ಜಬಲ್ಪುರ್: ಸರ್ಕಾರಿ ನೌಕರನ 13 ವರ್ಷದ ಮಗಳ ಮೇಲೆ ಕೇವಲ 48 ಗಂಟೆಗಳಲ್ಲಿ 9 ಕಾಮುಕರು 13 ಬಾರಿ ಅತ್ಯಾಚಾರ ಎಸಗಿರುವ ಅಮಾನವೀಯವಾಗಿ ಘಟನೆ ಮಧ್ಯಪ್ರದೇಶದ ಉಮರಿಯಾ ಜಿಲ್ಲೆಯಲ್ಲಿ ನಡೆದಿದೆ ಎನ್ನಲಾಗಿದೆ.
ಸಂತ್ರಸ್ತ 9ನೇ ತರಗತಿ ವಿದ್ಯಾರ್ಥಿನಿಯನ್ನು ಆಕೆಯ ಬಾಯ್ಫ್ರೆಂಡ್ ಎನ್ನಲಾದ ಹುಡುಗನು ತನ್ನ ಸ್ನೇಹಿತನೊಂದಿಗೆ ಸೇರಿ, ಅಪಹರಿಸಿ ಗ್ಯಾಂಗ್ರೇಪ್ ಮಾಡಿದ್ದಾರೆಂದು ತಿಳಿದುಬಂದಿದೆ. ಅಲ್ಲದೆ, ಡಾಭಾದಲ್ಲಿ ಮತ್ತೆ ಐವರು ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆ. ಇದಾದ ಬಳಿಕ ಸಂತ್ರಸ್ತೆ ಟ್ರಕ್ ಚಾಲಕರನ್ನು ಡ್ರಾಪ್ ಕೇಳಿದಾಗ, ಅವರಿಬ್ಬರು ಸಹ ರೇಪ್ ಮಾಡಿದ್ದಾರೆ. ಸುಮಾರು 48 ಗಂಟೆಗಳ ಕಾಲ ಸಂತ್ರಸ್ತೆ ನರಕಯಾತನೆ ಅನುಭವಿಸಿದ್ದಾಳೆ. ಸರಿಯಾಗಿ ಮಾತನಾಡಲು ಆಗದಷ್ಟು ಕಾಮುಕರು ವಿಕೃತಿ ಮೆರೆದಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ 13 ವರ್ಷದ ಉಮಾರಿಯಾ ಮೂಲದ ವಿದ್ಯಾರ್ಥಿನಿ ತನ್ನ ತಂದೆಯೊಂದಿಗೆ ಜಬಲ್ಪುರದಲ್ಲಿ ನೆಲೆಸಿದ್ದು, 9ನೇ ತರಗತಿ ವಿದ್ಯಾರ್ಥಿನಿಯಾಗಿದ್ದಾಳೆ. ತಂದೆ ಸರ್ಕಾರಿ ಉದ್ಯೋಗಿಯಾಗಿದ್ದಾರೆ. ಲಾಕ್ಡೌನ್ ಸಮಯದಲ್ಲಿ ಶಾಲೆಗಳು ಮುಚ್ಚಿದ್ದರಿಂದ ವಿದ್ಯಾರ್ಥಿನಿಯನ್ನು ಆಕೆಯ ತಾಯಿ ಉಮಾರಿಯಾಗೆ ಕರೆತಂದಿದ್ದಳು. ಜ.11ರ ಮಧ್ಯಾಹ್ನ ತರಕಾರಿ ತರಲೆಂದು ಮಾರುಕಟ್ಟೆಗೆ ತೆರಳಿದ್ದಾಳೆ. ಈ ವೇಳೆ ರಾಹುಲ್ ಕುಸ್ವಾಹ ಮತ್ತು ಆಕಾಶ್ ಸಿಂಗ್ ಎಂಬುವರು ಆಕೆ ಸಿಕ್ಕಿದ್ದಾರೆ. ಇಬ್ಬರು ಆಕೆಯನ್ನು ಶಾಪ್ ಕರೆದೊಯ್ದಿದ್ದಾರೆ. ಬಳಿಕ ಆಕೆಯಿಂದ ಮೊಬೈಲ್ ನಂಬರ್ ಸಹ ಪಡೆದುಕೊಂಡಿದ್ದಾರೆ. ಬಳಿಕ ಬೈಕ್ನಲ್ಲಿ ಕರೆದೊಯ್ಯುವುದಾಗಿ ಹೇಳಿ ಅಲ್ಲಿಂದ ಕರೆದುಕೊಂಡು ಹೋಗಿದ್ದಾರೆ.
ಹುಡುಗರಿಬ್ಬರು ಆಕೆಯನ್ನು ಭರೌಲಾ ಮತ್ತು ಛತನ್ ಪಕ್ಕದ ಅರಣ್ಯಕ್ಕೆ ಕರೆದೊಯ್ದು ಬೆದರಿಸಿ ಅತ್ಯಾಚಾರ ಎಸಗಿದ್ದಾರೆ. ಇದಾದ ಬಳಿಕ ಎನ್ಎಸ್43ನಲ್ಲಿರುವ ಡಾಬಾಗೆ ಕರೆದೊಯ್ದು ರಾತ್ರಿಯೆಲ್ಲ ಒತ್ತೆಯಾಳಾಗಿರಿಸಿಕೊಂಡಿದ್ದಾರೆ. ರಾಹುಲ್ ಮತ್ತು ಆಕಾಶ್ ಹೊರತುಪಡಿಸಿ, ಡಾಬಾ ಆಪರೇಟರ್ ಪರಾಸ್ ಸೋನಿ ಮತ್ತು ಸಹೋದ್ಯೋಗಿಗಳಾದ ಮನು ಕಿವಾತ್, ಒಂಕಾರ್ ರೈ, ಈತೇಂದ್ರ ಸಿಂಗ್ ಮತ್ತು ರಾಜನೀಶ್ ಛೌದರಿ ಗ್ಯಾಂಗ್ರೇಪ್ ಮಾಡಿದ್ದಾರೆ.
ಇದನ್ನೂ ಓದಿರಿ: ಹೃತಿಕ್- ಕಂಗನಾ ನಡುವೆ ಲೈಂಗಿಕ ಸಂಬಂಧ: ಗೋಸ್ವಾಮಿ ಚಾಟ್ ಸೋರಿಕೆ
ಇದಾದ ಬಳಿಕ ಮಾರನೇ ದಿನ ಆಕಾಶ್ ಮತ್ತು ರಾಹುಲ್ ವಿದ್ಯಾರ್ಥಿನಿಯನ್ನು ಕರೆದೊಯ್ದು ವಾಪಸ್ಸು ಅರಣ್ಯ ಪ್ರದೇಶದ ಬಳಿ ಬಿಟ್ಟು ಬಂದಿದ್ದಾರೆ. ಎರಡನೇ ದಿನದ ಬೆಳಗ್ಗೆ ಅಂದರೆ ಜ.12ರಂದು ಯುವತಿ ಟ್ರಕ್ ಚಾಲಕನನ್ನು ಡ್ರಾಪ್ ಕೇಳಿದ್ದಾಳೆ. ಹತ್ತಿಸಿಕೊಂಡ ಬಳಿಕ ಸ್ವಲ್ಪ ದೂರದ ನಂತರ ಚಾಲಕ ಆಕೆಯ ಮೇಲೆ ರೇಪ್ ಮಾಡಿದ್ದಾನೆ. ಬಳಿಕ ವಿಲಯತ್ ಕಲಾ ಬರವಾರ ಬಳಿಕ ಟೋಲ್ ಬಳಿ ವಿದ್ಯಾರ್ಥಿನಿಯನ್ನು ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ಮತ್ತೆ ಇನ್ನೊಂದು ಟ್ರಕ್ ಬಳಿ ಡ್ರಾಪ್ ಕೇಳಿದ್ದಾಳೆ. ಅಷ್ಟರಲ್ಲಾಗಲೇ ವಿದ್ಯಾರ್ಥಿನಿ ತುಂಬಾ ಸುಸ್ತಾಗಿದ್ದಳು. ಅದನ್ನು ಲಾಭವಾಗಿ ಮಾಡಿಕೊಂಡ ಚಾಲಕ ತಾನೂ ರೇಪ್ ಮಾಡಿದ್ದಾನೆ. ಬಳಿಕ ಅಮಾರಿಯಾ ಬಳಿ ಬಿಟ್ಟು ಎಸ್ಕೇಪ್ ಆಗಿದ್ದಾನೆ.
ಕೊನೆಗೂ ಮನೆಗೂ ತಲುಪಿದ ಸಂತ್ರಸ್ತೆ ನಡೆದ ಘಟನೆಯನ್ನು ಪಾಲಕರ ಮುಂದೆ ವಿವರಿಸಿದ್ದಾಳೆ. ಬಳಿಕ ಪಾಲಕರು ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಈ ಬಗ್ಗೆ ಮಾತನಾಡಿದ ಪೊಲೀಸ್ ವರಿಷ್ಠಾಧಿಕಾರಿ ಕ್ರೂರ ಘಟನೆಯಿಂದ ಸಂತ್ರಸ್ತೆ ತುಂಬಾ ಭೀತಿಗೆ ಒಳಗಾಗಿದ್ದಾಳೆ. ಏನು ನಡೆದಿದೆ ಎಂದು ಸರಿಯಾಗಿ ಹೇಳಲು ಆಕೆಗೆ ಸಾಧ್ಯವಾಗುತ್ತಿಲ್ಲ. 9 ಆರೋಪಿಗಳ ವಿರುದ್ಧ ಕೋಟ್ವಾಲಿ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 376 ಮತ್ತು ಪೋಕ್ಸೋ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿರಿ: 11 ಯುವತಿಯರನ್ನು ಮದ್ವೆಯಾಗಿ ವಂಚಿಸಿದ 23ರ ಯುವಕ: ಈತನ ಕಾಮಪುರಾಣ ಕೇಳಿ ಬೆಚ್ಚಿದ ಪೊಲೀಸರು!
ಅಲ್ಲದೆ, ಪ್ರಕರಣ ಸಂಬಂಧ ಆಕಾಶ್ ಸಿಂಗ್, ರಾಹುಲ್ ಕುಸ್ವಾಹ, ಮನು ಕಿವಾತ್, ಓಂಕಾರ್ ರೈ, ರಜನೀಶ್ ಚೌಧರಿ, ಪರಾಸ್ ಸೋನಿ ಮತ್ತು ಟ್ರಕ್ ಡ್ರೈವರ್, ರೋಹಿತ್ ಯಾದವ್ರನ್ನು ಬಂಧಿಸಲಾಗಿದೆ. ಇತೇಂದ್ರ ಮತ್ತು ಇತರೆ ಟ್ರಕ್ ಡ್ರೈವರ್ಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಎಲ್ಲ ಆರೋಪಿಗಳು 21 ರಿಂದ 30 ವರ್ಷ ವಯಸ್ಸಿನೊಳಗಿನವರಾಗಿದ್ದಾರೆ. ಟ್ರಕ್ ಡ್ರೈವರ್ ರೋಹಿತ್ ಸಿಧಿ ಮತ್ತು ಇತರೆ ಆರೋಪಿಗಳು ಉಮಾರಿಯಾದ ನಿವಾಸಿಗಳೆಂದು ಪೊಲೀಸ್ ವರಿಷ್ಠಾಧಿಕಾರಿ ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್)
ಕಾಂಡೋಮ್ ಚಿತ್ರವನ್ನು ಟ್ವೀಟ್ ಮಾಡಿ ಹಿಂದು ಭಾವನೆಗೆ ಧಕ್ಕೆ ತಂದ ನಟಿ ವಿರುದ್ಧ ಭಾರೀ ಆಕ್ರೋಶ!
ಅದ್ಧೂರಿ ಮದ್ವೆಯಾದ ಮಾರನೇ ದಿನವೇ ಪತ್ನಿಗೆ ಬಿಗ್ ಶಾಕ್ ಕೊಟ್ಟ ಪತಿಯಿಂದ ಮತ್ತೊಂದು ಆಘಾತ!
ನಿಮ್ಮ ಪ್ರಶ್ನೆ ಓದಿ ನಗ್ಬೇಕೋ, ಅಳ್ಬೆಕೋ ಗೊತ್ತಾಗ್ತಿಲ್ವಲ್ಲಾ ಸ್ವಾಮಿ… ಯಾವ ಕಾಲದಲ್ಲಿದ್ದೀರಿ ನೀವು?