ಹೈದರಾಬಾದ್: ನಿನ್ನೆ (ಜುಲೈ 29) ಟಾಲಿವುಡ್ನಲ್ಲಿ ನಟ ರವಿತೇಜ ಅಭಿನಯದ “ರಾಮರಾವ್ ಆನ್ ಡ್ಯೂಟಿ” ಸಿನಿಮಾ ಬಿಡುಗಡೆಯಾಗಿದ್ದು, ಮಿಶ್ರ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಆದರೆ, ಈ ಒಂದು ವಿಚಾರದಿಂದ ರಾಮರಾವ್ ಆನ್ ಡ್ಯೂಟಿ ಸಿನಿಮಾ ಅಲ್ಲು ಅರ್ಜುನ್ ನಟನೆಯ ಪುಷ್ಪ ಸಿನಿಮಾವನ್ನು ಮುನ್ನಲೆಗೆ ತಂದಿದೆ.
ನಾಪತ್ತೆ ಆಗುವ ವ್ಯಕ್ತಿಗಳು ಮತ್ತು ರಕ್ತಚಂದನ ಕಳ್ಳಸಾಗಾಣೆ ಮಾಫಿಯಾ ಸುತ್ತ ರಾಮರಾವ್ ಆನ್ ಡ್ಯೂಟಿ ಸಿನಿಮಾ ಸುತ್ತುತ್ತದೆ. ಅಲ್ಲು ಅರ್ಜುನ್ ನಟನೆಯ ಪುಷ್ಪ ಸಿನಿಮಾ ಕೂಡ ರಕ್ತಚಂದನ ಕಳ್ಳಸಾಗಾಣೆಯನ್ನೇ ಕೇಂದ್ರೀಕರಿಸಿಕೊಂಡಿದೆ. ಮೊದಲ ಭಾಗ ಸೂಪರ್ ಹಿಟ್ ಆಗಿದ್ದು, ಎರಡನೇ ಭಾಗದ ಚಿತ್ರೀಕರಣ ಇನ್ನೇನು ಆರಂಭವಾಗಲಿದೆ.
ಅಲ್ಲು ಅರ್ಜುನ್ ಅವರು ರಕ್ತ ಚಂದನದ ರಾಶಿಯನ್ನು ಹೊಳೆಗೆ ದೂಡುವುದು ಮತ್ತು ಅದನ್ನು ಡ್ಯಾಮ್ನಲ್ಲಿ ಮತ್ತೆ ಸಂಗ್ರಹಿಸುವುದು ಪುಷ್ಪ ಚಿತ್ರದ ಪ್ರಮುಖ ದೃಶ್ಯಗಳಲ್ಲಿ ಒಂದು. ಆ ದೃಶ್ಯದಲ್ಲಿ ರಕ್ತ ಚಂದನ ಮರದ ತುಂಡುಗಳು ನದಿಯ ನೀರಿನಲ್ಲಿ ತೇಲುತ್ತವೆ. ಆದರೆ, ರಾಮರಾವ್ ಆನ್ ಡ್ಯೂಟಿ ಸಿನಿಮಾದಲ್ಲಿ ಒಂದು ದೃಶ್ಯವಿದೆ. ಅದರಲ್ಲಿ ನಿರ್ದೇಶಕರು ಒಂದು ವಿಚಾರವನ್ನು ಒತ್ತಿ ಹೇಳಿದ್ದಾರೆ. ಅದೇನೆಂದರೆ, ರಕ್ತ ಚಂದನದ ಸಾಂದ್ರತೆ ಹೆಚ್ಚು ಇರುವುದರಿಂದ ಅವುಗಳು ನೀರಿನಲ್ಲಿ ತೇಲುವುದಿಲ್ಲ. ನೀರಿನಲ್ಲಿ ಮುಳುಗುತ್ತವೆ. ಹೀಗಾಗಿ ಕಳ್ಳ ಸಾಗಾಣೆಗಾರರು ನೀರಿನ ಒಳಗೆ ಬಚ್ಚಿಡುತ್ತಾರೆ ಎಂದು ವಿವರಿಸಿದ್ದಾರೆ.
ವಾಸ್ತವವಾಗಿ ಇದು ಸತ್ಯ. ಏಕೆಂದರೆ, ರಕ್ತಚಂದನ ನೀರಿನ ಮೇಲೆ ತೇಲುವುದಿಲ್ಲ. ಮಾಸ್ಟರ್ ಮೈಂಡ್ ಸುಕುಮಾರ್ ಪುಷ್ಪ ಸಿನಿಮಾದಲ್ಲಿ ಈ ಸಣ್ಣದೊಂದು ಲಾಜಿಕ್ ಮಿಸ್ ಮಾಡಿಕೊಂಡಿದ್ದಾರಂತೆ. ಅದೇನೇ ಇರಲಿ, ಪುಷ್ಪ ಚಿತ್ರ ಈಗಾಗಲೇ ಬ್ಲಾಕ್ ಬಸ್ಟರ್ ಆಗಿರುವಾಗ ಸ್ವಲ್ಪ ಲಾಜಿಕ್ ಮಿಸ್ ಮಾಡಿಕೊಂಡರೂ ನೋವಾಗುವುದಿಲ್ಲ ಎಂಬುದು ಅಭಿಮಾನಿಗಳ ಮಾತಾಗಿದೆ. (ಏಜೆನ್ಸೀಸ್)
ಮಾಜಿ ಸಚಿವ ಪಾರ್ಥ ಚಟರ್ಜಿ-ನಟಿ ಅರ್ಪಿತಾ ನಡುವೆ ಲೈಂಗಿಕ ಸಂಬಂಧ? ಸುಳಿವು ಕೊಟ್ಟ ಲೈಂಗಿಕ ಆಟಿಕೆಗಳು
ಟಿವಿ ನೋಡುತ್ತಾ ಮ್ಯಾಗಿ ಮಾಡಿ ತಿಂದ ಮಹಿಳೆ ದುರಂತ ಸಾವು! ಇದರ ಮಧ್ಯೆ ನಡೆದಿದ್ದು ಮಹಾ ಎಡವಟ್ಟು
ಚಿಕ್ಕ ವಯಸ್ಸಿನಲ್ಲೇ ಪ್ರೀತಿಸಿ 18 ವರ್ಷ ತುಂಬಿದ ಬಳಿಕ ಮದ್ವೆಯಾದ ಯುವತಿಯ ಬದುಕು ದುರಂತ ಅಂತ್ಯ!