದ್ದಾರೆ. ಇವರ ಪೈಕಿ ಸದಾನಂದಗೌಡ ಅವರು ತಮ್ಮ ಸಚಿವ ಸ್ಥಾನವನ್ನು ಕಳೆದುಕೊಂಡು ಆ ಜಾಗಕ್ಕೆ ಶೋಭಾ ಅವರು ಆಯ್ಕೆ ಆಗಲಿದ್ದಾರೆ ಎಂಬ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಎಲ್ಲದಕ್ಕೂ ಅತಿ ಶೀಘ್ರದಲ್ಲಿ ಉತ್ತರ ಸಿಗಲಿದೆ.

    ಎಸ್‌ಎಸ್‌ಎಲ್‌ಸಿ ಪರೀಕ್ಷೆ ಭವಿಷ್ಯ ಹೈಕೋರ್ಟ್‌ ಕೈಯಲ್ಲಿ: ಎಕ್ಸಾಂ ನಡೆಸದಂತೆ ಕೋರಿ ಪಿಐಎಲ್‌

    ಪತ್ನಿಯಿಂದ ದೂರವಿರಲು ನಕಲಿ ಕೋವಿಡ್‌ ರಿಪೋರ್ಟ್‌ ಕೊಟ್ಟ ನವವಿವಾಹಿತ – ಮುಂದಾದದ್ದು ದುರಂತ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts