ಬೆಂಗಳೂರು: ಬಿಗ್ಬಾಸ್ ಕನ್ನಡದ ಒಟಿಟಿ ಒಂದು ವಾರ ಪೂರ್ಣಗೊಳಿಸಿ ಎರಡನೇ ವಾರಾಂತ್ಯಕ್ಕೆ ತಲುಪಿದೆ. ಈಗಾಗಲೇ ಶೋ ಆಸಕ್ತಿಕರ ಘಟಕ್ಕೆ ತಲುಪಿದೆ. ಯಾವುದೇ ಸೀಸನ್ ನೋಡಿದರು ಒಬ್ಬರು ವಿಚಿತ್ರ ಸ್ಪರ್ಧಿ ಇದ್ದೇ ಇರುತ್ತಾರೆ. ನನನ್ನು ನಾನು ಸಾಬೀತು ಮಾಡಲು ಯಾವುದೇ ಅವಕಾಶ ಸಿಕ್ಕಿಲ್ಲ ಎಂದು ಹೇಳಿಕೊಂಡು ಓಡಾಡುತ್ತಿರುತ್ತಾರೆ. ಯಾವಾಗ ಅವಕಾಶ ಸಿಗುತ್ತದೋ ಆಗ ಅದನ್ನು ಬಳಸಿಕೊಳ್ಳುವ ಬದಲು ತಪ್ಪಿಸಿಕೊಳ್ಳುವುದು ಅಥವಾ ಟಾಸ್ಕ್ ಅನ್ನು ಕಗ್ಗಂಟು ಮಾಡಿಬಿಡುತ್ತಾರೆ. ಟಿಆರ್ಪಿಗಾಗಿ ಬಿಗ್ಬಾಸ್ಗೆ ಇಂಥವರೇ ಬೇಕು. ಆದರೆ, ಅನವಶ್ಯಕ ಡ್ರಾಮಾ ಸೃಷ್ಟಿಸುವ ಮತ್ತು ವಿಚಿತ್ರ ವರ್ತನೆಯಿಂದ ಅಂಥಹ ಸ್ಪರ್ಧಿ ವೀಕ್ಷಕರ ಕೆಂಗಣ್ಣಿಗು ಗುರಿಯಾಗುತ್ತಾರೆ.
ಪ್ರಸ್ತುತ ಬಿಗ್ಬಾಸ್ ಒಟಿಟಿ ಆವೃತ್ತಿಯಲ್ಲಿ ಸ್ಪರ್ಧಿ ಸ್ಫೂರ್ತಿ ಗೌಡ ಅಂತ ವರ್ಗಕ್ಕೆ ಸೇರುತ್ತಾರೆ. ತನಗೆ ಅವಕಾಶವೇ ಸಿಕ್ಕಿಲ್ಲ ಎಂದು ಯಾವಾಗಲೂ ಎಲ್ಲರ ಮುಂದೆ ಹೇಳಿಕೊಳ್ಳುವ ಸ್ಫೂರ್ತಿ, ಅವಕಾಶ ಸಿಕ್ಕರೆ ಏನನ್ನೂ ಮಾಡುವುದಿಲ್ಲ. ಟಾಸ್ಕ್ ವಿಚಾರ ಬಂದಾಗ ಕಳಪೆ ಪ್ರದರ್ಶನ ತೋರುವ ಸ್ಫೂರ್ತಿ, ಟಾಸ್ಕ್ನಲ್ಲೂ ವಂಚನೆ ಮಾಡುವ ಪ್ರವೃತ್ತಿ ಇದೆ ಎಂದು ವೀಕ್ಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೂ ಬಿಗ್ ಬಾಸ್ ಒಟಿಟಿ ಕನ್ನಡ ವೀಕ್ಷಕರು ಟಾಸ್ಕ್ ಸಮಯದಲ್ಲಿ ಸ್ಫೂರ್ತಿಯ ಚೇಷ್ಟೆಗಳನ್ನು ನೋಡಿ ಆನಂದಿಸುತ್ತಿದ್ದಾರೆ.
ಈ ವಾರ ಸ್ಫೂರ್ತಿ ಬಿಗ್ಬಾಸ್ ಮನೆಯಿಂದ ಹೊರ ಹೋಗುತ್ತಾರೆ ಎಂದು ವೀಕ್ಷಕರು ಅಭಿಪ್ರಾಯ ವ್ಯಕ್ತಪಡಿದ್ದಾರೆ. ಸ್ಫೂರ್ತಿ ಕೂಡ ನಾಮಿನೇಟ್ ಆಗಿದ್ದಾರೆ. ಅಲ್ಲದೆ, ಸ್ಫೂರ್ತಿ, ರಾಕೇಶ್ ಹಿಂದೆ ಜೋತುಬಿದ್ದಿದ್ದು, ಎಲಿಮಿನೇಶನ್ನಿಂದ ಎಸ್ಕೇಪ್ ಆಗಲು ರಾಕೇಶ್ ಅಡಿಗ ಜೊತೆ ಜಾಸ್ತಿ ಪರದೆ ಹಂಚಿಕೊಳ್ಳುತ್ತಿದ್ದಾರೆ ಎಂದು ಒಂದು ವರ್ಗದ ವೀಕ್ಷಕರು ಮಾತನಾಡಿಕೊಳ್ಳುತ್ತಿದ್ದಾರೆ. ಇದರ ನಡುವೆ ನೆಟ್ಟಿಗರು ರಾಕೇಶ್ ಪ್ರದರ್ಶನದಿಂದ ಅಸಮಾಧಾನಗೊಂಡಿದ್ದಾರೆ. ಸ್ಪೂರ್ತಿಯೊಂದಿಗೆ ದಿನವಿಡೀ ಹರಟೆ ಹೊಡೆಯುವುದನ್ನು ಮಾತ್ರ ವೀಕ್ಷಕರು ನೋಡುತ್ತಿದ್ದಾರೆ. ಹೀಗಾಗಿ ರಾಕೇಶ್ ಅಭಿಮಾನಿಗಳು ಸ್ಫೂರ್ತಿ ಎಲಿಮಿನೇಶನ್ ಅನ್ನು ಬಯಸುತ್ತಿದ್ದಾರೆ. ಸ್ಫೂರ್ತಿ ಎಲಿಮಿನೇಟ್ ಆದರೆ, ರಾಕೇಶ್ ಮರಳಿ ತನ್ನ ಟ್ರ್ಯಾಕ್ ಮರಳಲಿದ್ದಾರೆ ಎಂಬುದು ಅಭಿಮಾನಿಗಳ ಅಭಿಪ್ರಾಯವಾಗಿದೆ.
ಎರಡನೇ ವಾರದಲ್ಲಿ ಅಕ್ಷತಾ ಕುಕ್ಕಿ, ಜಯಶ್ರೀ ಆರಾಧ್ಯ, ಸೋಮಣ್ಣ ಮಾಚಿಮಾಡ, ರಾಕೇಶ್ ಅಡಿಗ, ನಂದು, ಸ್ಫೂರ್ತಿ ಗೌಡ ಮತ್ತು ಸಾನ್ಯಾ ಅಯ್ಯರ್ ನಾಮಿನೇಟ್ ಆಗಿದ್ದಾರೆ. (ಏಜೆನ್ಸೀಸ್)
ನಡುರಸ್ತೆಯಲ್ಲೇ ಎಣ್ಣೆ ಕುಡಿದು ಪೊಲೀಸರಿಗೆ ಅವಾಜ್ ಹಾಕಿದವನ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿ!
ಪಕ್ಷ ಸೇರ್ಪಡೆ ಬಗ್ಗೆ ಯಾವುದೇ ನಿರ್ಧಾರ ಮಾಡಿಲ್ಲ ಎನ್ನುತ್ತಲೇ ತೆರೆಮರೆಯಲ್ಲಿ ಸಂಸದೆ ಸುಮಲತಾ ಮೆಗಾ ಪ್ಲಾನ್?!
5 ಮನೆ, ಈಜುಕೊಳ, ಥಿಯೇಟರ್, ಬಾರ್, ಲಕ್ಷುರಿ ಕಾರುಗಳು: ಸರ್ಕಾರಿ ನೌಕರನ ಮನೆ ನೋಡಿ ಅಧಿಕಾರಿಗಳೇ ಶಾಕ್