ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಹಾರ ಪೊಲೀಸರು ವಿಚಾರಣೆ ಆರಂಭಿಸಿದ ದಿನದಿಂದ ಪ್ರಕರಣಕ್ಕೆ ಹಲವು ರೋಚಕ ತಿರುವುಗಳು ಸಿಗುತ್ತಲೇ ಇವೆ.
ರಿಯಾ ಚಕ್ರವರ್ತಿ ಹಾಗೂ ಆಕೆಯ ಕುಟುಂಬದ ವಿರುದ್ಧ ಸುಶಾಂತ್ ತಂದೆ ಕೆ.ಕೆ. ಸಿಂಗ್ ಪ್ರಕರಣ ದಾಖಲಿಸುತ್ತಿದ್ದಂತೆ ಆಕೆಯ ವಿರುದ್ಧ ಹಲವರು ಮಾತನಾಡುತ್ತಿದ್ದಾರೆ. ಸುಶಾಂತ್ನ ಹಲವು ಗೆಳೆಯರು ರಿಯಾ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ; ಪಾಲಕರೊಂದಿಗೆ ಮಾತನಾಡಲೂ ಸುಶಾಂತ್ಗೆ ಬಿಡುತ್ತಿರಲಿಲ್ಲ; ರಿಯಾ ಬಂಡವಾಳ ಬಯಲು ಮಾಡಿದ ಆಪ್ತ ಗೆಳೆಯ..!
ಸುಶಾಂತ್ ಜತೆಗಿದ್ದುಕೊಂಡು ಮೂರು ವರ್ಷ ಕೆಲಸ ಮಾಡಿದ್ದ ಅಂಕಿತ್ ಆಚಾರ್ಯ ಕೂಡ ರಿಯಾ ಬಗ್ಗೆ ಹಲವು ಮಾಹಿತಿಯನ್ನು ಹೊರ ಹಾಕಿದ್ದಾನೆ. ಮೊದಲೆಲ್ಲ ನನ್ನನ್ನು ಬಿಗಿದಪ್ಪಿ ಮಾತನಾಡಿಸುತ್ತಿದ್ದ, ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದ ಸುಶಾಂತ್ ನಡವಳಿಕೆ ರಿಯಾಳ ಆಗಮನದಿಂದ ಭಾರಿ ಬದಲಾವಣೆಯಾಗಿತ್ತು ಎಂದು ಹೇಳಿದ್ದಾನೆ.
ಮೊದಲೆಲ್ಲ ಎದ್ದಾಗ ಚಂದ್ರನ ಬಗ್ಗೆ ಮಾತನಾಡುತ್ತಿದ್ದ, ಸ್ನೇಹಿತರ ಭೇಟಿಗಾಗಿ ಹೋಗುತ್ತಿದ್ದ. ಅವರೊಂದಿಗೆ ಪಾರ್ಟಿ ಮಾಡುತ್ತಿದ್ದ. ವರ್ಚುವಲ್ ರಿಯಾಲಿಟಿ ಗೇಮ್ ಆರಂಭಿಸುವ ಕನಸು ಹೊಂದಿದ್ದ. ಕೃಷಿಯಲ್ಲಿ ಆಸಕ್ತಿ ಹೊಂದಿ ಫಾರ್ಮ್ಹೌಸ್ ಮಾಡಿಕೊಂಡಿದ್ದ.
ಇದನ್ನೂ ಓದಿ; ಸುಶಾಂತ್ ಸಿಂಗ್ ಸಾವಿನಲ್ಲಿ ರಿಯಾ ಚಕ್ರವರ್ತಿಯೇ ಸುಪಾರಿ ಕಿಲ್ಲರ್; ಸಿಡಿದೆದ್ದ ಬಿಹಾರ ಸಚಿವ
ಆರಂಭದಲ್ಲಿ ರಿಯಾಳ ಜತೆ ಸುಶಾಂತ್ಗೆ ಅಂಥ ಬಾಂಧವ್ಯ ಇರಲಿಲ್ಲ. ಬಳಿಕ ಆಕೆ ಎಲ್ಲವನ್ನೂ ತನ್ನ ಹಿಡಿತಕ್ಕೆ ತೆಗೆದುಕೊಂಡಳು. ಆತನೆಷ್ಟು ತಿನ್ನಬೇಕು. ಯಾವಾಗ ತಿನ್ನಬೇಕು ಎಂಬುದನ್ನು ರಿಯಾ ನಿರ್ಧರಿಸುತ್ತಿದ್ದಳು ಎಂದು ಅಂಕಿತ್ ಹೇಳಿದ್ದಾನೆ.
ಸಿಬ್ಬಂದಿ ಪೈಕಿ ಅಶೋಕ್ ಮತ್ತು ನಾನು ಸುಶಾಂತ್ಗೆ ಆತ್ಮೀಯರಾಗಿದ್ದೇವು. ಅಶೋಕ್ನನ್ನು ಕೆಲಸದಿಂದ ತೆಗೆದಿದ್ದು ರಿಯಾ. ಏಕೆಂದರೆ ಎಲ್ಲವನ್ನೂ ಅವಳು ನೋಡಿಕೊಳ್ಳುತ್ತಿದ್ದಳು. ಆಕೆ ಸುಶಾಂತ್ ಮೇಲೆ ಸಮ್ಮೋಹನದಂತೆ (ಹಿಪ್ನೋಟೈಸ್) ಆವರಿಸಿಕೊಂಡಿದ್ದಳು ಎಂದು ತಿಳಿಸಿದ್ದಾನೆ.
ಜಗತ್ತಿನ ಮೊದಲ ಕರೊನಾ ಲಸಿಕೆ ರಷ್ಯಾದಲ್ಲಿ ಸಿದ್ಧ; ಅಕ್ಟೋಬರ್ನಲ್ಲಿ ಎಲ್ಲರಿಗೂ ಲಭ್ಯ; ಸ್ಪುಟ್ನಿಕ್ ಯಶಸ್ಸಿಗೆ ಹೋಲಿಕೆ