ಮುಂಬೈ: ಕಳೆದ ಆರು ತಿಂಗಳಿಂದ ಲಾಕ್ಡೌನ್ ಹಿನ್ನೆಲೆಯಲ್ಲಿ ಮನೆಯಲ್ಲಿಯೇ ಕಾಲ ಕಳೆದ ಸಿನಿಮಾ ಮಂದಿ, ಇದೀಗ ಶೂಟಿಂಗ್ ಸಲುವಾಗಿ ಒಬ್ಬೊಬ್ಬರೇ ಹೊರ ಬರುತ್ತಿದ್ದಾರೆ. ಸ್ಟಾರ್ ಕಲಾವಿದರು ಈಗಾಗಲೇ ಶೂಟಿಂಗ್ನಲ್ಲಿ ಪಾಲ್ಗೊಂಡಿದ್ದಾರೆ. ಇತ್ತೀಚೆಗಷ್ಟೇ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಸಹ ಗೋವಾದತ್ತ ಮುಖ ಮಾಡಿದ್ದಾರೆ. ಇದೀಗ ರಣವೀರ್ ಸಿಂಗ್ ಸರದಿ.
ಇದನ್ನೂ ಓದಿ: ನ್ಯಾಯ ಸಿಗುವ ನಿರೀಕ್ಷೆ ಎಂದ ಕಂಗನಾ
ಹಾಗಂತ ಅವರು ಹೊರಗಡೆಯ ಲೊಕೇಷನ್ಗಳಿಗೆ ತೆರಳಿ ಚಿತ್ರೀಕರಣ ಮಾಡುತ್ತಿಲ್ಲ. ಬದಲಿಗೆ ಕೋವಿಡ್ 19 ನಿಂದಾಗಿ ಸ್ಥಗಿತಗೊಂಡಿದ್ದ ಸ್ಟುಡಿಯೋಗಳಲ್ಲಿ ಕೆಲಸ ಮಾಡಲು ಮುಂದಾಗಿದ್ದಾರೆ. ರಣವೀರ್ ಅವರ ಈ ನಿರ್ಧಾರ ಸ್ಟುಡಿಯೋ ಮಾಲೀಕರಿಗೆ ಧೈರ್ಯ ಬಂದಂತಾಗಿದೆ. ಈ ಮೂಲಕವಾದರೂ, ಸಿನಿಮಾ ಮಂದಿ ಮತ್ತೆ ಸ್ಟುಡಿಯೋಗಳತ್ತ ಮುಖ ಮಾಡಲಿ ಎಂದು ಚಿತ್ರ ನಿರ್ಮಾಪಕರೂ ಕೇಳಿಕೊಂಡಿದ್ದಾರೆ.
ಚಿತ್ರಮಂದಿರ ಸ್ಥಗಿತಗೊಂಡಿದ್ದರಿಂದ ವ್ಯವಹಾರ ನಿಂತಿದೆ. ಅದರಲ್ಲೂ ಔಟ್ಡೋರ್ ಚಿತ್ರೀಕರಣಕ್ಕೆ ಹೆಚ್ಚಿನ ವೆಚ್ಚ ತಗುಲಲಿದೆ. ಇದು ನಿರ್ಮಾಪಕರಿಗೆ ಹೊರೆಯಾಗುತ್ತಿರುವುದರಿಂದ, ಆ ಭಾರವನ್ನು ಇಳಿಸುವ ರಣವೀರ್ ಈ ಸಾಹಸಕ್ಕೆ ಮುಂದಾಗಿದ್ದಾರೆ.
ಹಾಗಂತ ಇದು ಸಿನಿಮಾ ಶೂಟಿಂಗ್ ಅಲ್ಲ. ಬದಲಿಗೆ ಜಾಹೀರಾತು ಚಿತ್ರೀಕರಣ. ದೀಪಿಕಾ ಸಿನಿಮಾ ಶೂಟಿಂಗ್ನಲ್ಲಿ ಪಾಲ್ಗೊಳ್ಳುವುದಕ್ಕೂ ಮುನ್ನ ಮೂರೇ ದಿನದಲ್ಲಿ 10ಕ್ಕೂ ಅಧಿಕ ಜಾಹೀರಾತುಗಳಲ್ಲಿ ಪಾಲ್ಗೊಂಡಿದ್ದರು. ಇದೀಗ ರಣವೀರ್ ಸಹ ಮುಂಬೈನ ಸಬರ್ಬನ್ ಸೆಟ್ನಲ್ಲಿ ಜಾಹೀರಾತು ಶೂಟಿಂಗ್ನಲ್ಲಿ ಭಾಗಿಯಾಗಿದ್ದಾರೆ.
ಇದನ್ನೂ ಓದಿ: ಆರ್ಆರ್ಆರ್ನತ್ತ ಶ್ರೀಯಾ ಗಮನ
ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ, ಈಗಾಗಲೇ 83 ಚಿತ್ರದ ಕೆಲಸಗಳು ಮುಕ್ತಾಯವಾಗಿದ್ದು, ಜಯೇಶ್ಭಾಯ್ ಜೋರ್ಧಾರ್, ತಕ್ತ್ ಚಿತ್ರಗಳ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ.