More

    ಜೀವನದಲ್ಲಿ ಜಿಗುಪ್ಸೆಗೊಂಡು ನೇಣು ಬಿಗಿದುಕೊಂಡು ಆತ್ಮಹತ್ಯೆ

    ರಾಣೆಬೆನ್ನೂರ: ತನ್ನ ವಾಹನ ಡಿಕ್ಕಿಯಾಗಿ ಓರ್ವ ಮೃತಪಟ್ಟಿದ್ದರಿಂದ ಮನನೊಂದು ಅಪಘಾತ ಪಡಿಸಿದ ವ್ಯಕ್ತಿ ಕೂಡ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಕಲವೆತ್ತು ಗ್ರಾಮದಲ್ಲಿ ಗುರುವಾರ ನಡೆದಿದೆ.
    ಗ್ರಾಮದ ವಸಂತ ಕೃಷ್ಣಪ್ಪ ಪಾಟೀಲ (22) ಮೃತ ವ್ಯಕ್ತಿ.
    ಈತ ಸ್ವರಾಜ್ ಮಜಡಾ ಗಾಡಿ ಓಡಿಸುತ್ತಿದ್ದ. ಕಳೆದ ಏಪ್ರೀಲ್ 18ರಂದು ಬೈಕ್‌ವೊಂದಕ್ಕೆ ಡಿಕ್ಕಿ ಪಡಿಸಿದ್ದರಿಂದ ಅದರ ಚಾಲಕ ಮೃತಪಟ್ಟಿದ್ದ. ಇದನ್ನೇ ಮನಸ್ಸಿಗೆ ಹಚ್ಚಿಕೊಂಡ ವಸಂತ ವಿಪರೀತ ಮದ್ಯ ಸೇವನೆ ಮಾಡುತ್ತ ಜೀವನದಲ್ಲಿ ಜಿಗುಪ್ಸೆ ಹೊಂದಿ ಎಣ್ಣೆಹೊಸಳ್ಳಿ ಬಳಿಯಿರುವ ಇಟ್ಟಿಗೆ ಭಟ್ಟಿವೊಂದರಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಈ ಕುರಿತು ಕುಮಾರಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts