ಬೆಂಗಳೂರು: ಕಳೆದ ಮೂರು ವರ್ಷಗಳಿಂದ ಜಾತಕ ಪಕ್ಷಿಗಳಂತೆ ಎದುರು ನೋಡುತ್ತಿದ್ದ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಕೆಜಿಎಫ್ ಚಾಪ್ಟರ್ 2 ಸಿನಿಮಾ ಇಂದು ನಸುಕಿನ ಜಾವದಿಂದಲೇ ದೇಶಾದ್ಯಂತ ಬೆಳ್ಳಿತೆರೆಗೆ ಅಪ್ಪಳಿಸಿದೆ. ರಾಜ್ಯಾದ್ಯಂತ ಸಂಭ್ರಮ ಮನೆ ಮಾಡಿದ್ದು, ಯಶ್ ಅಭಿಮಾನಿಗಳ ಸಂತಸ ಮುಗಿಲು ಮುಟ್ಟಿದೆ.
ರಾಜ್ಯದ ಬಹುತೇಕ ಚಿತ್ರಮಂದಿರಗಳಲ್ಲಿ ನಸುಕಿನ ಜಾವವೇ ಶೋಗಳು ಆರಂಭವಾಗಿದ್ದು, ರಾಕಿ ಭಾಯ್ ಅದ್ಧೂರಿ ಎಂಟ್ರಿಯನ್ನು ಕಣ್ತುಂಬಿಕೊಂಡಿದ್ದಾರೆ. ಬೀದರ್ನಿಂದ ಹಿಡಿದು ಗಡಿ ಜಿಲ್ಲಿ ಚಾಮರಾಜನಗರದವರೆಗೆ ಕೆಜಿಎಫ್ ಹವಾ ಭಾರೀ ಜೋರಾಗಿದ್ದು, ನಟ ಯಶ್ಗೆ ಜೈಕಾರ ಮೊಳಗಿದೆ. ಚಿತ್ರಮಂದಿರಗಳ ಮುಂದೆ ಪಟಾಕಿ, ಮದ್ದುಗುಂಡುಗಳ ಶಬ್ಧ ಜೋರಾಗಿದೆ.
ಈಗಾಗಲೇ ಚಿತ್ರವನ್ನು ವೀಕ್ಷಣೆ ಮಾಡಿರುವ ಅಭಿಮಾನಿಗಳ ಖುಷಿಗೆ ಪಾರವೇ ಇಲ್ಲದಂತಾಗಿದೆ. ಚಿತ್ರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ. ಈ ಚಿತ್ರ ಕನ್ನಡ ಚಿತ್ರರಂಗದ ಎಲ್ಲ ದಾಖಲೆಗಳನ್ನು ಮುರಿಯುವುದರಲ್ಲಿ ಯಾವುದೇ ಸಂಶಯವೇ ಇಲ್ಲ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಯಶ್ ಅವರ ಅಭಿನಯಕ್ಕೆ ಮತ್ತು ಡೈಲಾಗ್ ಡಿಲಿವರಿಗೆ ಮನಸೋತಿದ್ದಾರೆ.
ಬೆಳ್ಳಿ ತೆರೆಯ ಮೇಲೆ ನೆಚ್ಚಿನ ನಟನನ್ನು ನೋಡಿದ ಕೂಡಲೇ ಅಭಿಮಾನಿಗಳು ಕುಣಿದು ಕುಪ್ಪಳಿಸಿದ್ದಾರೆ. ಈಗಾಗಲೇ ಬಹುತೇಕ ಕಡೆ ಒಂದು ಶೋ ಮುಕ್ತಾಯವಾಗಿದ್ದು, ಮೂರು ವರ್ಷಗಳ ದೀರ್ಘ ಕುತೂಹಲಕ್ಕೆ ತೆರೆಬಿದ್ದಿದೆ. ವಾರಾಂತ್ಯದ ಜತೆ ರಜೆ ಇರುವುದರಿಂದ ಬಾಕ್ಸ್ ಆಫೀಸ್ನಲ್ಲಿ ಕೆಜಿಎಫ್ 2 ಚಿತ್ರ ಕಮಾಲ್ ಮಾಡುವ ಎಲ್ಲ ಸಾಧ್ಯತೆಗಳು ಇವೆ.
ಅಂದು ರಾಜ್ಯದಲ್ಲಿ ನಡೆದ ಘಟನೆಗೆ ಪ್ರತಿಯಾಗಿ ಯಶ್ ಮೇಲೆ ಸೇಡು ತೀರಿಸಿಕೊಳ್ತೇ ತೆಲುಗು ಮೀಡಿಯಾ!
ನಾನಂದು ಸೈಕಲ್ ಏರಿ ಬರಲು ಕಾರಣ… 2021ರ ಬಹುಚರ್ಚಿತ ಘಟನೆಯ ಬಗ್ಗೆ ವಿಜಯ್ ಹೇಳಿದ್ದಿಷ್ಟು
ಬಿಡುಗಡೆಗೂ ಮುನ್ನ ಹೋರಾಟಕ್ಕೆ ಕರೆ ಕೊಟ್ಟ ಕೆಜಿಎಫ್-2 ನಿರ್ದೇಶಕ; ಏನದು ವಿಷಯ?