ಇಸ್ಲಮಾಬಾದ್: ಕ್ರೀಡಾ ಪ್ರೇಮಿಗಳು ಎದುರು ನೋಡುತ್ತಿರುವ ಟಿ20 ವಿಶ್ವಕಪ್ ಟೂರ್ನಿ ಇನ್ನೇನು ಶುರುವಾಗಬೇಕಿದೆ. ಅದರಲ್ಲೂ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ಮೇಲೆ ಜನರ ಗಮನ ಕೇಂದ್ರಿಕೃತವಾಗಿದೆ.
ಇಂಡೋ-ಪಾಕ್ ಕ್ರಿಕೆಟ್ ಕದನ ಕುರಿತು ಸ್ಪೋಟಕ ಮಾಹಿತಿಯೊಂದು ಹೊರಬಿದ್ದಿದ್ದು, ವಿಶ್ವಕಪ್ನಲ್ಲಿ ಟೀಮ್ ಇಂಡಿಯಾವನ್ನು ಪಾಕ್ ಸೋಲಿಸಿದರೆ, ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಮುಖ್ಯಸ್ಥ ರಮೀಜ್ ರಾಜಾಗೆ ಬಂಪರ್ ಆಫರ್ ದೊರೆಯಲಿದೆ.
ಹೌದು, ಪಾಕ್ನ ಬಿಲಿಯನೇರ್ ಒಬ್ಬರು ಬಂಪರ್ ಆಫರ್ ಪ್ರಸ್ತಾವನ್ನು ರಮೀಜ್ ರಾಜಾ ಅವರ ಮುಂದಿಟ್ಟಿದ್ದು, ಪಾಕ್ ಏನಾದರೂ ಭಾರತದ ವಿರುದ್ಧ ಗೆದ್ದರೆ ಸಹಿ ಮಾಡಿ ಬ್ಲ್ಯಾಂಕ್ ಚೆಕ್ ಅನ್ನು ಕೊಡಲಿದ್ದಾರಂತೆ.
ಅಕ್ಟೋಬರ್ 24ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಮತ್ತು ಭಾರತ ಮುಖಾಮುಖಿ ಆಗಲಿವೆ. ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ. ಇದುವರೆಗೆ ಭಾರತ ಮತ್ತು ಪಾಕ್ ಟಿ20 ವಿಶ್ವಕಪ್ನಲ್ಲಿ 8 ಬಾರಿ ಮುಖಾಮುಖಿಯಾಗಿದೆ. ಅದರಲ್ಲಿ ಭಾರತ 7 ಬಾರಿ ವಿಜಯೋತ್ಸವ ಆಚರಿಸಿದೆ, ಆದರೆ, ಪಾಕ್ ಮಾತ್ರ ಕೇವಲ ಒಂದಕ್ಕೆ ತೃಪ್ತಿಪಟ್ಟುಕೊಂಡಿದೆ.
ಇತ್ತೀಚೆಗೆ ಮಾಧ್ಯಮವೊಂದರಲ್ಲಿ ಮಾತನಾಡಿದ್ದ ರಮೀಜ್ ರಾಜಾ, ಪಾಕಿಸ್ತಾನ ಕ್ರಿಕೆಟ್ ಅನ್ನು ವಿಶ್ವ ಕ್ರಿಕೆಟ್ನಲ್ಲಿ ಪ್ರಬಲ ಶಕ್ತಿಯಾಗಿಸಲು ಬದ್ಧರಾಗಿರುವುದಾಗಿ ಹೇಳಿಕೊಂಡಿದ್ದಾರೆ. ಐಸಿಸಿ ಮತ್ತು ಬಿಸಿಸಿಐ ಅನ್ನು ಅವಲಂಬಿಸುವುದಕ್ಕಿಂತ ಪಿಸಿಬಿ ಸ್ವಾವಲಂಬಿಯಾಗಬೇಕೆಂದು ಬಯಸುತ್ತೇನೆ ಎಂದಿದ್ದಾರೆ. (ಏಜೆನ್ಸೀಸ್)
2 ವರ್ಷದ ಮಗನನ್ನೇ ಕೊಲೆ ಮಾಡಿದ ಮಾಜಿ ಪೋರ್ನ್ ಸ್ಟಾರ್: ಹತ್ಯೆ ಹಿಂದಿನ ಭಯಾನಕ ಕಾರಣವಿದು!
ಸಮಂತಾರ ಈ ಫೋಟೋ ಬಳಸಿದವರಿಗೆ ಸಂಕಷ್ಟ: ನಟಿಯ ನಿರ್ಧಾರದಿಂದ ಕೆಲವರಿಗೆ ಸಮಸ್ಯೆ ಖಂಡಿತ
ಮಾಯಾಂಗನೆಯ ಒಂದೇ ಒಂದು ಮಾತಿಗೆ ಮರುಳಾಗಿ 1.20 ಕೋಟಿ ರೂ. ಕಳ್ಕೊಂಡವನ ವ್ಯಥೆ ಇದು..!
ಶೂಟಿಂಗ್ ಸೆಟ್ನಲ್ಲಿ ಗಳಗಳನೇ ಅತ್ತ ಸಮಂತಾ! ಸ್ಯಾಮ್ ಕಣ್ಣೀರು ನೋಡಿ ಚಿತ್ರತಂಡ ಹೇಳಿದ್ದು ಹೀಗೆ…