ಕಾಂಚನ ಸಿನಿಮಾದ ಭರ್ಜರಿ ಯಶಸ್ಸಿನ ಬಳಿಕ ನಟ ರಾಘವ ಲಾರೆನ್ಸ್ ಬಗ್ಗೆ ಯಾರಿಗೂ ಹೆಚ್ಚಿಗೆ ಪರಿಚಯಿಸುವ ಅಗತ್ಯವಿಲ್ಲ. ಎಲ್ಲ ಭಾಷಿಕರಿಗೂ ಲಾರೆನ್ಸ್ ಮುಖ ಪರಿಚಯವಿದೆ. ಸಿನಿಮಾದ ಆರಂಭದ ದಿನಗಳಲ್ಲಿ ತನ್ನ ಡಾನ್ಸ್ನಿಂದಲೇ ಎಲ್ಲರ ಗಮನ ಸೆಳೆದ ಅವರು ಲಾರೆನ್ಸ್ ಮಾಸ್ಟರ್ ಎಂದೇ ಖ್ಯಾತಿ ಗಳಿಸಿದರು. ಇದೀಗ ನಟನಾಗಿ, ನಿರ್ದೇಶಕನಾಗಿಯೂ ಎಲ್ಲೆಡೆ ತಮ್ಮ ಛಾಪೂ ಮೂಡಿಸುತ್ತಿದ್ದಾರೆ. ಅಂದಹಾಗೆ ಲಾರೆನ್ಸ್ ಸಿನಿಮಾದಲ್ಲಿ ಮಾತ್ರ ಹೀರೋ ಆಗಿರದೆ ನಿಜ ಜೀವನದಲ್ಲೂ ಹೀರೋ ಆಗಿದ್ದಾರೆ. ಸಾಕಷ್ಟು ಬಡವರಿಗೆ ಆರ್ಥಿಕ ಸಹಾಯ ಮಾಡಿದ್ದಾರೆ. ಶಾಲಾ ಮಕ್ಕಳಿಗೆ ಶಿಕ್ಷಣಕ್ಕೆ ನೆರವಾಗಿದ್ದಾರೆ. ಬಡ ರೋಗಿಗಳ ಚಿಕಿತ್ಸೆಗೆ ಹಣ ಸಹಾಯ ಮಾಡಿದ್ದಾರೆ. ತಮ್ಮ ಸೇವಾ ಮನೋಭಾವದಿಂದಲೇ ಲಾರೆನ್ಸ್ ಒಳ್ಳೆಯ ಹೆಸರು ಮಾಡಿದ್ದಾರೆ.
ಇಲ್ಲಿಯವರೆಗೆ ಲಾರೆನ್ಸ್ ಸಹಾಯದ ಬಗ್ಗೆ ಹಲವಾರು ಸುದ್ದಿಗಳನ್ನು ಕೇಳಿದ್ದೇವೆ. ಇದೀಗ ಲಾರೆನ್ಸ್ ಮಾಸ್ಟರ್ ಅನ್ನು ಸ್ಪೂರ್ತಿಯಾಗಿ ತೆಗೆದುಕೊಂಡು ಹಾಸ್ಯ ನಟ ಕೆಪಿವೈ ಬಾಲಾ ಬಡವರಿಗೆ ನೆರವಾಗಿದ್ದಾದ್ದು, ಈ ಸುದ್ದಿ ಕಾಲಿವುಡ್ ನಲ್ಲಿ ಸಂಚಲನ ಮೂಡಿಸಿದ್ದಲ್ಲದೆ ಸೋಶಿಯಲ್ ಮೀಡಿಯಾದಲ್ಲೂ ಸ್ಫೂರ್ತಿಯನ್ನು ಹರಡಿದೆ.
ಅನೇಕರು ತಮ್ಮ ನೆಚ್ಚಿನ ನಾಯಕರ ಬಗ್ಗೆ ಮಾತನಾಡುತ್ತಾರೆ. ಆದರೆ, ಕೆಲವರು ಮಾತ್ರ ಅವರನ್ನೇ ಉದಾಹರಣೆಯಾಗಿ ತೆಗೆದುಕೊಂಡು ಅವರ ಹಾದಿಯಲ್ಲಿ ಮುಂದುವರಿಯುತ್ತಾರೆ. ಈ ಅನುಕ್ರಮದಲ್ಲಿ ಬಾಲಾ ಎಂಬ ಹಾಸ್ಯನಟ ಕಾಲಿವುಡ್ನಲ್ಲಿ ಸಂಚಲನ ಮೂಡಿಸಿದ್ದಾರೆ. ಚಿಕ್ಕ ಕಾಮಿಡಿ ಶೋ ಮೂಲಕ ತೆರೆ ಮೇಲೆ ಕಾಣಿಸಿಕೊಂಡರೂ ಅವರ ನಟನೆಗೆ ಉತ್ತಮ ಮನ್ನಣೆ ದೊರೆತಿದೆ. ಹೀಗಾಗಿ ತಮಿಳುನಾಡಿನಲ್ಲಿ ಬಾಲಾಗೆ ಒಳ್ಳೆಯ ಹೆಸರಿದೆ. ಈ ವ್ಯಕ್ತಿ ತನ್ನ ಆದಾಯವನ್ನು ಬಡವರಿಗೆ ಸಹಾಯ ಮಾಡಲು ಬಳಸುತ್ತಿದ್ದಾನೆ. ತಮ್ಮ ನೆಚ್ಚಿನ ನಾಯಕ ಲಾರೆನ್ಸ್ ಎಂದು ಹೇಳಿರುವ ಬಾಲಾ, ಸಹಾಯ ಮಾಡಲು ಅವರೇ ನನಗೆ ಸ್ಫೂರ್ತಿ ಎಂದಿದ್ದಾರೆ.
ಇತ್ತೀಚಿಗೆ ಲಾರೆನ್ಸ್ ಮತ್ತು ಬಾಲಾ ಬಡ ಮಹಿಳೆಯೊಬ್ಬರಿಗೆ ಸಹಾಯ ಮಾಡಿದ್ದಾರೆ. ಅದಕ್ಕೆ ಸಂಬಂಧಿಸಿದ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಸಹಾಯ ಪಡೆದ ಮಹಿಳೆಯ ಹೆಸರು ಮುರುಗಮ್ಮಳ್. ಈಕೆ ತಮಿಳುನಾಡಿನ ಮಹಿಳೆ. ಇವರಿಗೆ ಮೂವರು ಹೆಣ್ಣು ಮಕ್ಕಳಿದ್ದಾರೆ. ಮುರುಗಮ್ಮಳ್ ಮದುವೆಯಾದ ಕೆಲವೇ ವರ್ಷಗಳಲ್ಲಿ ತನ್ನ ಗಂಡನನ್ನು ಕಳೆದುಕೊಂಡರು. ಹೆಣ್ಣು ಮಕ್ಕಳನ್ನು ಪೋಷಿಸಲು ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತಾ ಸಾಕಷ್ಟು ಶ್ರಮಪಡುತ್ತಿದ್ದರು.
Service is god 🙏🏼🙏🏼 pic.twitter.com/LIeJA0Aej3
— Raghava Lawrence (@offl_Lawrence) March 29, 2024
ಮುರುಗಮ್ಮಳ್ ಅವರಿಗೆ ಆಟೋ ಓಡಿಸುವ ಆಸೆಯಿದ್ದರೂ ಆಟೋ ಖರೀದಿ ಮಾಡುವಷ್ಟು ಆರ್ಥಿಕ ಶಕ್ತಿ ಹೊಂದಿಲ್ಲ. ಇದನ್ನು ತಿಳಿದ ಬಾಲಾ, ಈ ವಿಚಾರವನ್ನು ಲಾರೆನ್ಸ್ ಅವರ ಗಮನಕ್ಕೆ ತಂದರು. ಇದಕ್ಕೆ ತಕ್ಷಣ ಸ್ಪಂದಿಸಿದ ಲಾರೆನ್ಸ್ ಆಕೆಗೆ 3 ಲಕ್ಷ ರೂಪಾಯಿಗೆ ಆಟೋ ಖರೀದಿಸಿದ್ದಾರೆ. ಅವಳ ಕಷ್ಟಕ್ಕೆ ಇಬ್ಬರೂ ಜೊತೆಯಾಗಿ ನಿಲ್ಲುವ ಮೂಲಕ ಬಡಕುಟುಂಬಕ್ಕೆ ಆಸರೆಯಾಗಿದ್ದಾರೆ. ಸದ್ಯ ಇದಕ್ಕೆ ಸಂಬಂಧಿಸಿದ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಇನ್ನು ಬಾಲಾ ಅವರು ಈಗಾಗಲೇ ಅನೇಕ ಬಡವರಿಗೆ ಸಹಾಯ ಮಾಡಿದ್ದಾರೆ. ಈ ವಿಷಯದ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ಗಳ ರೂಪದಲ್ಲಿ ಹಂಚಿಕೊಳ್ಳಿ. (ಏಜೆನ್ಸೀಸ್)
ಆರ್ಸಿಬಿಗೆ ಸೇರಿಕೊಳ್ಳಲಿದ್ದಾರೆ ರೋಹಿತ್ ಶರ್ಮ!? ನಾಯಕತ್ವವೂ ಕೂಡ ಹಿಟ್ಮ್ಯಾನ್ ಹೆಗಲಿಗೆ
ಇಂದು ಹೃದಯಾಘಾತದಿಂದ ಮೃತಪಟ್ಟ ಡೇನಿಯಲ್ ಬಾಲಾಜಿ ಕನ್ನಡದ ಖ್ಯಾತ ನಟನ ಸಹೋದರ!