More

    ರಾಮ್​ಚರಣ್​ಗೂ ಅಂಟಿದ ವೆಬ್​ ಸೀರೀಸ್​ ಮೋಹ … ಮಗನ ಜತೆ ನಿಲ್ತಾರಾ ಚಿರಂಜೀವಿ?

    ಟಾಲಿವುಡ್​ನಲ್ಲಿ ವೆಬ್​ ಸೀರೀಸ್​ನ ಮೋಹ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈಗಾಗಲೇ ಅಲ್ಲಿನ ಬಹಳ ದೊಡ್ಡ ದೊಡ್ಡ ನಟ-ನಟಿಯರೆಲ್ಲಾ ವೆಬ್​ ಸೀರೀಸ್​ನ ಹಿಂದೆ ಬಿದ್ದಿದ್ದಾರೆ. ಕೆಲವರು ವೆಬ್​ ಸೀರೀಸ್​ ನಿರ್ಮಾಣ ಮಾಡಿದರೆ, ಇನ್ನೂ ಕೆಲವರು ಅದರಲ್ಲಿ ನಟಿಸುತ್ತಿದ್ದಾರೆ. ಅಲ್ಲು ಅರವಿಂದ್​ ಮತ್ತು ಅವರ ಮಗ ಅಜ್ಜು ಅರ್ಜುನ್​, ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಆಹಾ ಎಂಬ ಓಟಿಟಿಯನ್ನೇ ಪ್ರಾರಂಭಿಸಿಬಿಟ್ಟಿದ್ದಾರೆ.

    ಈಗ್ಯಾಕೆ ಈ ವಿಷಯ ಎಂದರೆ, ಈ ಸಾಲಿಗೆ ಇದೀಗ ರಾಮ್​ಚರಣ್​ ತೇಜ ಸಹ ಸೇರಿದ್ದಾರೆ. ರಾಮ್​ಚರಣ್​ ಈಗಾಗಲೇ ಒಂದು ವೆಬ್​ ಸೀರೀಸ್​ ನಿರ್ಮಿಸುವ ಬಗ್ಗೆ ಯೋಚಿಸುತ್ತಿದ್ದು, ಈಗಾಗಲೇ ಕೆಲಸ ಪ್ರಾರಂಭಿಸಿದ್ದಾರೆ. ಕೆಲವು ತಿಂಗಳುಗಳ ಹಿಂದೆ ಸಮಂತಾ, ತಮನ್ನಾ ಮುಂತಾದವರೆಲ್ಲಾ ವೆಬ್​ ಸರಣಿಗಳನ್ನು ನಿರ್ಮಿಸುವುದಕ್ಕೆ ಪ್ರಯತ್ನ ಶುರು ಮಾಡಿದ್ದಾರೆ.

    ಇದನ್ನೂ ಓದಿ: ಕೋವಿಡ್​ ಸೋಂಕಿತರಿಗೆ ರಿಷಿ ಕಪೂರ್​ ಅಳಿಯನಿಂದ ಪ್ಲಾಸ್ಮಾ ದಾನ

    ಈಗ ರಾಮ್​ಚರಣ್​ ತೇಜ ಸಹ ಈ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದಾರೆ. ಅವರು ಇದೇ ಮೊದಲ ಬಾರಿಗೆ ವೆಬ್​ ಸೀರೀಸ್​ ನಿರ್ಮಿಸುತ್ತಿದ್ದಾರಾದರೂ, ನಿರ್ಮಾಣ ಅವರಿಗೆ ಹೊಸದೇನಲ್ಲ. ಈಗಾಗಲೇ ಅವರು ಚಿರಂಜೀವಿ ಅಭಿನಯದ ‘ಸೈರಾ ನರಸಿಂಹ ರೆಡ್ಡಿ’ ಚಿತ್ರವನ್ನು ನಿರ್ಮಿಸಿದ್ದಾರೆ. ಅಷ್ಟೇ ಅಲ್ಲ, ‘ಆಚಾರ್ಯ’ ಎಂಬ ಚಿತ್ರವನ್ನೂ ನಿರ್ಮಿಸುತ್ತಿದ್ದಾರೆ. ಹೀಗೆ ಚಿತ್ರ ನಿರ್ಮಾಣದ ಅನುಭವವಿರುವುದರಿಂದ, ಅವರಿಗೇನೂ ಇದು ಕಷ್ಟವಾಗುತ್ತದೆ ಎಂದನಿಸುವುದಿಲ್ಲ.

    ಎಲ್ಲಾ ಸರಿ, ರಾಮ್​ಚರಣ್​ ತೇಜ ನಿರ್ಮಾಣದ ಈ ವೆಬ್​ ಸರಣಿಯಲ್ಲಿ ಅವರ ತಂದೆ ಚಿರಂಜೀವಿ ಸಹ ಒಂದು ಪ್ರಮುಖ ಪಾತ್ರ ಮಾಡುತ್ತಾರಾ ಎಂಬ ಪ್ರಶ್ನೆ ಅವರ ಅಭಿಮಾನಿಗಳನ್ನು ಕಾಡುತ್ತಿದೆ. ಏಕೆಂದರೆ, ಈ ಹಿಂದೆ ರಾಮ್​ಚರಣ್​ ನಿರ್ಮಾಣದ ಚಿತ್ರಗಳಲ್ಲಿ ಚಿರಂಜೀವಿ ಕಾಣಿಸಿಕೊಂಡಿದ್ದರು. ಹಾಗನ್ನುವುದಕ್ಕಿಂತ, ಚಿರಂಜೀವಿ ಅಭಿನಯದ ಚಿತ್ರಗಳೆಂಬ ಕಾರಣಕ್ಕಾಗಿ, ರಾಮ್​ಚರಣ್​ ತೇಜ ನಿರ್ಮಾಪಕರಾಗಿದ್ದರು.

    ಈಗ ವೆಬ್​ ಸೀರೀಸ್​ ನಿರ್ಮಿಸುತ್ತಿರುವ ಹಿನ್ನೆಲೆಯಲ್ಲಿ, ಚಿರಂಜೀವಿ ಸಹ ಅದರಲ್ಲಿ ಒಂದು ಪ್ರಮುಖ ಪಾತ್ರ ಮಾಡುತ್ತಾರಾ ಅಥವಾ ಬೇರೆ ಯಾರಾದರೂ ದೊಡ್ಡ ಕಲಾವಿದರು ಅದರ ಭಾಗವಾಗುತ್ತಾರಾ ಎಂಬುದು ಎಲ್ಲರಲ್ಲೂ ಇರುವ ಒಂದು ಪ್ರಶ್ನೆ.

    ಇದನ್ನೂ ಓದಿ: ‘ಮರ್ಡರ್​’ ಸಿನಿಮಾ ವಿವಾದದ ಬೆನ್ನಲ್ಲೇ ಆರ್​ಜಿವಿ ಕೊಟ್ಟರು ಹೀಗೊಂದು ಸ್ಪಷ್ಟನೆ

    ಈ ಮಧ್ಯೆ, ತಮ್ಮ ಹೊಸ ಸಾಹಸದ ಬಗ್ಗೆ ರಾಮ್​ಚರಣ್​ ತೇಜ್​ ಎಲ್ಲೂ ತುಟಿಕ್​ ಪಿಟಿಕ್​ ಎಂದಿಲ್ಲ. ಎಲ್ಲವನ್ನೂ ಗೌಪ್ಯವಾಗಿಟ್ಟಿರುವ ಅವರು, ಸದ್ಯದಲ್ಲೇ ಅಧಿಕೃತವಾಗಿ ಎಲ್ಲವನ್ನೂ ಘೋಷಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

    ದೀಪಾವಳಿಗಾ? ಸಂಕ್ರಾಂತಿಗಾ? ‘ಮಾಸ್ಟರ್​’ ಬಿಡುಗಡೆ ಗೊಂದಲ ಮುಂದುವರೆದಿದೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts