More

    ಮದ್ವೆಯಾದ ಕೆಲವೇ ತಿಂಗಳಲ್ಲಿ ನಟಿಯ ಕಳ್ಳಾಟ ಗಂಡನಿಂದಲೇ ಬಯಲು: ಮನೆಯ ಕಬೋರ್ಡ್​ನಲ್ಲಿ ಕಾಂಡೋಮ್ಸ್​ ಪತ್ತೆ

    ಹೈದರಾಬಾದ್​: ಚಿತ್ರರಂಗದಲ್ಲಿ ಪ್ರೀತಿ, ಮದುವೆ, ವಿವಾಹೇತರ ಸಂಬಂಧ ಹಾಗೂ ವಿಚ್ಛೇದನ ಕುರಿತ ಮಾತುಗಳು ಹೆಚ್ಚಾಗಿ ಕೇಳಿ ಬರುವುದು ನಿಮಗೆಲ್ಲರಿಗೂ ಗೊತ್ತೇ ಇದೆ. ಇಂತಹ ಸಂಗತಿಗಳು ಮಾಧ್ಯಮಗಳಲ್ಲಿ ಹಾಟ್ ಟಾಪಿಕ್ ಸಹ ಆಗುತ್ತವೆ. ಅದೇ ರೀತಿ ಇತ್ತೀಚೆಗೆ ಟಾಲಿವುಡ್​ನ ಖ್ಯಾತ ಧಾರಾವಾಹಿ ನಟಿ ಐಶ್ವರ್ಯಾ ಅಡ್ಡಾಳ ಹೆಸರು ಹೆಚ್ಚು ಚರ್ಚೆಯಲ್ಲಿದೆ.

    ಪತ್ನಿ ನನಗೆ ಕಿರುಕುಳ ನೀಡುತ್ತಿದ್ದಾಳೆ ಮತ್ತು ಡಿವೋರ್ಸ್​ ಕೇಳುತ್ತಿದ್ದಾಳೆ ಎಂದು ಐಶ್ವರ್ಯಾ ಪತಿ ಶ್ಯಾಮ್​ ಕುಮಾರ್ ಅವರು​ ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡ ಬಳಿಕ ಐಶ್ವರ್ಯಾ ಕುರಿತ ಸಾಕಷ್ಟು ಸಂಗತಿಗಳು ಬಯಲಿಗೆ ಬರುತ್ತಿವೆ. ಇತ್ತೀಚೆಗೆ ಮಾಧ್ಯಮಗಳ ಮುಂದೆ ಬಂದ ಶ್ಯಾಮ್​ ಕುಮಾರ್, ತನ್ನ ಪತ್ನಿಯ ವಿರುದ್ಧ ಸಂಚಲನಾತ್ಮಕ ಹೇಳಿಕೆಯನ್ನು ನೀಡಿದ್ದಾರೆ. ಐಶ್ವರ್ಯಾಗೆ ಬೇರೊಬ್ಬನ ಜತೆ ಅನೈತಿಕ ಸಂಬಂಧ ಇದೆ ಮತ್ತು ನನ್ನ ಬಳಿ 25 ಲಕ್ಷ ರೂ. ಪಡೆದುಕೊಂಡು, ಇದೀಗ ಕಿರುಕುಳ ನೀಡುತ್ತಿದ್ದಾಳೆ ಎಂದು ಆರೋಪಿಸಿದ್ದಾರೆ.

    ನಟಿ ಐಶ್ವರ್ಯಾ ಅಡ್ಡಾಳ, ತೇತಿಯ ಗಾರು, ಪಲುಕೆ ಬಂಗಾರಮಾಯೆನಾ, ಅಲ ವೈಕುಂಠಪುರಂ, ಅತ್ತಾರಿಂಟಿಕಿ ದಾರೇದಿ ಮುಂತಾದ ಧಾರಾವಾಹಿಗಳ ಮೂಲಕ ಉತ್ತಮ ಮನ್ನಣೆ ಗಳಿಸಿದ್ದಾರೆ. 2023ರ ಸೆ. 6ರಂದು ಶ್ಯಾಮ್​ ಕುಮಾರ್​ ಎಂಬುವರನ್ನು ಐಶ್ವರ್ಯಾ ವರಿಸಿದರು. ಆದರೆ, ಅವರ ದಾಂಪತ್ಯ ಜೀವನ ಮೂರು ತಿಂಗಳು ಕೂಡ ಸರಿ ಇರಲಿಲ್ಲ. ಸಾಮಾನ್ಯವಾಗಿ ಗಂಡ, ಹೆಂಡತಿಗೆ ಕಿರುಕುಳ ನೀಡುತ್ತಾನೆ ಎಂದು ಹೆಚ್ಚಾಗಿ ಕೇಳುತ್ತೇವೆ. ಆದರೆ ಇಲ್ಲಿ ಅದು ವ್ಯತಿರಿಕ್ತವಾಗಿದೆ. ಪತ್ನಿಯೇ ಕಿರುಕುಳ ನೀಡುತ್ತಿದ್ದು, ವಿಚ್ಛೇದನ ಸಹ ಬಯಸುತ್ತಿದ್ದಾಳೆ ಎಂದು ಶ್ಯಾಮ್ ಕುಮಾರ್ ಮಾಧ್ಯಮದವರ ಮೊರೆ ಹೋಗಿದ್ದಾರೆ.

    ಇತ್ತೀಚೆಗಷ್ಟೇ ಶ್ಯಾಮ್​ ಕುಮಾರ್​ ಮತ್ತೊಮ್ಮೆ ಮಾಧ್ಯಮದವರ ಮುಂದೆ ಬಂದು, ಪತ್ನಿ ಐಶ್ವರ್ಯಾಳ ಅಕ್ರಮ ಸಂಬಂಧಕ್ಕೆ ಸಂಬಂಧಿಸಿದ ವಿಡಿಯೋಗಳು ಮತ್ತು ಆಡಿಯೋ ದಾಖಲೆಗಳಿವೆ ಎಂದು ಹೇಳಿದರು. ನನಗೆ ಮೋಸ ಮಾಡಿದ್ದಾಳೆ. ಆದರೆ, ನಾನು ಮೋಸ ಮಾಡಿದ್ದೇನೆ ಎಂಬಂತೆ ಎಲ್ಲೆಡೆ ಅಪಪ್ರಚಾರ ಮಾಡುತ್ತಿದ್ದಾಳೆ. ನಾನು ಅವಳ ಬಗ್ಗೆ ಯಾವುದೇ ವಿಚಾರಣೆ ಮಾಡದೆ ಮದುವೆಯಾದೆ. ಆಕೆ ತುಂಬಾ ಕುಡಿಯುತ್ತಾಳೆ ಮತ್ತು ವಾರಕ್ಕೊಮ್ಮೆ ಧೂಮಪಾನ ಮಾಡುತ್ತಾಳೆ. ಇದನ್ನೆಲ್ಲ ವಿಡಿಯೋ ಕಾಲ್​ನಲ್ಲಿ ನೋಡಿದೆ. ಮದುವೆಯ ಪ್ರಾರಂಭದಲ್ಲಿ ಎಲ್ಲವೂ ಚೆನ್ನಾಗಿರುವಂತೆ ಬಿಂಬಿಸಿದಳು. ಆದರೆ, ನಂತರದಲ್ಲಿ ಆಕೆಯ ನಿಜ ಬಣ್ಣ ಬಯಲಾಯಿತು ಎಂದು ಶ್ಯಾಮ್​ ಹೇಳಿದ್ದಾರೆ.

    ಹೈದರಾಬಾದಿಗೆ ಹೋದ ಬಳಿಕ ಆಕೆಯ ನಿಜ ಸ್ವರೂಪ ಹೊರಬಂತು. ರಮೇಶ್ ಬಾಬು ಎಂಬ ರಿಯಲ್ ಎಸ್ಟೇಟ್ ಉದ್ಯಮಿ ಜತೆ ಅನೈತಿಕ ಸಂಬಂಧ ಹೊಂದಿರುವುದು ಗೊತ್ತಾಗಿದೆ. ಕಬೋರ್ಡ್​ನಲ್ಲಿ ಆತನ ಜತೆ ಇರುವ ಫೋಟೋಗಳು ಮತ್ತು ಕಾಂಡೋಮ್ ಗಳು ಸಹ ಇವೆ. ಒಂದು ದಿನ ಐಶ್ವರ್ಯಾ ಮೊಬೈಲ್ ಒಡೆದಿತ್ತು. ನಾನು ಅದನ್ನು ರಿಪೇರಿ ಮಾಡುವಾಗ ಇಬ್ಬರಿಗೂ ಸಂಬಂಧಿಸಿದ ಫೋಟೋಗಳು ಮತ್ತು ಸಂದೇಶಗಳನ್ನು ನೋಡಿದೆ. ಅಲ್ಲದೆ, ಇಬ್ಬರು ಒಟ್ಟಿಗೆ ರೂಮಿನಲ್ಲಿದ್ದಾಗ ನೇರವಾಗಿ ನೋಡಿದೆ. ನನಗೆ ತುಂಬಾ ಅನ್ಯಾಯವಾಗಿದೆ ಮತ್ತು ನ್ಯಾಯ ದೊರಕಿಸಿ ಕೊಡಿ ಎಂದು ಶ್ಯಾಮ್​ ಕುಮಾರ್​ ಆಗ್ರಹಿಸಿದ್ದಾರೆ. (ಏಜೆನ್ಸೀಸ್​)

    ಲೋಕಸಭೆ ಚುನಾವಣೆಗೆ ಬಿಜೆಪಿ ಟಿಕೆಟ್​ ಸಿಕ್ಕ ಬೆನ್ನಲ್ಲೇ ಭಾವುಕ ಮಾತುಗಳನ್ನಾಡಿದ ರಾಜ ವಂಶಸ್ಥ ಯದುವೀರ್!

    ಸರ್ಕಾರಿ ಸಿಬ್ಬಂದಿ ವೇತನ ಏರಿಕೆ?; ಶೇ.25 ಪಗಾರ ಹೆಚ್ಚಳ ನಿಚ್ಚಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts