ಬೆಂಗಳೂರು: ಲಾಕ್ಡೌನ್ನಲ್ಲಿ ಎಲ್ಲರೂ ಮನೆಯಲ್ಲಿದ್ದುಕೊಂಡೇ ಏನಾದರೊಂದು ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅದರಲ್ಲೂ ಸಿನಿಮಾ, ಸಂಗೀತ ಕ್ಷೇತ್ರಕ್ಕೆ ಸಂಬಂಧಿಸಿದವರಂತೂ ಏನಾದರೊಂದು ಮಾಡುತ್ತಲೇ ಇರುತ್ತಾರೆ. ಇದೀಗ ಗಾಯಕ ರಘು ದೀಕ್ಷಿತ್ ಗೀಯ ಗೀಯ ಗಾಗಿಯ ಗೀಯ ಹಾಡಿನ ಮೂಲಕ ಆಗಮಿಸಿದ್ದಾರೆ. ವಿಶೇಷ ಏನೆಂದರೆ, ಈ ಹಾಡಿಗೆ ವಾಸುಕಿ ವೈಭವ್ ಸಾಹಿತ್ಯ ಒದಗಿಸಿದ್ದಾರೆ.
ಓ ಮುಗಿಲೇರಲಿ ಹೆಜ್ಜಿ ಸಪ್ಪಳ ಕುಣಿಯುವಾಗ ಈ ರಾಗಕ್ಕ
ಲೇ ತಮ್ಮ! ಹಗುರಾಗಲಿ ಮನಸಿದು ತಪ್ಪದೆ ಓಡೋ ಕಾಲ ಕಾಲಕ್ಕ
ಏ…ಬ್ಯಾಡದ ಚಿಂತ್ಯಾಕ? ಕುರುಡು ಕಣಿಯಾಕ? ಹುಚ್ಚಾಗು ರಂಗಾಟಕ್ಕ!
ಲಂಗು ಲಗಾಮ್ಯಾಕ? ಜಗದೊಳಗ ಭಯವ್ಯಾಕ?
ಇರದಿರಲಿ ನಿನಗೇನೂ ಸರಿಸಾಟಿಯೇ!
ಅರೆ ಗೀಯ ಗೀಯ ಹಾಡು ಗೀಯ ಕೂಡಿ ಹಾಡ ಗಾಗೀಯಗೀಯ..
ಸಾಲುಗಳನ್ನು ವಾಸುಕಿ ವೈಭವ್ ನೀಡಿದ್ದು, ಮೈಕಲ್ ಲೀಗ್ ಗಂಬ್ರಿ ವಾದ್ಯದ ನಾದ ನೀಡಿದರೆ, ಪ್ರಶಾಂತ್ ಟೆಕ್ನೊ ಕೀಬೋರ್ಡ್, ಪ್ರೋಗ್ರಾಮಿಂಗ್ ಕೆಲಸ ಮಾಡಿದ್ದಾರೆ. ಸಂಗೀತದ ನೀಡಿ, ಧ್ವನಿ ನೀಡಿರುವುದು ರಘು ದೀಕ್ಷಿತ್. ಸದ್ಯ ರಘು ಅವರ ಯೂಟ್ಯೂಬ್ ಚಾನೆಲ್ನಲ್ಲಿ ಈ ಹಾಡು ಲಭ್ಯವಿದೆ.