ಮುಂಬೈ: ಸುಶಾಂತ್ ಸಿಂಗ್ ರಜಪೂತ್ ಜೀವಕ್ಕೆ ಅಪಾಯವಿದೆ…! ಇಂಥದ್ದೊಂದು ಆತಂಕಕಾರಿ ವಿಚಾರವನ್ನು ಆತನ ಸಾವಿಗೂ ನಾಲ್ಕು ತಿಂಗಳ ಮುನ್ನವೇ ಮುಂಬೈ ಪೊಲೀಸರ ಗಮನಕ್ಕೆ ತಂದಿತ್ತು ನಟನ ಕುಟುಂಬ…!
ಮುಂಬೈ ಪೊಲೀಸರಿಗೆ ಇಂಥದ್ದೊಂದು ವಾಟ್ಸ್ಯಾಪ್ ಸಂದೇಶ ಕಳುಹಿಸಿದ್ದರ ಸ್ಕ್ರೀನ್ಶಾಟ್ಅನ್ನು ಸುಶಾಂತ್ ಕುಟುಂಬ ಇದೀಗ ಬಹಿರಂಗಗೊಳಿಸಿದೆ.
ಸುಶಾಂತ್ ಜೀವಕ್ಕೆ ಅಪಾಯವಿದೆ ಹಾಗೂ ಗೆಳತಿ ರಿಯಾ ಚಕ್ರವರ್ತಿ ಆತನನ್ನು ಮುಂಬೈ ವಿಮಾನ ನಿಲ್ದಾಣಕ್ಕೆ ಸಮೀಪವಿರುವ ರೆಸಾರ್ಟ್ನಲ್ಲಿ ಮೂರು ತಿಂಗಳಿನಿಂದ ಇರಿಸಿದ್ದಾಳೆ ಎಂದು ಸಂದೇಶದಲ್ಲಿ ಹೇಳಲಾಗಿದೆ.
ಇದನ್ನೂ ಓದಿ; ರಿಯಾ ಭೇಟಿಗೂ ಮುನ್ನ ಹೇಗಿದ್ದ ಸುಶಾಂತ್; ಹಿಪ್ನೋಟೈಸ್ ಮಾಡಿದ್ದಳೇ ಗೆಳತಿ; ಜತೆಗಿದ್ದವರು ಹೇಳಿದ್ದೇನು?
ಈ ವಿಚಾರವನ್ನು ಸುಶಾಂತ್ ಕುಟುಂಬದ ಪರ ವಕೀಲರು ಹೇಳಿಕೊಂಡಿದ್ದರು. ಇದೀಗ ಅದಕ್ಕೆ ಸಾಕ್ಷ್ಯವನ್ನು ಬಿಡುಗಡೆ ಮಾಡಿದಂತಾಗಿದೆ. 2020ರ ಫೆಬ್ರವರಿ 25ರಂದು ಕಳುಹಿಸಿದ್ದ ಸಂದೇಶ ಇದಾಗಿದೆ.
ವಿಪರ್ಯಾಸವೆಂದರೆ, ಇದರ ಆಧಾರದಲ್ಲಿ ಮುಂಬೈ ಪೊಲೀಸರು ಯಾವುದೇ ಕ್ರಮಕೈಗೊಳ್ಳಲಿಲ್ಲ ಎಂದು ಕುಟುಂಬ ಆರೋಪಿಸಿದೆ. ಸುಶಾಂತ್ ಸಂಪೂರ್ಣವಾಗಿ ರಿಯಾಳ ನಿಯಂತ್ರಣದಲ್ಲಿದ್ದಾನೆ ಎಂದು ಈ ಸಂದೇಶದಲ್ಲಿ ಸ್ಪಷ್ಟವಾಗಿ ತಿಳಿಸಲಾಗಿತ್ತು.
ಇದನ್ನೂ ಓದಿ; ಸುಶಾಂತ್ ಸಿಂಗ್ ಸಾವಿನಲ್ಲಿ ರಿಯಾ ಚಕ್ರವರ್ತಿಯೇ ಸುಪಾರಿ ಕಿಲ್ಲರ್; ಸಿಡಿದೆದ್ದ ಬಿಹಾರ ಸಚಿವ
ಇದಾದ ಬಳಿಕ ಜೂನ್ 14ರಂದು ಸುಶಾಂತ್ ಸಿಂಗ್ ಶವ ಬಾಂದ್ರಾದ ತನ್ನ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.
ಸುಶಾಂತ್ ಸಿಂಗ್ ತಂದೆ ಕೃಷ್ಣಕುಮಾರ್ ಸಿಂಗ್ ಬಿಹಾರ ಪೊಲೀಸರಿಗೆ ದೂರು ನೀಡಿದ ಬಳಿಕ, ರಿಯಾಳನ್ನು ವಿಚಾರಣೆ ನಡೆಸಲು ಮುಂದಾಗಿದ್ದಾರೆ. ಆದರೆ, ಆಕೆ ವಿಚಾರಣೆಗೆ ಹಾಜರಾಗುವುದರಿಂದ ತಪ್ಪಿಸಿಕೊಳ್ಳುತ್ತಿದ್ದಾಳೆ ಎಂದು ಆರೋಪಿಸಲಾಗಿದೆ.
ಪಾಲಕರೊಂದಿಗೆ ಮಾತನಾಡಲೂ ಸುಶಾಂತ್ಗೆ ಬಿಡುತ್ತಿರಲಿಲ್ಲ; ರಿಯಾ ಬಂಡವಾಳ ಬಯಲು ಮಾಡಿದ ಆಪ್ತ ಗೆಳೆಯ..!