ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣ ದಿನವೂ ಒಂದಿಲ್ಲೊಂದು ತಿರುವು ಪಡೆಯುತ್ತಲೇ ಇದೆ. ಈಗ ಆತ ನೇಣು ಹಾಕಿಕೊಳ್ಳಲು ಬಳಸಿದ್ದೇನು ಎಂಬ ಬಗ್ಗೆ ತನಿಖೆ ನಡೆದಿದೆ.
ಜೂನ್ 14ರಂದು ಬಾಂದ್ರಾದ ಮನೆಯಲ್ಲಿ ಸುಶಾಂತ್ ಸಿಂಗ್ ದೇಹ ನೇಣು ಹಾಕಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಇದನ್ನು ನೋಡಿದ ಮನೆಗೆಲಸದವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ದೇಹವನ್ನು ಕೆಳಗಿಳಿಸಿ ಬೆಡ್ ಮೇಲೆ ಮಲಗಿಸಿದ್ದರು.
ಇದನ್ನೂ ಓದಿ; ಸುಶಾಂತ್ ಸಿಂಗ್ ಸಾವಿನ ಪ್ರಕರಣದ ಸಾಕ್ಷ್ಯಾಧಾರಗಳ ನಾಶ; ಬಿಜೆಪಿ ಸಂಸದೆ ಅನುಮಾನಕ್ಕೂ ಇದೆ ಸಾಕ್ಷ್ಯ
ಸುಶಾಂತ್ ನೇಣು ಹಾಕಿಕೊಳ್ಳಲು ಕುರ್ತಾ ಬಳಸಿಕೊಂಡಿದ್ದರು. ಅದನ್ನು ಕತ್ತರಿಸಿ ದೇಹವನ್ನು ಕೆಳಗಿಸಲಾಗಿತ್ತು. ಈ ವೇಳೆ ಬೆಡ್ ಮೇಲೆ ಮತ್ತೊಂದು ವಸ್ತು ಇರುವುದು ಪೊಲೀಸರ ಗಮನಕ್ಕೆ ಬಂದಿತ್ತು. ಅದು ಬಾತ್ರೂಮ್ನ ನಿಲುವಂಗಿಗೆ ಸುತ್ತಿಕೊಳ್ಳುತ್ತಿದ್ದ ಬಟ್ಟೆಯ ಬೆಲ್ಟ್ ಆಗಿತ್ತು. ಅದು ಎರಡು ತುಂಡಾಗಿತ್ತು.
ಸುಶಾಂತ್ ನೇಣು ಹಾಕಿಕೊಳ್ಳಲು ಮೊದಲು ಬಟ್ಟೆಯ ಬೆಲ್ಟ್ ಬಳಸಿದ್ದರು ಎಂಬುದು ಪೊಲೀಸರ ಅನುಮಾನ. ಅದು ಭಾರ ತಾಳದೆ ತುಂಡಾಗಿದೆ. ಅಲ್ಲಿಗೆ ಆತ್ಮಹತ್ಯೆಯ ಮೊದಲ ಯತ್ನ ಕೈಗೂಡಿಲ್ಲ. ಇಷ್ಟಕ್ಕೆ ಸುಶಾಂತ್ ಸುಮ್ಮನಾಗಿದ್ದರೆ….! ಖಂಡಿತ ದುರಂತದ ಗಳಿಗೆಯಿಂದ ಪಾರಾಗಿರುತ್ತಿದ್ದರಾ…?
ಇದನ್ನೂ ಓದಿ; ನಟ ಸುಶಾಂತ್ ಸಿಂಗ್ ರಜಪೂತ್ ಹಾದಿ ತುಳಿದ 16 ವರ್ಷದ ಟಿಕ್ಟಾಕ್ ನಟಿಯ ದುರಂತ ಅಂತ್ಯ..!
ಇಷ್ಟಾದ ಬಳಿಕ ಸುಶಾಂತ್ ಕಬೋಡ್ರ್ನಲ್ಲಿದ್ದ ಬಟ್ಟೆಗಳನ್ನೆಲ್ಲ ತಡಕಾಡಿ ಕುರ್ತಾ ಎತ್ತಿಕೊಂಡಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಕಬೋರ್ಡ್ನಲ್ಲಿದ್ದ ಬಟ್ಟೆಗಳೆಲ್ಲ ಚೆಲ್ಲಾಪಿಲ್ಲಿಯಾಗಿವೆ. ಅದರಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಇಷ್ಟಕ್ಕೂ ಕುರ್ತಾದ ಬಟ್ಟೆ ಅವರ ದೇಹದ ಭಾರ ತಾಳಿಕೊಳ್ಳುವಷ್ಟು ಗಟ್ಟಿಯಾಗಿತ್ತಾ ಎಂಬುದನ್ನು ಪತ್ತೆ ಹಚ್ಚಲು ಅದನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಜತೆಗೆ, ಬಟ್ಟೆಯ ಬೆಲ್ಟ್ ತುಂಡಾಗಿದ್ದೇಕೆ ಎಂಬುದನ್ನೂ ಪತ್ತೆ ಹಚ್ಚುತ್ತಿದ್ದಾರೆ. ಈ ಅಂಶಗಳು ತನಿಖೆಯಲ್ಲಿ ಮಹತ್ವದ ಪಾತ್ರ ವಹಿಸಲಿವೆ.