ಪಟನಾ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣವೀಗ ಇನ್ನಷ್ಟು ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಈ ಕೇಸ್ನೊಂದಿಗೆ ರಾಜಕೀಯ ಕೂಡ ಅಷ್ಟೇ ಜೋರಾಗಿಯೇ ತಳಕು ಹಾಕಿಕೊಂಡಿದೆ.
ಬಿಹಾರದ ಜೆಡಿಯು ನಾಯಕ ಹಾಗೂ ಸಚಿವ ಮಹೇಶ್ವರಿ ಹಜಾರಿ ಭಾರಿ ಹೇಳಿಕೆ ನೀಡುವುದರೊಂದಿಗೆ ಸುಶಾಂತ್ ಗೆಳತಿ ರಿಯಾ ಚಕ್ರವರ್ತಿ ವಿರುದ್ಧ ಹರಿಹಾಯ್ದಿದ್ದಾರೆ.
ರಿಯಾ ಚಕ್ರವರ್ತಿ ವಿಷಕನ್ಯೆಯಿದ್ದಂತೆ. ಆಕೆ ಸುಪಾರಿ ಕಿಲ್ಲರ್ ರೀತಿಯಲ್ಲಿ ಕೆಲಸ ಮಾಡಿದ್ದಾಳೆ. ಸುಶಾಂತ್ನನ್ನು ಪ್ರೀತಿಯ ಬಲೆಯಲ್ಲಿ ಕೆಡವಿ ತನ್ನ ಕಾರ್ಯ ಸಾಧಿಸಿದ್ದಾಳೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ; ಕಳೆದೊಂದು ವರ್ಷದಿಂದ ಸುಶಾಂತ್ ಸಿಂಗ್ ರಜಪೂತ್ಗೆ ಯಾವುದೋ ಚಿಂತೆ ಕಾಡುತ್ತಿತ್ತು…
ದೇಶದ ಮೂಲೆಮೂಲೆಗಳಿಂದ ಪ್ರತಿಭಾವಂತರು ಚಲನಚಿತ್ರ ಕ್ಷೇತ್ರದಲ್ಲಿ ನೆಲೆ ಕಂಡುಕೊಳ್ಳಲು ಬಯಸುತ್ತಾರೆ. ಆದರೆ, ಅವರ ವಿರುದ್ಧ ಕೆಲಸ ಮಾಡುವ ಬಹುದೊಡ್ಡ ಗ್ಯಾಂಗ್ ಕೂಡ ಅಲ್ಲಿದೆ. ಭಾರಿ ಷಡ್ಯಂತ್ರವನ್ನು ನಡೆಸಿಯೇ ರಿಯಾಳನ್ನು ಸುಶಾಂತ್ ಬಳಿಗೆ ಕಳುಹಿಸಲಾಗಿತ್ತು ಎಂದು ಅವರು ದೂರಿದ್ದಾರೆ.
ಸರ್ಕಾರ ಸುಶಾಂತ್ ಕುಟುಂಬದವರು, ಆತನ ಅಭಿಮಾನಿಗಳಿಗೆ ನ್ಯಾಯ ಕೊಡಿಸುವ ಕೆಲಸ ಮಾಡಲಿದೆ ಎಂದು ಹೇಳಿರುವ ಹಜಾರಿ, ಪ್ರಕರಣದ ಸಿಬಿಐ ತನಿಖೆ ನಡೆಸಬೇಕು ಎಂಬುದನ್ನು ಬೆಂಬಲಿಸುತ್ತೇನೆ. ತನಿಖೆ ನಡೆಸಿದ್ದೇ ಆದಲ್ಲಿ, ತಾನು ಹೇಳಿರುವ ಸತ್ಯವೇ ಹೊರಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ; ಸುಶಾಂತ್ ಸಿಂಗ್ ಆತ್ಮಹತ್ಯೆ ತನಿಖೆಗೆ ರೋಚಕ ತಿರುವು; ನಟನ ಖಾತೆಯಲ್ಲಿದ್ದ ಹಣ ಖರ್ಚು ಮಾಡುತ್ತಿದ್ದ ರಿಯಾ ಚಕ್ರವರ್ತಿ
ಈ ನಡುವೆ ರಿಯಾ ಚಕ್ರವರ್ತಿಯ ಇಡೀ ಕುಟುಂಬದ ವಿರುದ್ಧವೇ ಸುಶಾಂತ್ ಸಿಂಗ್ ತಂದೆ ಕೆ.ಕೆ. ಸಿಂಗ್ ದೂರು ನೀಡಿದ್ದಾರೆ. ರಿಯಾ ತಂದೆ ಇಂದ್ರಜಿತ್ ಚಕ್ರವರ್ತಿ, ತಾಯಿ ಸಂಧ್ಯಾ, ಸಹೋದರ ಶೋವಿಕ್ ಚಕ್ರವರ್ತಿ ಹಾಗೂ ಶ್ರುತಿ ಮೋದಿ ವಿರುದ್ಧ ದೂರು ನೀಡಿದ್ದಾರೆ.
ಸುಶಾಂತ್ನನ್ನು ಆರ್ಥಿಕವಾಗಿ ರಿಯಾ ದಿವಾಳಿ ಮಾಡಿದ್ದಳು. ಆಕೆಯ ಇಡೀ ಕುಟುಂಬವೇ ಇದರಲ್ಲಿ ಭಾಗಿಯಾಗಿತ್ತು ಎಂದು ಕೆ.ಕೆ. ಸಿಂಗ್ ದೂರಿದ್ದಾರೆ.
ಸುಶಾಂತ್ ಆತ್ಮಹತ್ಯೆಯ ಮೊದಲ ಯತ್ನ ಫಲಿಸಿರಲಿಲ್ಲ…! ಅಲ್ಲಿಗೆ ನಿಂತಿದ್ದರೆ ಬದುಕಿರುತ್ತಿದ್ದರೇ ಬಾಲಿವುಡ್ ನಟ…?