ಹೈದರಾಬಾದ್: ತೆಲಂಗಾಣದ ಖಮ್ಮಮ್ ಜಿಲ್ಲೆಯಲ್ಲಿ ಆತಂಕಕಾರಿ ಘಟನೆಯೊಂದು ನಡೆದಿದೆ. ವ್ಯಕ್ತಿಯೊಬ್ಬ ಬದುಕಿರುವಾಗಲೇ ತನ್ನ ಫೋಟೋ ಮಾಡಿಸಿ ಅದರ ಮೇಲೆ ಸೆಲೆಬ್ರಿಟಿ ಎಂದು ಬರೆದು, ಪೂಜೆ ಮಾಡಿ ಕೊನೆಗೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮೃತನನ್ನು ವಡಪಲ್ಲಿ ಶಿವಪ್ರಸಾದ್ (48) ಎಂದು ಗುರುತಿಸಲಾಗಿದೆ. ಈತ ತಮಿಳುನಾಡು ಮೂಲದವನಾಗಿದ್ದು, 30 ವರ್ಷಗಳ ಹಿಂದೆ ತೆಲಂಗಾಣಕ್ಕೆ ವಲಸೆ ಬಂದು ನೆಲೆಸಿದ್ದ. ಮೊದಲು ವಿಜಯವಾಡದಲ್ಲಿದ್ದ ಶಿವಪ್ರಸಾದ್ ನಂತರ ಖಮ್ಮಮ್ಗೆ ಬಂದಿದ್ದ. ಆನಂತರ ಖಮ್ಮಮ್ ಗ್ರಾಮೀಣ ಪ್ರದೇಶ ಎಡುಲಪುರಂ ಮತ್ತು ವೇಂಪತಿನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ. ರಸ್ತೆ ಬದಿಯ ಹೋಟೆಲ್ನಲ್ಲಿ ಅಡುಗೆ ಭಟ್ಟನಾಗಿ ಕೆಲಸ ಮಾಡಿಕೊಂಡಿದ್ದ.
ಫೆ. 1ರಂದು ಕೆಲಸಕ್ಕೆ ಬಂದ ಶಿವಪ್ರಸಾದ್ ಅದಾದ ಬಳಿಕ ಕಾಣಿಸಿಕೊಳ್ಳಲೇ ಇಲ್ಲ. ಗುರುವಾರ ಬೆಳಗ್ಗೆ ಹೋಟೆಲ್ ಮಾಲೀಕ ಆತನ ಮನೆಗೆ ಹೋಗಿ ನೋಡಿದಾಗ ಬಾಗಿಲು ಹಾಕಿತ್ತು. ಎಷ್ಟೇ ಬಾಗಿಲು ಬದಿದರೂ ತೆಗೆಯದಿದ್ದಾಗ ಅನುಮಾನ ಬಂದು ಕಿಟಕಿ ಬಾಗಿಲಿನಿಂದ ನೋಡಿದಾಗ ಮನೆಯ ಫ್ಯಾನ್ಗೆ ನೇಣು ಬಿಗಿದುಕೊಂಡಿರುವುದು ಗೊತ್ತಾಗಿದೆ.
ಇದಾದ ಬಳಿಕ ಮಾಹಿತಿ ತಿಳಿದು ಪೊಲೀಸರು ಸ್ಥಳಕ್ಕೆ ಬಂದು ಶವವನ್ನು ಖಮ್ಮಮ್ ಸರ್ಕಾರಿ ಆಸ್ಪತ್ರೆಗೆ ರವಾನಿಸಿದರು. ಕೆಲವು ದಿನಗಳಿಂದ ಶಿವಪ್ರಸಾದ್ ಗಂಭೀರ ತಲೆನೋವಿನಿಂದ ಬಳಲುತ್ತಿದ್ದ ಎಂದು ತಿಳಿದುಬಂದಿದೆ. ಅದನ್ನು ತಡೆಯಲಾಗದೇ ಮೊದಲೇ ಸಾವನ್ನು ಬಯಸಿದ್ದ. ಕೊನೆಗೂ ಆತ್ಮಹತ್ಯೆಗೆ ಶರಣಾಗಿರುವ ಆತ ಸಾವಿಗೂ ಮುನ್ನ ತನ್ನ ಫೋಟೋಗೆ ತಾನೇ ಪೂಜೆ ಮಾಡಿದ್ದಾನೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. (ಏಜೆನ್ಸೀಸ್)
ದೇಹದಲ್ಲಿ ಎಷ್ಟು ಮಚ್ಚೆಗಳಿವೆ? ತೆಲುಗಿನ ಮೊದಲ ಚಿತ್ರದಲ್ಲೇ ಕನ್ನಡತಿ ನೇಹಾ ಶೆಟ್ಟಿಗೆ ಮುಜುಗರ
ದಲಿತ ವ್ಯಕ್ತಿಯ ಶವಸಂಸ್ಕಾರಕ್ಕೆ ಅಡ್ಡಿ: ತುಮಕೂರಲ್ಲಿ ನಡೆದ ಅಮಾನವೀಯ ಘಟನೆ
ತಮ್ಮ ಮೊದಲ ಮನೆ ಮಾರಾಟ ಮಾಡಿದ ಅಮಿತಾಭ್ ಬಚ್ಚನ್ಗೆ ಸಿಕ್ಕ ಹಣದ ಮೊತ್ತ ಕೇಳಿದ್ರೆ ದಂಗಾಗ್ತಿರಾ..!