More

    ಚಾಯ್-ಸ್ಯಾಮ್ ಡಿವೋರ್ಸ್​: ಈ ಒಂದು ಸುದ್ದಿಗೆ ಕಿಡಿಕಾರಿದ ಅಕ್ಕಿನೇನಿ ನಾಗಾರ್ಜುನ

    ಹೈದರಾಬಾದ್​: ಮಾಜಿ ತಾರದಂಪತಿ ನಾಗಚೈತನ್ಯ ಮತ್ತು ಸಮಂತಾ ಅವರ ವಿಚ್ಛೇದನ ಕುರಿತು ನಾಗಚೈತನ್ಯ ತಂದೆ ಹಾಗೂ ಟಾಲಿವುಡ್​ ಸೂಪರ್​ಸ್ಟಾರ್​ ನಾಗಾರ್ಜುನ ಇತ್ತೀಚೆಗಷ್ಟೇ ಬಾಲಿವುಡ್​ ಸಂದರ್ಶನದಲ್ಲಿ ನೀಡಿದ್ದ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿತ್ತು, ಇದೀಗ ಅವರು ತಮ್ಮ ಮಾತಿನಿಂದ ಉಲ್ಟಾ ಹೊಡೆದಿದರಾ ಎಂಬ ಸಂಶಯ ಮೂಡಿದೆ.

    ಸಂದರ್ಶನವೊಂದರಲ್ಲಿ ಮಾತನಾಡಿರುವ ನಾಗಾರ್ಜುನ, ಮೊದಲು ಡಿವೋರ್ಸ್​ ಬಯಸಿದ್ದು ಮತ್ತು ಅರ್ಜಿ ಹಾಕಿದ್ದು ಸಮಂತಾ ಎಂದು ಹೇಳಿದ್ದರು. ಆದರೆ, ಇದೀಗ ಟ್ವೀಟ್​ ಮಾಡಿದ್ದು, ಇದು ಆಧಾರವಿಲ್ಲದ ವದಂತಿ ಎಂದಿದ್ದಾರೆ. ಸಮಂತಾ ಮತ್ತು ನಾಗಚೈತನ್ಯ ಡಿವೋರ್ಸ್​ ಬಗ್ಗೆ ನಾನು ನೀಡಿದ್ದೇನೆ ಎಂದು ಸಾಮಾಜಿಕ ಜಾಲತಾಣದಲ್ಲಿ ವರದಿಯಾಗಿರುವ ಸುದ್ದಿ ಸುಳ್ಳು ಎಂದು ಹೇಳಿದ್ದಾರೆ.

    ಅಲ್ಲದೆ, ವದಂತಿಯನ್ನು ಸುದ್ದಿ ಮಾಡುವುದನ್ನು ನಿಲ್ಲಿಸಿದ ಎಂದು ನಾಗಾರ್ಜುನ ಮಾಧ್ಯಮದವರನ್ನು ಕೇಳಿಕೊಂಡಿದ್ದಾರೆ. ಸುದ್ದಿ ಕೊಡಿ, ವದಂತಿ ಹಬ್ಬಿಸಬೇಡಿ ಎಂದು ಹ್ಯಾಶ್​ಟ್ಯಾಗ್​ ಹಾಕಿದ್ದಾರೆ.

    ಬಾಲಿವುಡ್​ ಮಾಧ್ಯಮಕ್ಕೆ ನಾಗಾರ್ಜುನ ಸಂದರ್ಶನ ನೀಡಿದ್ದು ಅದರಲ್ಲಿ ಮಗನ ವೈವಾಹಿಕ ಜೀವನದ ಬಗ್ಗೆ ನಾಗಾರ್ಜುನ ಮುಜ್ತವಾಗಿ ಮಾತನಾಡಿದ್ದಾರೆ ಎಂದು ಎಲ್ಲೆಡೆ ವೈರಲ್​ ಆಗಿತ್ತು. ಮೊದಲು ಡಿವೋರ್ಸ್​ ಕೇಳಿದ ಸಮಂತಾ ನಿರ್ಧಾರವನ್ನು ನಾಗಚೈತನ್ಯ ಸ್ವೀಕರಿಸಿದ ಆದರೆ, ಆತನಿಗೆ ನನ್ನ ಬಗ್ಗೆಯೇ ಚಿಂತೆ ಆಗಿತ್ತು. ನಾನು ಏನು ಅಂದುಕೊಳ್ಳತ್ತೇನೋ ಮತ್ತು ಕುಟುಂಬದ ಗೌರವ ಏನಾಗಬಹುದೆಂದು ಚಿಂತಿಸುತ್ತಿದ್ದ ಎಂದು ತಿಳಿಸಿದ್ದಾರೆ ಎಂದು ವರದಿಯಾಗಿತ್ತು.

    ನಾನು ಚಿಂತಾಕ್ರಾಂತನಾಗುತ್ತೇನೆ ಎಂದು ನಾಗಚೈತನ್ಯ ನನಗೆ ತುಂಬಾ ಸಾಂತ್ವನ ಹೇಳಿದ. ದಾಂಪತ್ಯ ಜೀವನದಲ್ಲಿ ಅವರಿಬ್ಬರೂ 4 ವರ್ಷಗಳಿಂದ ಒಟ್ಟಿಗೆ ಇದ್ದಾರೆ ಆದರೆ, ಅಂತಹ ಯಾವುದೇ ಸಮಸ್ಯೆ ಅವರ ನಡುವೆ ಬಂದಿಲ್ಲ. ಇಬ್ಬರೂ ತುಂಬಾ ಆತ್ಮೀಯರಾಗಿದ್ದರು. ಅದು ಹೇಗೆ ಈ ನಿರ್ಧಾರ ಅವರಿಬ್ಬರ ನಡುವೆ ಬಂದಿತು ಎಂದು ನನಗೆ ತಿಳಿದಿಲ್ಲ. 2021ರ ಹೊಸ ವರ್ಷವನ್ನು ಸಹ ಇಬ್ಬರು ಒಟ್ಟಿಗೆ ಕಳೆದರು. 2021ರ ನಂತರವೇ ಇಬ್ಬರ ನಡುವೆ ಏನೋ ಸಮಸ್ಯೆ ಉಂಟಾಗಿರಬಹುದು ಎಂದು ನಾಗಾರ್ಜುನ ಅವರು ಹೇಳಿದ್ದಾಗಿ ವೈರಲ್​ ಆಗಿತ್ತು. ಆದರೆ, ಇದೀಗ ನಾನು ಹೇಳಿಯೇ ಇಲ್ಲ ಎನ್ನುತ್ತಿದ್ದಾರೆ. ಇದೊಂದು ಸುಳ್ಳು ಸುದ್ದಿ ಎನ್ನುತ್ತಿದ್ದಾರೆ.

    ಇನ್ನು ನಾಗಚೈತನ್ಯ ಕೂಡ ಬಂಗಾರರಾಜು ಸಿನಿಮಾ ಪ್ರಚಾರದ ವೇಳೆ ಡಿವೋರ್ಸ್​ ಬಗ್ಗೆ ಮೊದಲ ಬಾರಿಗೆ ಮುಕ್ತವಾಗಿ ಮಾತನಾಡಿದರು. ಇಬ್ಬರು ಬೇರೆಯಾಗಿರುವುದು ಸರಿ. ಅದು ನಮ್ಮ ವೈಯಕ್ತಿಕ ಸಂತೋಷಕ್ಕಾಗಿ ಮಾಡಿದ ಪರಸ್ಪರ ನಿರ್ಧಾರ. ಅವರು ಸಂತೋಷವಾಗಿದ್ದರೆ, ನಾನು ಕೂಡ ಸಂತೋಷವಾಗಿರುತ್ತೇನೆ. ಅಂತಹ ಪರಿಸ್ಥಿತಿಯಲ್ಲಿ ಡಿವೋರ್ಸ್​ ಒಂದು ಉತ್ತಮ ನಿರ್ಧಾರ ಎಂದು ನಾಗಚೈತನ್ಯ ಹೇಳಿದ್ದಾರೆ. ಸಮಂತಾ ಕೂಡ ಹಲವು ಸಂದರ್ಭದಲ್ಲಿ ಡಿವೋರ್ಸ್​ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. (ಏಜೆನ್ಸೀಸ್​)

    ಮಿನ್ನಲ್​ ಮುರಳಿ ಚಿತ್ರ ಪ್ರೇರಣೆ: ಸೂಪರ್​​ ಹೀರೋ ಬಟ್ಟೆ ಧರಿಸಿ ವಿವಾಹ, ವಧುವನ್ನು ಓಡಾಡಿಸಿದ ವರ!

    ದೇವಸ್ಥಾನ ಗೋಪುರದ ಫೋಟೋ ಪೋಸ್ಟ್​ ಮಾಡಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾದ ರಾಮ್​ಚರಣ್​ ಪತ್ನಿ ಉಪಾಸನ!

    ದೇವರು ನನ್ನ ಬ್ರಾ ಸೈಜ್​​ ತೆಗೆದುಕೊಳ್ಳುತ್ತಿದ್ದಾರೆ ಎಂದ ನಟಿ ಶ್ವೇತಾ ತಿವಾರಿ! ವಿಡಿಯೋ ವೈರಲ್​, ಜಾಲತಾಣದಲ್ಲೇ ತರಾಟೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts