ಈರೋಡ್ (ತಮಿಳುನಾಡು): ಚಿತ್ತೂರು ಜಿಲ್ಲೆಯ ಮದನಪಲ್ಲಿಯಲ್ಲಿ ಮೂಢನಂಬಿಕೆಗೆ ಎರಡು ಜೀವ ಬಲಿಯಾದ ಘಟನೆ ಇನ್ನು ಮಾಸಿಲ್ಲ. ಹೀಗಿರುವಾಗ ಮೂಢನಂಬಿಕೆಯಿಂದ ಮತ್ತೆ ಎದುರಾಗುತ್ತಿದ್ದ ದುರಂತವೊಂದು ತಪ್ಪಿದೆ. ಅತಿಂದ್ರೀಯ ಶಕ್ತಿಗಾಗಿ ಗಂಡನ ಒಪ್ಪಿಗೆಯಿಂದಲೇ ಮಹಿಳೆಯೊಬ್ಬಳು ಮತ್ತೊಬ್ಬ ಮಹಿಳೆಯನ್ನು ಮದುವೆ ಆಗಿದ್ದಲ್ಲದೆ, ಮಕ್ಕಳನ್ನು ಬಲಿ ನೀಡಲು ಮುಂದಾಗಿದ್ದ ಭಯಾನಕ ಘಟನೆ ಅದೃಷ್ಟವಶಾತ್ ಘಟಿಸುವ ಮುನ್ನವೇ ಬಯಲಾಗಿದೆ.
ರಾಮಲಿಂಗಂ (42) ಮತ್ತು ಪತ್ನಿ ರಂಜಿತಾ (32) ತಮಿಳುನಾಡಿನ ಈರೋಡ್ ಜಿಲ್ಲೆಯ ರೈಲ್ ನಗರ ನಿವಾಸಿಗಳು. ದಂಪತಿಗೆ ದೀಪಕ್ (15) ಮತ್ತು ಕಿಶಾಂತ್ (6) ಎಂಬ ಇಬ್ಬರು ಮಕ್ಕಳಿದ್ದಾರೆ. ರಾಮಲಿಂಗಂ ಓರ್ವ ಸೀರೆ ಉದ್ಯಮಿ. ಈತ ಇಂದುಮತಿ ಎಂಬಾಕೆಯನ್ನು ಎರಡನೇ ಮದುವೆ ಆಗಿದ್ದಾನೆ.
ರಾಮಲಿಂಗಂ ಪತ್ನಿಯರನ್ನು ಒಂದೇ ಏರಿಯಾದಲ್ಲಿ ಬೇರೆ ಬೇರೆ ಮನೆಯಲ್ಲಿಟ್ಟುಕೊಂಡಿದ್ದ. ಇದರ ನಡುವೆ ರಂಜಿತಾ ಮತ್ತು ಇಂದುಮತಿ ನಡುವೆ ಸ್ನೇಹ ಬೆಳೆದಿದೆ. ಆಗಾಗ ಒಬ್ಬರಿಗೊಬ್ಬರು ಭೇಟಿಯಾಗುವುದು ಸಾಮಾನ್ಯವಾಗಿತ್ತು. ಇಬ್ಬರಿಗೂ ದೇವರು ಮತ್ತು ಅತೀಂದ್ರಿಯ ಶಕ್ತಿಗಳ ಮೇಲೆ ಬಲವಾದ ನಂಬಿಕೆ ಇತ್ತು. ಇಬ್ಬರು ಮನಸ್ಥಿತಿ ಒಂದೇ ಆಗಿದ್ದರಿಂದ ಇಬ್ಬರ ನಡುವೆ ಗಾಢವಾದ ಸ್ನೇಹ ಬೆಳೆಯಿತು. ಇದು ರಾಮಲಿಂಗಂ ಗಮನಕ್ಕೂ ಸಹ ಬಂತು. ಸಂಸಾರವೂ ಸಹ ಚೆನ್ನಾಗಿಯೇ ಸಾಗುತ್ತಿತ್ತು. ಹೀಗಿರುವಾಗ ಏನಾಯಿತೋ ಕಾಣೆ ರಂಜಿತಾ ಮತ್ತು ಇಂದುಮತಿ ಪರಸ್ಪರ ಮದುವೆ ಮಾಡಿಕೊಳ್ಳುವುದಾಗಿ ಗಂಡನ ಬಳಿ ಒಪ್ಪಿಗೆ ಕೇಳಿದರು. ಅದಕ್ಕೆ ಗಂಡ ರಾಮಲಿಂಗಂ ಸಹ ಒಪ್ಪಿಗೆ ನೀಡಿದನು.
ಮಕ್ಕಳ ಮುಂದೆಯೇ ರಾಮಲಿಂಗಂ ಇಬ್ಬರಿಗೂ ಮದುವೆ ಮಾಡಿದ್ದಾನೆ. ಮದುವೆ ಮಾಡಿಕೊಂಡರೆ ಅತೀಂದ್ರಿಯ ಶಕ್ತಿ ಬರುತ್ತದೆ ಎಂಬುದು ಅವರ ನಂಬಿಕೆಯಾಗಿತ್ತು. ಇದಾದ ಬಳಿಕ ಅವರು ಮಕ್ಕಳಿಗೆ ಹಿಂಸಿಸಲು ಆರಂಭಿಸಿದರು. ಶಾಲೆಗೆ ಹೋಗಲು ಅನುಮತಿ ನೀಡದೆ ಸ್ಯಾನಿಟೈಸರ್ ಕುಡಿಸುವುದು, ಉಗಿಯುವುದು, ಹೇಸಿಗೆ ಮಾಡುವುದು ಮತ್ತು ಬರಿ ಮೈಯಲ್ಲಿ ನೆಲದ ಮೇಲೆ ಬಿದ್ದಿರುವಂತೆ ಮಕ್ಕಳನ್ನು ಹಿಂಸಿಸಿದರು.
ಇಷ್ಟಕ್ಕೆ ಸುಮ್ಮನಾಗದ ರಂಜಿತ ಮತ್ತು ಇಂದುಮತಿ ಮಕ್ಕಳನ್ನು ಬಲಿ ಕೊಡಲು ಮುಂದಾಗಿದ್ದಾರೆ. ಈ ವಿಚಾರ ಮಕ್ಕಳಿಗೆ ತಿಳಿದು, ಹೇಗೋ ಅಲ್ಲಿಂದ ತಪ್ಪಿಸಿಕೊಂಡು ತಾತನ ಮನೆಗೆ ಓಡಿದ್ದಾರೆ. ಬಳಿಕ ಎಲ್ಲವನ್ನು ತಾತನ ಮುಂದೆ ವಿವರಿಸಿದ್ದಾರೆ. ಬಳಿಕ ಒಟ್ಟಿಗೆ ಹೋಗಿ ಈರೋಡ್ ಪೊಲೀಸ್ ವರಿಷ್ಠಾಧಿಕಾರಿ ತಂಗದೊರೈಗೆ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ರಂಜಿತಾ, ಇಂದುಮತಿ ಮತ್ತು ರಾಮಲಿಂಗಂ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಇದೀಗ ಈ ಪ್ರಕರಣ ಈರೋಡ್ ಜಿಲ್ಲೆಯಲ್ಲಿ ಭಾರಿ ಸುದ್ದಿಯನ್ನು ಮಾಡಿದೆ. (ಏಜೆನ್ಸೀಸ್)
ದ್ವೇಷಕ್ಕೆ ಉರುಳಿತು 10 ಹೆಣ! ಆರು ಮಂದಿಯ ಇರಿದು ಕೊಂದರು- ನಾಲ್ವರನ್ನು ಸಜೀವವಾಗಿ ಸುಟ್ಟರು…
ದುಬೈ ಬಾಲ್ಕನಿ ಬೆತ್ತಲೆ ಫೋಟೋಶೂಟ್ ಹಿಂದಿನ ಕರಾಳ ರಹಸ್ಯ ಬಿಚ್ಚಿಟ್ಟ ಉಕ್ರೇನಿಯನ್ ಮಾಡೆಲ್..!
ಕ್ವಾರಂಟೈನ್ನಲ್ಲಿದ್ದ ಕರೊನಾ ರೋಗಿಯನ್ನು ಸೆಕ್ಸ್ಗೆ ಒತ್ತಾಯಿಸಿದ ಆಸ್ಪತ್ರೆ ಸಿಬ್ಬಂದಿ..!