ಸುಶಾಂತ್ ಸಿಂಗ್ ರಜಪೂತ್ ಅವರ ಸಾವು, ಬಾಲಿವುಡ್ನಲ್ಲಿ ಹಲವು ಚರ್ಚೆಗಳನ್ನು ಹುಟ್ಟುಹಾಕಿದೆ. ಪ್ರಮುಖವಾಗಿ ಕಲಾವಿದರುಗಳನ್ನು ಹೇಗೆಲ್ಲಾ ದೂರ ಇಡಲಾಗುತ್ತಿದೆ ಎಂಬುದರ ಕುರಿತು ಚರ್ಚೆಗಳಾಗುತ್ತಿದ್ದು, ಹಲವು ಕಲಾವಿದರು, ತಾವೆಷ್ಟು ಕಷ್ಟಪಡಬೇಕಾಯಿತು ಎಂಬ ತಮ್ಮ ಹಳೆಯ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಈ ಸಾಲಿಗೆ ಇದೀಗ ಮಸ್ತ್ ಮಸ್ತ್ ಹುಡುಗಿ ರವೀನಾ ಸಹ ಸೇರಿಕೊಂಡಿದ್ದಾರೆ.
ಇದನ್ನೂ ಓದಿ: ಸುಶಾಂತ್ಗೆ ಡಿಪ್ರೆಶನ್ ಇದ್ದಿದ್ದು ಅವರ ತಂದೆಗೇ ಗೊತ್ತಿರಲಿಲ್ಲವಂತೆ!
ಸುಶಾಂತ್ ಸಾವಿನ ನಂತರ ರವೀನಾ ಸಹ ಚಿತ್ರರಂಗದಲ್ಲಿ ಸ್ಟ್ರಗಲ್ ಮಾಡುವುದು ಎಷ್ಟು ಕಷ್ಟ ಎಂಬ ವಿಷಯವನ್ನು ಬಿಚ್ಚಿಟ್ಟಿದ್ದಾರೆ. ಇಲ್ಲಿ ಹೀರೋಗಳು, ಅವರ ಗರ್ಲ್ಫ್ರೆಂಡ್ಗಳು, ಮಾಧ್ಯಮದವರು … ಹೇಗೆಲ್ಲಾ ಒಬ್ಬ ಕಲಾವಿದನನ್ನು ತುಳಿಯುತ್ತಾರೆ ಎಂಬುದನ್ನು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಕಂಡಿದ್ದಾರೆ.
ಇಲ್ಲಿ ನಿಜಕ್ಕೂ ಬಣಗಳಿವೆ. ಯಾರಾದರೂ ತಮ್ಮ ತಾಳಕ್ಕೆ ಕುಣಿಯುವುದಿಲ್ಲ ಎಂದರೆ, ಅವರನ್ನು ತಮಾಷೆ ಮಾಡುವುದಷ್ಟೇ ಅಲ್ಲ, ಅವರನ್ನು ನಿರ್ದಯವಾಗಿ ಚಿತ್ರದಿಂದ ಕಿತ್ತು ಬಿಸಾಡಲಾಗುತ್ತದೆ. ಹೀರೋಗಳು, ಅವರ ಗರ್ಲ್ಫ್ರೆಂಡ್ಗಳು, ಅವರ ಚಮಚಾಗಳು … ಸೇರಿ ಕೆರಿಯರ್ ಹಾಳು ಮಾಡುತ್ತಾರೆ. ಕೆಲವರು ತಿರುಗಿ ಬೀಳುತ್ತಾರೆ. ಇನ್ನೂ ಕೆಲವರು ಇದೆಲ್ಲದರ ಗೊಡವೆಯೇ ಬೇಡ ಎಂದು ಸುಮ್ಮನಿದ್ದುಬಿಡುತ್ತಾರೆ ಎಂದು ರವೀನಾ ಬರೆದುಕೊಕಂಡಿದ್ದಾರೆ.
ಇದನ್ನೂ ಓದಿ: ಸುಶಾಂತ್ ಅಭಿಮಾನಿಗಳ ಕೋಪಾಗ್ನಿಗೆ ಸಲ್ಮಾನ್ ಖಾನ್, ಕರಣ್ ಪ್ರತಿಕೃತಿ ದಹನ !
ಇಲ್ಲಿ ನಿಜ ಯಾರಿಗೂ ಬೇಡ ಎಂದು ಅಭಿಪ್ರಾಯಪಟ್ಟಿರುವ ಅವರು, ನಿಜ ಹೇಳಿದರೆ ಅವರನ್ನು ಹುಚ್ಚ, ಸುಳ್ಳ ಎಂದು ಬ್ರಾಂಡ್ ಮಾಡಲಾಗುತ್ತದೆ. ಕೆಲವು ಮಾಧ್ಯಮದವರು ಅವರ ಬಗ್ಗೆ ಸುದೀರ್ಘವಾಗಿ ಸುದ್ದಿ ಮಾಡಿ, ಅವರ ಕೆರಿಯರ್ ಹಾಳು ಮಾಡುತ್ತಾರೆ. ಇದೆಲ್ಲದರಿಂದ ಬಹಳ ಕಷ್ಟಪಟ್ಟು ರೂಪಿಸಿಕೊಂಡಿರುವ ಕೆರಿಯರ್ ಹಾಳಾಗುತ್ತದೆ. ನಮ್ಮ ತಂದೆ ಸಹ ನಿರ್ದೇಶಕರಾಗಿದ್ದರು. ಆದರೆ, ನಾನು ಸಹ ಸಾಕಷ್ಟು ಸ್ಟ್ರಗಲ್ ಮಾಡಿದ್ದೇನೆ. ಇವತ್ತು ಈ ಚಿತ್ರರಂಗ ನನಗೆಲ್ಲಾ ಕೊಟ್ಟಿದೆ. ಆದರೂ ಇಲ್ಲಿನ ಡರ್ಟಿ ಪಾಲಿಟಿಕ್ಸ್ ಸಾಕಷ್ಟು ಬೇಸರ ತರಿಸಿದೆ ಎಂದು ರವೀನಾ ಟ್ವೀಟ್ ಮಾಡಿದ್ದಾರೆ.
ಸುಶಾಂತ್ ಆತ್ಮಹತ್ಯೆ; ಸಲ್ಮಾನ್ ಖಾನ್, ಕರಣ್ ಜೋಹರ್ ಸೇರಿ 8 ಜನರ ವಿರುದ್ಧ ದಾಖಲಾಯ್ತು ಕೇಸ್!