ಹೈದರಾಬಾದ್: ‘ಕುರ್ಚಿನಿ ಮಡತಪೆಟ್ಟಿ’ ಹಾಡು ಮತ್ತು ವಿಶೇಷ ಡಾನ್ಸ್ ಸ್ಟೆಪ್ಸ್ನಿಂದಲೇ ಮಹೇಶ್ ಬಾಬು ನಟನೆಯ ಹಾಗೂ ತ್ರಿವಿಕ್ರಮ್ ಶ್ರೀನಿವಾಸ್ ನಟನೆಯ ಗುಂಟೂರು ಖಾರಂ ಸಿನಿಮಾ ಭಾರಿ ಹೈಪ್ ಕ್ರಿಯೆಟ್ ಮಾಡಿತ್ತು. ಇಂದಿಗೂ ಈ ಚಿತ್ರದ ಹಾಡು ಮತ್ತು ಡಾನ್ಸ್ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಲೇ ಇದೆ. ಅದರಲ್ಲೂ ರೀಲ್ಸ್ನಲ್ಲಿ ಬಹುತೇಕ ಮಂದಿ ಕುರ್ಚಿನಿ ಮಡತಪೆಟ್ಟಿ ಹಾಡಿಗೆ ಸೊಂಟ ಬಳುಕಿಸಿದ್ದಾರೆ.
ಈ ಹಾಡಿನಲ್ಲಿ ಮಹೇಶ್ ಬಾಬುಗಿಂತ ವಿಶೇಷ ಗಮನ ಸೆಳೆದಿದ್ದ ನಮ್ಮ ಕನ್ನಡತಿ ಶ್ರೀಲೀಲಾ. ಅವರ ಮಾದಕ ಡಾನ್ಸ್ಗೆ ಮರಳಾಗದವರೇ ಇಲ್ಲ ಎನ್ನಬಹುದು. ಇದೀಗ ಆ ಸಾಲಿಗೆ ಟೀಮ್ ಇಂಡಿಯಾ ಸ್ಟಾರ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಕೂಡ ಸೇರಿದ್ದಾರೆ. ಚಿತ್ರದ ಹಾಡು ಮತ್ತು ಶ್ರೀಲೀಲಾ ಡಾನ್ಸ್ ಸ್ಟೆಪ್ಸ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ಇತ್ತೀಚೆಗೆ ಯೂಟ್ಯೂಬರ್ ಪ್ರಸನ್ನ ಅಗೋರಂ ಅವರೊಂದಿಗೆ ಸಂವಾದ ನಡೆಸಿದ ಅಶ್ವಿನ್ ಚಿತ್ರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು. ಗುಂಟೂರು ಖಾರಂ ಸಿನಿಮಾವನ್ನು ‘ಜಾಲಿ ಮತ್ತು ಮನರಂಜನೆ’ ಎಂದು ಕರೆದರು. ಅದರಲ್ಲೂ ‘ಕುರ್ಚಿನಿ ಮಡತಪೆಟ್ಟಿ’ ಹಾಡಿಗಾಗಿ ಶ್ರೀಲೀಲಾ ಅವರ ಡಾನ್ಸ್ ಸ್ಟೆಪ್ಸ್ಗಳ ಬಗ್ಗೆ ವಿಶೇಷವಾಗಿ ಮೆಚ್ಚುಗೆ ವ್ಯಕ್ತಪಡಿಸಿದರು. ಶ್ರೀಲೀಲಾ ಅವರ ಡಾನ್ಸ್ ಅದ್ಭುತವಾಗಿದೆ ಮತ್ತು ನನಗೆ ಹುಚ್ಚು ಹಿಡಿಸಿದೆ ಎಂದರು. ಹಾಡಿನ ಮೇಕಿಂಗ್ ನನಗೆ ತುಂಬಾ ಇಷ್ಟವಾಯಿತು ಎಂದರು.
ಗುಂಟೂರು ಖಾರಂ ಸಿನಿಮಾವನ್ನು ವೀಕ್ಷಿಸಲು ಅಶ್ವಿನ್ ಶಿಫಾರಸು ಮಾಡಿದರು. ಮಹೇಶ್ ಬಾಬು ಅವರು ಅತ್ಯುತ್ತಮ ನೃತ್ಯಗಾರ ಎಂದರು. ಈ ಹಾಡಿನ ಬಗ್ಗೆ ಕುತೂಹಲ ಇರುವವರು ಯೂಟ್ಯೂಬ್ನಲ್ಲಿ ಸರ್ಚ್ ಮಾಡುವಂತೆ ಸೂಚಿಸಿದರು.
ಅಂದಹಾಗೆ ಗುಂಟೂರು ಖಾರಂ ಸಿನಿಮಾ ನೆಟ್ಫ್ಲಿಕ್ಸ್ನಲ್ಲಿ ಲಭ್ಯವಿದೆ. ಈ ಸಿನಿಮಾ ಬಾಕ್ಸ್ಆಫೀಸ್ನಲ್ಲಿ ಹೇಳಿಕೊಳ್ಳುವಷ್ಟು ಗಳಿಕೆ ಮಾಡಲಿಲ್ಲ. ಕುರ್ಚಿನಿ ಮಡತಪೆಟ್ಟಿ ಹಾಡಿಗೆ ಸಿಕ್ಕ ಯಶಸ್ಸು ಕೂಡ ಈ ಸಿನಿಮಾಗೆ ಸಿಗಲಿಲ್ಲ. ಈ ಸಿನಿಮಾ ಎದುರು ತೆರೆಕಂಡ ಹನುಮಾನ್ ಸಿನಿಮಾ ಒಳ್ಳೆಯ ಹೆಸರು ಮತ್ತು ಕಲೆಕ್ಷನ್ ಮಾಡಿತು. ಆದರೆ, ಗುಂಟೂರು ಖಾರಂ ಸಿನಿಮಾದ ಹಾಡುಗಳು ಮಾತ್ರ ಇಂದಿಗೂ ಬಾರಿ ಸದ್ದು ಮಾಡುತ್ತಲೇ ಇದೆ. (ಏಜೆನ್ಸೀಸ್)
ಬಾಲಕಿ ದತ್ತು ಪ್ರಕರಣ: ರೀಲ್ಸ್ ರಾಣಿ ಸೋನು ಶ್ರೀನಿವಾಸ್ ಗೌಡ ಪೊಲೀಸ್ ವಿಚಾರಣೆ ವೇಳೆ ಹೇಳಿದ್ದಿಷ್ಟು…
ಬಾಲಕಿ ದತ್ತು ಪ್ರಕರಣ: ರೀಲ್ಸ್ ರಾಣಿ ಸೋನು ಶ್ರೀನಿವಾಸ್ ಗೌಡ ಪೊಲೀಸ್ ವಿಚಾರಣೆ ವೇಳೆ ಹೇಳಿದ್ದಿಷ್ಟು…