ಕಲಬುರಗಿ: ಯೂಕ್ರೇನ್ ಮೇಲೆ ರಷ್ಯಾ ದಾಳಿ ವಿಕೋಪಕ್ಕೆ ತಿರುಗಿರುವ ಹಿನ್ನೆಲೆಯಲ್ಲಿ ಯೂಕ್ರೇನ್ನಲ್ಲಿ ಸಂಪೂರ್ಣ ಆತಂಕದ ವಾತಾವರಣ ನಿರ್ಮಾಣವಾಗಿದೆ. ಈಗಾಗಲೇ ವಿಮಾನ ಸಂಚಾರ ರದ್ದಾಗಿದ್ದು ರಾಜ್ಯದ ಕೆಲ ವಿದ್ಯಾರ್ಥಿಗಳು ಅಲ್ಲಿಯೇ ಸಿಲುಕಿ ಜೀವ ಭಯದಲ್ಲಿ ಸಮಯ ಕಳೆಯುತ್ತಿದ್ದಾರೆ.
ಯೂಕ್ರೇನ್ನ ಪ್ರಮುಖ ನಗರಗಳಲ್ಲಿ ಒಂದಾದ ಹಾಗೂ ರಷ್ಯಾ ದಾಳಿ ಮಾಡಿದ ನಗರವಾದ ಕಾರ್ಕಿವ್ನಲ್ಲಿ ಕಲಬುರಗಿಯ ಮೂವರು ವಿದ್ಯಾರ್ಥಿಗಳು ಸಿಲುಕಿದ್ದಾರೆ. ಎಂಬಿಬಿಎಸ್ ವಿದ್ಯಾರ್ಥಿಗಳಾದ ಮಲ್ಲಿನಾಥ್, ಶಶಾಂಕ್ ಹಾಗೂ ಜೀವಿತಾ ಯೂಕ್ರೇನ್ನಲ್ಲಿ ಜೀವ ಭಯದಲ್ಲಿ ದಿನದೂಡುತ್ತಿದ್ದಾರೆ.
ಇನ್ನು ಮೂವರು ವಿದ್ಯಾರ್ಥಿಗಳು ಇರುವ ಪ್ರದೇಶದ ಕೂಗಳತೆಯ ದೂರದಲ್ಲೇ ಬಾಂಬ್ ಸ್ಫೋಟ ಸಂಭವಿಸಿದೆ. ಸ್ಫೋಟದ ಶಬ್ದಕ್ಕೆ ಹಾಸ್ಟೆಲ್ ನಡುಗಿದ ಅನುಭವವಾಗಿದ್ದು, ವಿದ್ಯಾರ್ಥಿಗಳು ಬೆಚ್ಚಿ ಬಿದಿದ್ದಾರೆ. ಕರ್ನಾಟಕದ ವಿದ್ಯಾರ್ಥಿಗಳು ಉಳಿದುಕೊಂಡಿರುವ ಹಾಸ್ಟೆಲ್ನ ಕಿಟಕಿ, ಗಾಜುಗಳು ಹೊಡೆದಿದ್ದು, ಕೋಣೆಗಳು ಬಿರುಕುಗೊಂಡು ಹಿನ್ನೆಲೆಯಲ್ಲಿ ಅವರನ್ನು ಆಶ್ರಯ ಶಿಬಿರಗಳಿಗೆ ಸ್ಥಳಾಂತರ ಮಾಡಲಾಗಿದೆ.
ಇದೀಗ ವಿದ್ಯಾರ್ಥಿಗಳು ಆತಂಕದಲ್ಲೆ ತಮ್ಮ ಗಂಟು-ಮೂಟೆ ಕಟ್ಟಿಕೊಂಡು ಹಾಸ್ಟೆಲ್ನ ಅಂಡರ್ಗ್ರೌಂಡ್ನಲ್ಲಿರುವ ಶೆಲ್ಟರ್ ಹೌಸ್ಗೆ ಸ್ಥಳಾಂತರವಾಗಿದ್ದಾರೆ. (ದಿಗ್ವಿಜಯ ನ್ಯೂಸ್)
ಯೂಕ್ರೇನ್-ರಷ್ಯಾ ಕದನ ಕಾರ್ಮೋಡ: ಯೂಕ್ರೇನಲ್ಲಿ ಸಿಲುಕಿರುವ ರಾಯಚೂರಿನ 6 ವಿದ್ಯಾರ್ಥಿಗಳು, ಪಾಲಕರಿಗೆ ಆತಂಕ
ಯೂಕ್ರೇನ್-ರಷ್ಯಾ ಯುದ್ಧ: ರಷ್ಯಾ ಅಧ್ಯಕ್ಷರಿಗೆ ಕರೆ ಮಾಡಿ ಪ್ರಧಾನಿ ಮೋದಿ ಹೇಳಿದ್ದಿಷ್ಟು…
ಕೆನಡಾ ಗರ್ಲ್ಫ್ರೆಂಡ್ ಜತೆ ಬ್ರೇಕಪ್ ಬೆನ್ನಲ್ಲೇ ಆಸ್ಟ್ರೇಲಿಯಾದ 27ರ ನಟಿ ಜತೆ 50ರ ಎಲಾನ್ ಮಸ್ಕ್ ಡೇಟಿಂಗ್!