More

    ಸೋಲಿನ ಸುಳಿಯಲ್ಲಿ ಬಾಲಿವುಡ್: ಸುಶಾಂತ್​ ಸಿಂಗ್ ಸಾವಿನ ಕಡೆ ಬೊಟ್ಟು ಮಾಡಿದ ಸ್ವರಾ ಭಾಸ್ಕರ್​!

    ಮುಂಬೈ: ಪ್ರಸ್ತುತ ಬಾಲಿವುಡ್​ ಸಂಕಷ್ಟದ ದಿನಗಳನ್ನು ಎದುರಿಸುತ್ತಿದೆ. ಬಾಲಿವುಡ್​ನಲ್ಲಿ ಬಿಡುಗಡೆಯಾಗುತ್ತಿರುವ ಸಾಲು ಸಾಲು ಚಿತ್ರಗಳೆಲ್ಲ, ಬಾಕ್ಸ್​ಆಫೀಸ್​ನಲ್ಲಿ ಮಕಾಡೆ ಮಲಗುತ್ತಿವೆ. ಈ ವರ್ಷ ಬಿಡುಗಡೆಯಾದ ಕಂಗನಾ ರಣಾವತ್​ ಅಭಿನಯದ ಧಾಕಡ್​, ಅಕ್ಷಯ್​ ಕುಮಾರ್​ ನಟನೆಯ ಪೃಥ್ವಿರಾಜ್​ ಚೌಹಾಣ್​, ಆಮೀರ್​ ಖಾನ್​ ಅಭಿನಯದ ಲಾಲ್​ ಸಿಂಗ್​ ಛಡ್ಡಾ, ರಣಬೀರ್​ ಕಪೂರ್​ ಅವರ ಶಂಶೇರಾ, ರಣವೀರ್​ ಸಿಂಗ್​ ಅವರ 83 ಸೇರಿದಂತೆ ಸಾಕಷ್ಟು ಸ್ಟಾರ್​ ನಟರ ಸಿನಿಮಾ ನಷ್ಟ ಅನುಭವಿಸಿವೆ.

    ಬಾಯ್ಕಾಟ್​ ಅಭಿಯಾನವೂ ಕೂಡ ಬಾಲಿವುಡ್​ ಮಂದಿಗೆ ಬಿಸಿ ತುಪ್ಪವಾಗಿದೆ. ಬಾಲಿವುಡ್​ ಕಡೆ ಸಾಕಷ್ಟು ವಿರೋಧಗಳು ವ್ಯಕ್ತವಾಗುತ್ತಿದ್ದು, ಈ ಬಗ್ಗೆ ಅನೇಕ ಕಲಾವಿದರು ಈಗಾಗಲೇ ತಮ್ಮ ಧ್ವನಿಯೆತ್ತಿದ್ದಾರೆ. ಇದೀಗ ಆ ಸಾಲಿಗೆ ವಿವಾದಿತ ನಟಿ ಎಂದೇ ಖ್ಯಾತರಾಗಿರುವ ಸ್ವರಾ ಭಾಸ್ಕರ್​ ಸಹ ಸೇರಿಕೊಂಡಿದ್ದಾರೆ. ಬಾಲಿವುಡ್​ ಎದುರಾಗಿರುವ ಸಂಕಷ್ಟಕ್ಕೆ ಕಾರಣ ಏನು ಎಂಬುದನ್ನು ತಿಳಿಸಿದ್ದಾರೆ.

    ಈ ಬಗ್ಗೆ ಮಾಧ್ಯಮ ಸಂದರ್ಶನದಲ್ಲಿ ಮಾತನಾಡಿರುವ ಸ್ವರಾ, ಈಗ ಏನು ಬಾಲಿವುಡ್ ವಿರೋಧಿಸುವ ಟ್ರೆಂಡ್​ ಶುರುವಾಗಿದೆಯೋ, ಅದು ನಟ ಸುಶಾಂತ್​ ಸಿಂಗ್​ ರಜಪೂತ್​ ಸಾವಿನ ಬಳಿಕ ಹೆಚ್ಚಾಗಿದೆ. ಸುಶಾಂತ್​ ಸಾವಿನ ಬಳಿಕ ಎಲ್ಲರು ಬಾಲಿವುಡ್​ ಕಡೆ ಬೊಟ್ಟು ಮಾಡುತ್ತಿದ್ದಾರೆ. ಆತನ ಸಾವಿಗೆ ಬಾಲಿವುಡ್​ ಹೊಣೆ, ಬಾಲಿವುಡ್​ನಲ್ಲಿರುವ ನೆಪೋಟಿಸಂ ಕಾರಣ ಎಂಬುದು ಕೆಲವರ ಅಭಿಪ್ರಾಯವಾಗಿದೆ. ಹೀಗಾಗಿ ಬಾಲಿವುಡ್​ ಕಡೆ ದ್ವೇಷದ ಭಾವನೆ ಹೆಚ್ಚಾಗುತ್ತಿರುವ ಪರಿಣಾಮ ಬಾಲಿವುಡ್​ನ ಸಿನಿಮಾಗಳ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ಆದರೆ, ಬಾಲಿವುಡ್​ ಮತ್ತೆ ತನ್ನ ಹಾದಿಗೆ ಮರಳಿದೆ ಎಂದು ಸ್ವರಾ ಅವರು ಭರವಸೆಯನ್ನು ವ್ಯಕ್ತಪಡಿಸಿದ್ದಾರೆ.

    ಸುಶಾಂತ್​ ಸಾವಿನ ಬಳಿಕವೂ ಮಾತನಾಡಿದ್ದ ಸ್ವರಾ, ಸುಶಾಂತ್​ಗೆ ಮಾನಸಿಕ ಸಮಸ್ಯೆಗಳಿದ್ದವು ಎಂದು ಅವರಿಗೆ ಚಿಕಿತ್ಸೆ ಕೊಡುತ್ತಿದ್ದ ವೈದ್ಯರೇ ಹೇಳಿದ್ದಾರೆ. ಅವರಿಗೆ ಬೈಪೋಲಾರ್​ ಸಮಸ್ಯೆ ಇತ್ತು ಮತ್ತು ಅದೇ ಕಾರಣಕ್ಕೆ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. ಆದರೆ, ಈ ವಿಷಯವನ್ನು ಕೆಲವರು ನಂಬುವ ಸ್ಥಿತಿಯಲ್ಲಿಲ್ಲ. ಸುಶಾಂತ್​ ಯಾವುದೋ ಷಡ್ಯಂತ್ರಕ್ಕೆ ಬಲಿಯಾಗಿದ್ದಾರೆ ಎಂಬ ಅನುಮಾನವನ್ನು ಪದೇಪದೇ ವ್ಯಕ್ತಪಡಿಸುತ್ತಲೇ ಇದ್ದಾರೆ. ಸುಶಾಂತ್​ಗೆ ಮಾನಸಿಕ ಸಮಸ್ಯೆಗಳಿದ್ದವು ಮತ್ತು ಅವರು ಬೈಪೋಲಾರ್​ನಿಂದ ಬಳಲುತ್ತಿದ್ದರು ಎಂಬ ವಿಷಯವನ್ನು ಇಷ್ಟಕ್ಕೂ ಜನ ಯಾಕೆ ನಂಬುತ್ತಿಲ್ಲ ಎಂಬುದು ತನಗೆ ಅರ್ಥವೇ ಆಗುತ್ತಿಲ್ಲ ಎಂದು ನಟಿ ಸ್ವರಾ ಭಾಸ್ಕರ್​ ಹೆಳಿಕೊಂಡಿದ್ದರು.

    ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ, ಕೊನೆಯದಾಗಿ ಚಿತ್ರಮಂದಿರದಲ್ಲಿ ಬಿಡುಗಡೆಯಾದ ಸ್ವರಾ ಅವರ ಸಿನಿಮಾ ವೀರ್​ ದಿ ವೆಡ್ಡಿಂಗ್​. ತುಂಬಾ ದಿನಗಳ ಬಳಿಕ ಅವರ ಹೊಸ ಸಿನಿಮಾ “ಜಹಾನ್​ ಚಾರ್​ ಯಾರ್​” ಸೆಪ್ಟೆಂಬರ್​ 16ಕ್ಕೆ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. ಆಗಸ್ಟ್​ 22ರಂದು ಟ್ರೈಲರ್​ ಬಿಡುಗಡೆಯಾಗಿದ್ದು, ತಕ್ಕಮಟ್ಟಿಗೆ ಗಮನ ಸೆಳೆಯುತ್ತಿದೆ. (ಏಜೆನ್ಸೀಸ್​)

    ಗೋವಾ ಪ್ರವಾಸದಲ್ಲಿದ್ದ ಬಿಜೆಪಿ ನಾಯಕಿ, ಟಿಕ್​ಟಾಕ್​ ಸ್ಟಾರ್​ ಸೊನಾಲಿ ಪೋಗಟ್​ ಹೃದಯಾಘಾತದಿಂದ ನಿಧನ

    ಕೈಗೆ ಬಂದ ತುತ್ತು ಬಾಯಿಗಿಲ್ಲ: ಸರ್ಕಾರಿ ಕೆಲಸ ಸಿಕ್ಕಿಲ್ಲ.. ಬ್ಲಡಿ ಸಿಸ್ಟಮ್​ ಎಂದು ಬರೆದಿಟ್ಟು ಬಾರದ ಲೋಕಕ್ಕೆ ಯುವತಿ…

    ಬಿಗ್​ಬಾಸ್​ ಮನೆಯಿಂದ ಹೊರಬಂದ ಸ್ಫೂರ್ತಿ ಗೌಡ ಎರಡೇ ವಾರದಲ್ಲಿ ಗಳಿಸಿದ ಹಣ ಇಷ್ಟೊಂದಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts