ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂಬ ಒತ್ತಡ ಕೇಳಿ ಬಂದರೂ ಸದ್ಯ ಮುಂಬೈ ಪೊಲೀಸರೇ ತನಿಖೆ ಮುಂದುವರಿಸಿದ್ದಾರೆ.
ಶನಿವಾರವಷ್ಟೇ ಆದಿತ್ಯ ಚೋಪ್ರಾ ಮುಂಬೈನ ವರ್ಸೋವಾ ಠಾಣೆಗೆ ಹಾಜರಾದ ಆದಿತ್ಯ ಚೋಪ್ರಾ ಹೇಳಿಕೆ ದಾಖಲಿಸಿದ್ದಾರೆ. ಮುಂದಿನ ಸರದಿ ಸುಶಾಂತ್ ಗೆಳತಿ ರಿಯಾ ಚಕ್ರವರ್ತಿಯದ್ದು ಎಂದು ಹೇಳಲಾಗಿದೆ.
ಈಗಾಗಲೇ ರಿಯಾ ಮುಂಬೈ ಪೊಲೀಸರೆದುರು ಒಮ್ಮೆ ಹಾಜರಾಗಿ ಹೇಳಿಕೆ ದಾಖಲಿಸಿದ್ದಾರೆ. ಮತ್ತೊಂದು ವಿಚಾರಣೆ ನಡೆಸಲು ಕಾರಣವಾಗಿರುವುದು ಒಂದು ಸ್ಫೋಟಕ ಮಾಹಿತಿ.
ಇದನ್ನೂ ಓದಿ; ಮದುವೆಗೆ ಸಜ್ಜಾಗುತ್ತಿದ್ದ ಸುಶಾಂತ್ ಸಿಂಗ್; ಹೊಸ ಮನೆ ಹುಡುಕಾಟದಲ್ಲಿದ್ದ ಗೆಳತಿ
ಸುಶಾಂತ್ ಖಾತೆಯಲ್ಲಿದ್ದ ಹಣವನ್ನೇ ರಿಯಾ ಚಕ್ರವರ್ತಿ ಕಳೆದ 11 ತಿಂಗಳಿನಿಂದ ಖರ್ಚು ಮಾಡುತ್ತಿದ್ದಳು…! ಇದರ ತನಿಖೆಗಾಗಿ ರಿಯಾಳನ್ನು ಮತ್ತೊಮ್ಮೆ ವಿಚಾರಣೆಗಾಗಿ ಕರೆಸಲು ಪೊಲೀಸರು ನಿರ್ಧರಿಸಿದ್ದಾರೆ.
ಯುರೋಪ್ಗೆ ಜಾಹೀರಾತೊಂದರ ಶೂಟಿಂಗ್ಗಾಗಿ ತೆರಳಿದ್ದಾಗ ಅದರ ವೆಚ್ಚವನ್ನು ಸುಶಾಂತ್ ತನ್ನ ಖಾತೆಯಿಂದಲೇ ಭರಿಸಿದ್ದ ಎನ್ನಲಾಗಿದೆ. ಸುಶಾಂತ್ ಸಾವಿನ ನಂತರ ಖಾತೆಗಳಲ್ಲಿದ್ದ ಹಣವೆಷ್ಟು ಅದನ್ನು ಬಳಸಿದ್ಯಾರು? ಯಾರನ್ನು ನಾಮಿನಿ ಮಾಡಿದ್ದ ಎಂಬೆಲ್ಲ ವಿಚಾರಗಳು ಕೂಡ ತನಿಖೆಗೊಳಪಟ್ಟಿವೆ.
ಇದನ್ನೂ ಓದಿ; ಸುಶಾಂತ್ ಆತ್ಮಹತ್ಯೆಯ ಮೊದಲ ಯತ್ನ ಫಲಿಸಿರಲಿಲ್ಲ…! ಅಲ್ಲಿಗೆ ನಿಂತಿದ್ದರೆ ಬದುಕಿರುತ್ತಿದ್ದರೇ ಬಾಲಿವುಡ್ ನಟ…?
ಖಿನ್ನತೆಯಿಂದ ಬಳಲುತ್ತಿದ್ದ ಸುಶಾಂತ್ ಈ ಹಿಂದೆ ಕೌನ್ಸೆಲ್ಲಿಂಗ್ಗೆ ಹಾಜರಾಗಿದ್ದ. ಆವಾಗಲೂ ರಿಯಾ ಆತನ ಜತೆಗಿದ್ದಳು ಎನ್ನಲಾಗಿದೆ. ಹೀಗಾಗಿ ತನಿಖೆಯ ಜಾಡು ಆರ್ಥಿಕ ಕಾರಣಗಳತ್ತ ತಿರುಗುತ್ತಿದೆ ಎಂದೇ ವಿಶ್ಲೇಷಿಸಲಾಗಿದೆ.