ಬೆಂಗಳೂರು: ಬಿಗ್ಬಾಸ್ ಕನ್ನಡದ ಒಟಿಟಿ ಎರಡು ವಾರ ಪೂರ್ಣಗೊಳಿಸಿ ಮೂರನೇ ವಾರಕ್ಕೆ ಲಗ್ಗೆ ಇಟ್ಟಿದೆ. ಮೊದಲ ವಾರದಲ್ಲಿ ಕಿರಣ್ ಯೋಗೇಶ್ವರ್ ಅವರು ಮನೆಯಿಂದ ಹೊರಬಂದರೆ, ಎರಡನೇ ವಾರದಲ್ಲಿ ಸ್ಫೂರ್ತಿಗೌಡ ಬಿಗ್ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ.
ಎಲಿನಿನೇಷನ್ ಸುತ್ತಿನಲ್ಲಿ ಸ್ಫೂರ್ತಿ ಮತ್ತು ಅಕ್ಷತಾ ಕುಕ್ಕಿ ಕೊನೆಯಲ್ಲಿದ್ದರು. ಅಂತಿಮವಾಗಿ ಸ್ಫೂರ್ತಿ ಹೊರಬಂದಿದ್ದಾರೆ. ರಾಕೇಶ್ ಅಡಿಗ ಮತ್ತು ಸ್ಫೂರ್ತಿ ನಡುವಿನ ಲವ್ ಟ್ರ್ಯಾಕ್ಗಾಗಿ ಸ್ಫೂರ್ತಿ ಅವರನ್ನು ಎಲಿಮಿನೇಟ್ ಮಾಡದೆ ಉಳಿಸಿಕೊಳ್ಳುತ್ತಾರೆ ಎಂದು ವೀಕ್ಷಕರು ಭಾವಿಸಿದ್ದರು. ಆದರೆ, ಸ್ಫೂರ್ತಿಗೌಡ ಮನೆಯಿಂದ ಆಚೆ ಬಂದಿರುವುದು ನಿಜಕ್ಕೂ ವೀಕ್ಷಕರಿಗೆ ಅಚ್ಚರಿಯಾಗಿದೆ.
ಲವ್ ಗಾಸಿಪ್ ಬಿಟ್ಟರೆ, ಟಾಸ್ಕ್ ವಿಚಾರದಲ್ಲಿ ಸ್ಫೂರ್ತಿ ಕಳಪೆಯಾಗಿದ್ದರು. ಯಾವುದೇ ಟಾಸ್ಕ್ ಕೊಟ್ಟರೂ ಸರಿಯಾಗಿ ನಿಭಾಯಿಸುತ್ತಿರಲಿಲ್ಲ ಮತ್ತು ವೀಕ್ಷಕರ ಗಮನ ಸೆಳೆಯುವಂತಹ ಯಾವುದೇ ಪ್ರದರ್ಶನ ನೀಡುತ್ತಿರಲಿಲ್ಲ. ಕಳೆದ ವೀಕೆಂಡ್ ಎಪಿಸೋಡ್ ನಿರೂಪಕ ಕಿಚ್ಚ ಸುದೀಪ್ ಕೂಡ ಸ್ಫೂರ್ತಿಗೆ ಕ್ಲಾಸ್ ತೆಗೆದುಕೊಂಡಿದ್ದರು. ಕೊನೆಗೆ ಸ್ಫೂರ್ತಿಯೇ ಎಲಿಮಿನೇಟ್ ಆಗಿದ್ದು, ಇನ್ನು ಮುಂದೆ ರಾಕೇಶ್ ಮತ್ತು ಸ್ಫೂರ್ತಿಯ ವಿನೋದವನ್ನು ವೀಕ್ಷಕರು ಮಿಸ್ ಮಾಡಿಕೊಳ್ಳಲಿದ್ದಾರೆ.
ಇನ್ನು ಸ್ಫೂರ್ತಿ ಗೌಡ ಅವರು ಬಿಗ್ಬಾಸ್ನಲ್ಲಿ ಗಳಿಸಿದ ಹಣವೆಷ್ಟು ಎಂಬ ವಿಚಾರಕ್ಕೆ ಬರುವುದಾದರೆ, ಒಂದು ಮೂಲಗಳ ಪ್ರಕಾರ ಸ್ಫೂರ್ತಿ ಅವರು ಒಂದು ವಾರಕ್ಕೆ 2.5 ಲಕ್ಷ ರೂಪಾಯಿ ಸಂಭಾವನೆ ಪಡೆಯುತ್ತಿದ್ದರಂತೆ. ಎರಡು ವಾರಗಳ ಕಾಲ ಮನೆಯಲ್ಲಿದ್ದರು. ಒಟ್ಟು ಸುಮಾರು 7 ಲಕ್ಷ ರೂಪಾಯಿ ಹಣವನ್ನು ಸ್ಫೂರ್ತಿ ಸಂಪಾದಿಸಿದ್ದಾರೆಂದು ತಿಳಿದುಬಂದಿದೆ.
ಮೂರನೇ ವಾರದ ಎಲಿಮಿನೇಷನ್ನಲ್ಲಿ ಜ್ಯೋತಿಷಿ ಆರ್ಯವರ್ಧನ್, ರೂಪೇಶ್ ಶೆಟ್ಟಿ, ಅಕ್ಷತಾ ಕುಕಿ, ಚೈತ್ರಾ, ಸೋಮಣ್ಣ ಮಾಚಿಮಾಡ, ಜಯಶ್ರೀ ಆರಾಧ್ಯ ಮತ್ತು ಉದಯ್ ಸೂರ್ಯ ನಾಮಿನೇಟ್ ಆಗಿದ್ದಾರೆ.
ಸ್ಫೂರ್ತಿ ಗೌಡ ವಿರುದ್ಧ ಇದೆಂಥಾ ಆರೋಪ? ಮನೆಯಿಂದ ಹೊರ ಹೋಗಲಿ ಅಂತ ಬೇಡುತ್ತಿರುವ ನೆಟ್ಟಿಗರು!
ಕಷ್ಟಗಳನ್ನು ಎದುರಿಸಲು ಆಗ್ತಿಲ್ಲ… ಮಗು ಕೊಂದು ಸಾವಿನ ಹಾದಿ ಹಿಡಿಯಲು ಹೋದ ತಾಯಿಯ ಸ್ಥಿತಿ ಗಂಭೀರ
ಬಾಲಿವುಡ್ನ ಪ್ರಸ್ತುತ ಸ್ಥಿತಿಯನ್ನು ರಾಹುಲ್ ಗಾಂಧಿಗೆ ಹೋಲಿಸಿ ಸ್ವರಾ ಭಾಸ್ಕರ್ ಕೊಟ್ಟ ವಿವರಣೆ ಹೀಗಿದೆ…